Maha kumbh 2025: ಮಹಾಕುಂಭದಲ್ಲಿ ಯಾವ ರೈಲಿನ ಸಂಚಾರವೂ ರದ್ದಾಗಿಲ್ಲ: ಆತಂಕ ಬೇಡ

Mahakumbh 2025: ನಾವು ಯಾವುದೇ ರೈಲಿನ ಕಾರ್ಯಾಚರಣೆಯನ್ನೂ ಸ್ಥಗಿತಗೊಳಿಸಿಲ್ಲ, ಯಾವ ರೈಲೂ ರದ್ದಾಗಿಲ್ಲ. ವದಂತಿಗಳಿಗೆ ಕಿವಿಗೊಡದಿರಿ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.;

Update: 2025-01-29 08:46 GMT
Maha kumbh 2025: ಮಹಾಕುಂಭದಲ್ಲಿ ಯಾವ ರೈಲಿನ ಸಂಚಾರವೂ ರದ್ದಾಗಿಲ್ಲ: ಆತಂಕ ಬೇಡ
ಮಹಾಕುಂಭ ಮೇಳದ ದೃಶ್ಯ.

ಮಹಾಕುಂಭಮೇಳದಲ್ಲಿ ಕಾಲ್ತುಳಿತ ದುರಂತ ಸಂಭವಿಸಿರುವ ಕಾರಣ ಪ್ರಯಾಗ್‌ರಾಜ್‌ಗೆ ಹೋಗುವ ಮತ್ತು ಬರುವ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂಬ ವದಂತಿಯನ್ನು ರೈಲ್ವೆ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ರೈಲು ಸಂಚಾರ ಬಂದ್‌ ಆಗಿದೆ ಎಂಬ ಸುದ್ದಿ ಕೇಳಿದ ಕಾರಣ ಯಾತ್ರಿಕರು ಹಾಗೂ ಅವರ ಕುಟುಂಬಸ್ಥರು ಆತಂಕ್ಕೆ ಬಿದ್ದಿದ್ದರು. ಅಂಥ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನಾವು ಯಾವುದೇ ರೈಲಿನ ಕಾರ್ಯಾಚರಣೆಯನ್ನೂ ಸ್ಥಗಿತಗೊಳಿಸಿಲ್ಲ, ಯಾವ ರೈಲೂ ರದ್ದಾಗಿಲ್ಲ. ವದಂತಿಗಳಿಗೆ ಕಿವಿಗೊಡದಿರಿ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಪ್ರಯಾಗ್‌ರಾಜ್‌ಗೆ ಭಕ್ತರ ದಂಡೇ ಹರಿದುಬರುತ್ತಿರುವ ಕಾರಣ ಹಾಗೂ ಪುಣ್ಯ ಸ್ನಾನ ಮಾಡಿ ವಾಪಸ್ ಹೋಗುವವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನಾವು ಹೆಚ್ಚುವರಿಯಾಗಿ ಖಾಲಿ ರೇಕುಗಳನ್ನು ಕಳುಹಿಸಿಕೊಡುತ್ತಿದ್ದೇವೆ. ಆ ಮೂಲಕ ಜನದಟ್ಟಣೆಯನ್ನು ಕಡಿಮೆ ಮಾಡುವುದೇ ನಮ್ಮ ಉದ್ದೇಶ ಎಂದು ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರ ವಿಭಾಗದ ಕಾರ್ಯಕಾರಿ ನಿರ್ದೇಶಕ ದಿಲೀಪ್ ಕುಮಾರ್ ತಿಳಿಸಿದ್ದಾರೆ.

24 ಗಂಟೆ ಬಸ್ಸು, ಕಾರುಗಳಿಗೆ ನಿರ್ಬಂಧ

ಕಾಲ್ತುಳಿತ ಹಿನ್ನೆಲೆಯಲ್ಲಿ ಭಕ್ತಾದಿಗಳಿರುವ ಕಾರುಗಳು ಹಾಗೂ ಬಸ್ಸುಗಳನ್ನು ಪ್ರಯಾಗ್‌ರಾಜ್‌ನ ಗಡಿಯಲ್ಲೇ ತಡೆಯಲಾಗಿದ್ದು, 24 ಗಂಟೆಗಳ ಕಾಲ ಒಳಗೆ ಬರಲು ನಿರ್ಬಂಧ ವಿಧಿಸಲಾಗಿದೆ. ಭಾರೀ ಜನಸಂದಣಿ ಯಿರುವ ಕಾರಣ ಮುಂದಿನ 24 ಗಂಟೆಗಳ ಕಾಲ ಮಹಾಕುಂಭಮೇಳಕ್ಕೆ ಆಗಮಿಸದಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. 

Tags:    

Similar News