ಸುರ್ಯ ದೇವಸ್ಥಾನಕ್ಕೆ ಯಶ್‌ ದಂಪತಿ ಭೇಟಿ; ರೀಲ್, ಕುಟುಂಬದ ಗೊಂಬೆ ನೀಡಿ ಪೂಜೆ

ನಟ ರಾಕಿಂಗ್ ಸ್ಟಾರ್ ಯಶ್‌ 'ಟಾಕ್ಸಿಕ್' ಚಿತ್ರತಂಡದ ಜೊತೆ ಧರ್ಮಸ್ಥಳ ಹಾಗೂ ಬೆಳ್ತಂಗಡಿಯ ಸುರ್ಯ ಸದಾಶಿವ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಜೊತೆ ಸೇರಿ ಮಣ್ಣಿನ ಗೊಂಬೆ ಹರಕೆ ಕ್ಷೇತ್ರದಲ್ಲಿ ಹರಕೆ ತೀರಿಸಿದ್ದಾರೆ.

Update: 2024-08-06 11:05 GMT
ದರ್ಶನ್‌ ದಂಪತಿ
Click the Play button to listen to article

ನಟ  ರಾಕಿಂಗ್ ಸ್ಟಾರ್ ಯಶ್‌  'ಟಾಕ್ಸಿಕ್' ಚಿತ್ರತಂಡದ ಜೊತೆ ಧರ್ಮಸ್ಥಳ ಹಾಗೂ ಬೆಳ್ತಂಗಡಿಯ ಸುರ್ಯ ಸದಾಶಿವ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಜೊತೆ ಸೇರಿ ಮಣ್ಣಿನ ಗೊಂಬೆ ಹರಕೆ ಕ್ಷೇತ್ರದಲ್ಲಿ ಹರಕೆ ತೀರಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುರ್ಯ(ಊರಿನ ಹೆಸರು)ದ ಶ್ರೀ ಸದಾಶಿವ ದೇವಸ್ಥಾನ ಮಣ್ಣಿನ ಹರಕೆಗೆ ಬಹಳ ಪ್ರಸಿದ್ಧಿ. ಜನರು ತಮ್ಮ ಕಷ್ಟ ಪರಿಹಾರಕ್ಕಾಗಿ ಮಣ್ಣಿನ ಹರಕೆ ಒಪ್ಪಿಸುವುದೇ ಈ ದೇವಸ್ಥಾನದಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಅದರಂತೆ ನಟ ಯಶ್ ಸಿನಿಮಾ ರೀಲ್ ಹಾಗೂ ತಮ್ಮ ಕುಟುಂಬದ ಮಣ್ಣಿನ ಗೊಂಬೆಗಳನ್ನು ನೀಡಿ ಹರಕೆ ಮಾಡಿಕೊಂಡಿದ್ದಾರೆ. ಆವೆ ಮಣ್ಣಿನಿಂದ ಗೊಂಬೆಗಳನ್ನು ಮಾಡಿ ಅದನ್ನು ಕುಲುಮೆಯಲ್ಲಿ ಬೇಯಿಸಲಾಗುತ್ತದೆ. 'ಟಾಕ್ಸಿಕ್' ಸಿನಿಮಾ ಯಶಸ್ಸಿಗಾಗಿ ರೀಲ್ ಹಾಗೂ ತಮ್ಮ ಕುಟುಂಬದ ಆರೋಗ್ಯವೃದ್ಧಿಗಾಗಿ ಗೊಂಬೆಗಳನ್ನು ಅರ್ಪಿಸಿ ಯಶ್ ಸುರ್ಯ ಶ್ರೀ ಸದಾಶಿವ ದೇವಸ್ಥಾನ ಹರಕೆ ಕಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಯಶ್ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೊ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನದ ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಆಗಿದ್ದಾರೆ. ಪತ್ನಿ ಹಾಗೂ ಮಕ್ಕಳ ಜೊತೆ ಯಶ್ ಕಾಣಿಸಿಕೊಂಡಿದ್ದಾರೆ. ಇನ್ನು 'ಟಾಕ್ಸಿಕ್' ಸಿನಿಮಾ ನಿರ್ಮಾಪಕ ವೆಂಕಟ್ ಕೋನಂಕಿ ಕೂಡ ಫ್ಯಾಮಿಲಿ ಸಮೇತ ಸಾಥ್ ನೀಡಿದ್ದಾರೆ.


Tags:    

Similar News