Operation Sindoor | ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಸಮ್ಮತಿ: ಟ್ರಂಪ್‌ ಘೋಷಣೆ

Update: 2025-05-10 03:50 GMT
Live Updates - Page 3
2025-05-10 04:53 GMT

ದೆಹಲಿ ವಿಮಾನ ನಿಲ್ದಾಣದ ಪ್ರಕಟನೆ

ದೆಹಲಿ ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಪ್ರಸ್ತುತ ಸಾಮಾನ್ಯವಾಗಿದ್ದರೂ, ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ಮಧ್ಯೆ ವಾಯುಪ್ರದೇಶದ ಪರಿಸ್ಥಿತಿಗಳು ಬದಲಾಗುತ್ತಿರುವುದರಿಂದ ಕೆಲವು ವಿಮಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ರಾಷ್ಟ್ರಗಳ ನಡುವಿನ ಮಿಲಿಟರಿ ಸಂಘರ್ಷ ತೀವ್ರಗೊಂಡಂತೆ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (IGIA) ನಿರ್ವಹಿಸುವ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (DIAL), ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳು ಪ್ರಸ್ತುತ ಸಾಮಾನ್ಯವಾಗಿವೆ. ಆದರೂ, ವಾಯುಪ್ರದೇಶದ ಪರಿಸ್ಥಿತಿಗಳು ಮತ್ತು ಕೆಲವೊಂದು ಭದ್ರತಾ ಕ್ರಮಗಳಿಂದಾಗಿ, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋದ ಆದೇಶಗಳ ಪ್ರಕಾರ, ಕೆಲವು ವಿಮಾನ ವೇಳಾಪಟ್ಟಿಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಭದ್ರತಾ ಚೆಕ್‌ಪಾಯಿಂಟ್ ಪ್ರಕ್ರಿಯೆಯ ಸಮಯವು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ತನ್ನ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ. 

ಭದ್ರತಾ ತಪಾಸಣೆಗಳಲ್ಲಿ ಸಂಭವನೀಯ ವಿಳಂಬವನ್ನು ನಿಭಾಯಿಸಲು ಪ್ರಯಾಣಿಕರು ಬೇಗನೆ ಬರುವಂತೆ ಸೂಚಿಸಲಾಗಿದೆ. ಸುಗಮ ಸೌಲಭ್ಯಕ್ಕಾಗಿ ವಿಮಾನಯಾನ ಸಂಸ್ಥೆ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಮನವಿ ಮಾಡಿದೆ.  ಶುಕ್ರವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಹೊರಡುವ 138 ವಿಮಾನಗಳನ್ನು ವಿವಿಧ ವಿಮಾನಯಾನ ಸಂಸ್ಥೆಗಳು ರದ್ದುಗೊಳಿಸಿವೆ.

2025-05-10 04:20 GMT

ವೈಜ್ಞಾನಿಕ, ತಾಂತ್ರಿಕ ಸ್ಥಾವರಗಳ ಭದ್ರತೆ ಪರಿಶೀಲಿಸಿದ ಸಚಿವ ಜಿತೇಂದ್ರ ಸಿಂಗ್

ದೇಶಾದ್ಯಂತ ವೈಜ್ಞಾನಿಕ ಮತ್ತು ತಾಂತ್ರಿಕ ಸ್ಥಾವರಗಳ ಭದ್ರತೆಗೆ ಸಂಬಂಧಿಸಿದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಹಿರಿಯ ಅಧಿಕಾರಿಗಳು ಮತ್ತು ವಿವಿಧ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು.

ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಸಂಘರ್ಷ ತಾರಕಕ್ಕೇರಿರುವ ಕಾರಣ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಬೇಕು. ಸಂಭವನೀಯ ದಾಳಿ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ಚರ್ಚೆ ನಡೆಸಿದ್ದಾರೆ.

2025-05-10 04:12 GMT

ಭಾರತದ S-400 ವಾಯು ರಕ್ಷಣಾ ವ್ಯವಸ್ಥೆಯ ನಾಶದ ಹೇಳಿಕೆ ಸುಳ್ಳು ಎಂದು ಭಾರತ ಹೇಳಿದೆ

JF-17 ಯುದ್ಧ ವಿಮಾನಗಳಿಂದ ಹಾರಿಸಲಾದ ಹೈಪರ್‌ಸಾನಿಕ್ ಕ್ಷಿಪಣಿಗಳು ಆಡಂಪುರದಲ್ಲಿ ಭಾರತದ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿವೆ ಎಂಬ ಪಾಕಿಸ್ತಾನದ ಹೇಳಿಕೆ "ಸುಳ್ಳು" ಎಂದು ಭಾರತೀಯ ಮಿಲಿಟರಿ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.

ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ PTV ಈ ಹಿಂದೆ ಪಾಕಿಸ್ತಾನ ವಾಯುಪಡೆಯ ಹೈಪರ್‌ಸಾನಿಕ್ ಕ್ಷಿಪಣಿಗಳು ಆಡಂಪುರದಲ್ಲಿ S-400 ವ್ಯವಸ್ಥೆಯನ್ನು ನಾಶಪಡಿಸಿವೆ ಎಂದು ವರದಿ ಮಾಡಿತ್ತು.

ಪಾಕಿಸ್ತಾನದ JF-17 ಥಂಡರ್ ಜೆಟ್ ಭಾರತದ ಪಂಜಾಬ್‌ನಲ್ಲಿ ಭಾರತದ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿದೆ ಎಂದು ಚೀನಾದ ಕ್ಸಿನ್ಹುವಾ ಸುದ್ದಿ ಸಂಸ್ಥೆ ಕೂಡ ಹೇಳಿದೆ ಎಂದು ಚೀನಾದ ಸುದ್ದಿ ಸಂಸ್ಥೆ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಈ ವರದಿಗಳು ಸುಳ್ಳು ಎಂದು ಭಾರತೀಯ ವಾಯುಪಡೆಯ ವಕ್ತಾರರು ತಿಳಿಸಿದ್ದಾರೆ.

2025-05-10 04:03 GMT

ಹರಿಯಾಣದಲ್ಲಿ ಕ್ಷಿಪಣಿ ಅವಶೇಷಗಳು?



2025-05-10 04:03 GMT

ಗುಜರಾತ್: ಗಡಿ ಪ್ರದೇಶಗಳಿಗೆ ಧಾವಿಸಿದ ವೈದ್ಯರು

ಗುಜರಾತ್ ಆರೋಗ್ಯ ಇಲಾಖೆಯು ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ 154 ವೈದ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಸೂಚನೆ ಬರುವವರೆಗೆ ಗಡಿ ಜಿಲ್ಲೆಗಳಿಗೆ ವರ್ಗಾಯಿಸಿದೆ. ಈ ಜಿಲ್ಲೆಗಳಲ್ಲಿ ಜಾಮ್‌ನಗರ, ಪೋರಬಂದರ್, ದೇವಭೂಮಿ ದ್ವಾರಕ, ಬನಸ್ಕಾಂತ, ಪಠಾಣ್ ಮತ್ತು ಕಚ್ ಸೇರಿವೆ.

2025-05-10 04:00 GMT

ಜಲಂಧರ್‌ನಲ್ಲಿ ಭೀತಿ

ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ಮಧ್ಯೆ ಶನಿವಾರ ಮುಂಜಾನೆ ಪಂಜಾಬ್‌ನ ಜಲಂಧರ್ ಜಿಲ್ಲೆಯ ಕಂಗನಿವಾಲ್ ಗ್ರಾಮದ ವಸತಿ ಪ್ರದೇಶದಲ್ಲಿ ಕ್ಷಿಪಣಿ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಲ್ಲಿ ವಲಸೆ ಕಾರ್ಮಿಕನೊಬ್ಬ ಗಾಯಗೊಂಡಿದ್ದಾನೆ ಎಂದು ಸ್ಥಳೀಯ ನಿವಾಸಿಗಳು ಹೇಳಿದರೆ, ಆ ಪ್ರದೇಶದಲ್ಲಿ ಕೆಲವು ಮನೆಗಳಿಗೂ ಹಾನಿಯಾಗಿದೆ.

"ನಾನು ಕಿಟಕಿಯ ಬಳಿ ನಿಂತಿದ್ದಾಗ ಬೆಳಗಿನ ಜಾವ 1.30 ರ ಸುಮಾರಿಗೆ ಯಾವುದೋ ವಸ್ತು ನೀರಿನ ಟ್ಯಾಂಕ್‌ಗೆ (ಮನೆಯ) ಡಿಕ್ಕಿ ಹೊಡೆದು, ಇಳಿಯುವ ಮೊದಲು 4-5 ಮನೆಗಳ ಗಾಜುಗಳು ಒಡೆದವು" ಎಂದು ಪ್ರದೇಶದ ಮಹಿಳೆಯೊಬ್ಬರು ಹೇಳಿದರು.

ಗಾಯಗೊಂಡ ಕಾರ್ಮಿಕನ್ನು  ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದರು.

"ನಮ್ಮ ಮನೆಯ ನೀರಿನ ಟ್ಯಾಂಕ್ ಹಾನಿಗೊಳಗಾಗಿದೆ, ಅನೇಕ ಕಿಟಕಿ ಗಾಜುಗಳು ಒಡೆದುಹೋಗಿವೆ. ಸುತ್ತಲೂ ಹೊಗೆ ಇತ್ತು" ಎಂದು ಸ್ಥಳೀಯ ನಿವಾಸಿ ಮುಸ್ಕಾನ್ ಕೂಡ ಹೇಳಿದ್ದಾರೆ. ರಾತ್ರಿಯಲ್ಲಿ ದೊಡ್ಡ ಸ್ಫೋಟ ಸಂಭವಿಸಿದ್ದು, ಹಲವಾರು ಜನರು ತಮ್ಮ ಮನೆಗಳಿಂದ ಹೊರಬರಬೇಕಾಯಿತು.

"ಒಂದು ಕಾರು ಹಾನಿಗೊಳಗಾಗಿದೆ... ನಾವೆಲ್ಲರೂ ಭಯಭೀತರಾಗಿದ್ದೇವೆ" ಎಂದು ಅವರು ಹೇಳಿದರು.

ತನ್ನ ಅನುಭವವನ್ನು ಹಂಚಿಕೊಳ್ಳುತ್ತಾ, ಸುರ್ಜಿತ್ ಕೌರ್, ಆಕಾಶದಲ್ಲಿ ಕೆಂಪು ಬಣ್ಣದ ಬೆಳಕು ಮಿನುಗಿತು ಮತ್ತು ನಂತರ ದೊಡ್ಡ ಸ್ಫೋಟ ಸಂಭವಿಸಿತು ಎಂದು ಹೇಳಿದರು.

2025-05-10 04:00 GMT

26 ಭಾರತೀಯ ಸ್ಥಳಗಳಲ್ಲಿ ಡ್ರೋನ್‌ ದಾಳಿ

ಭಾರತದೊಂದಿಗಿನ ಸೇನಾ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದ ಪಾಕಿಸ್ತಾನ ಸೇನೆಯು, ಎರಡನೇ ರಾತ್ರಿಯೂ ಭಾರತದ ಪಶ್ಚಿಮ ಗಡಿಯುದ್ದಕ್ಕೂ ವ್ಯಾಪಕ ದಾಳಿಯನ್ನು ನಡೆಸಿತು. ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ರಾಜಸ್ಥಾನದ ಅಂತರರಾಷ್ಟ್ರೀಯ ಗಡಿ ಮತ್ತು ಗಡಿರೇಖೆ (LoC) ಯದ್ದಕ್ಕೂ ಡ್ರೋನ್ ದಾಳಿ ಮತ್ತು ಭಾರೀ ಫಿರಂಗಿ ದಾಳಿಗಳು ನಡೆದಿವೆ. ಒಟ್ಟು 26 ಭಾರತೀಯ ಸ್ಥಳಗಳಲ್ಲಿ ಡ್ರೋನ್‌ಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಿಂದ ಗುಜರಾತಿನ ಭುಜ್‌ವರೆಗಿನ ವಿಶಾಲ ವ್ಯಾಪ್ತಿಯಲ್ಲಿ ಈ ದಾಳಿಗಳು ನಡೆದಿವೆ. ವರದಿಯಾದ 26 ಸ್ಥಳಗಳಲ್ಲಿ ಕಂಡುಬಂದ ಡ್ರೋನ್‌ಗಳಲ್ಲಿ ಕೆಲವು ಸಶಸ್ತ್ರವಾಗಿದ್ದು, ಸೈನಿಕ ನೆಲೆಗಳು ಮತ್ತು ನಾಗರಿಕ ಪ್ರದೇಶಗಳಿಗೆ ಸಂಭಾವ್ಯ ಅಪಾಯವನ್ನುಂಟುಮಾಡಿದ್ದವು. ದಾಳಿಯ ಯತ್ನದಲ್ಲಿ 300-400 ಡ್ರೋನ್‌ಗಳು ಮತ್ತು ಇತರ ಹಾರುವ ಸಾಧನಗಳನ್ನು ಬಳಸಲಾಗಿದೆ ಎಂದು ಭಾರತ ತಿಳಿಸಿದೆ. ಇದು ಭಾರತದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪರೀಕ್ಷಿಸುವ ಮತ್ತು ಗುಪ್ತಚರ ಮಾಹಿತಿ ಸಂಗ್ರಹಿಸುವ ಉದ್ದೇಶವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

2025-05-10 03:55 GMT

ಗಡಿ ಭಾಗದ ಜಿಲ್ಲೆಗಳಿಗೆ ವೈದ್ಯರ ವರ್ಗಾವಣೆ

ಗುಜರಾತ್ ಸರ್ಕಾರ 154 ಮಂದಿ ವೈದ್ಯರನ್ನು ಗಡಿ ಜಿಲ್ಲೆಗಳಿಗೆ ವರ್ಗಾವಣೆ ಮಾಡಿದೆ. ಜಾಮ್ ನಗರ, ಪೋರಬಂದರ್, ದೇವಭೂಮಿ, ದ್ವಾರಕ, ಬನಸ್ಕಾಂತ ಪಠಾಣ್ ಹಾಗೂ ಕುಚ್ ಪ್ರದೇಶದ ಸರ್ಕಾರಿ ಆಸ್ಪತ್ರೆ ಗಳಿಗೆ ವರ್ಗಾವಣೆ ಮಾಡಲಾಗಿದೆ.

Tags:    

Similar News