́ರಂಗನಾಯಕ ನನ್ನ ಸಿನಿಮಾವಲ್ಲ. ಕ್ಷಮೆ ಇರಲಿ’ ಎಂದ ಜಗ್ಗೇಶ್‌: ವಿಡಿಯೋ ವೈರಲ್‌

“ರಂಗನಾಯಕ ನನ್ನ ಸಿನಿಮಾವಲ್ಲ. ಕ್ಷಮೆ ಇರಲಿ’ ಎಂದು ನಟ ಜಗ್ಗೇಶ್‌ ರಂಗನಾಯಕ ಸಿನಿಮಾದ ಸೋಲಿನ ಕುರಿತು ಫೇಸ್‌ಬುಕ್‌ ಲೈವ್‌ನಲ್ಲಿ ತಿಳಿಸಿದ್ದಾರೆ.

Update: 2024-03-19 10:21 GMT
ಜಗ್ಗೇಶ್‌ ತಮ್ಮ ಹುಟ್ಟುಹಬ್ಬವನ್ನು ಮಂತ್ರಾಲಯದಲ್ಲಿ ಆಚರಿಕೊಂಡಿದ್ದಾರೆ.
Click the Play button to listen to article

ಬೆಂಗಳೂರು: “ರಂಗನಾಯಕ ನನ್ನ ಸಿನಿಮಾವಲ್ಲ. ಕ್ಷಮೆ ಇರಲಿ’ ಎಂದು ನಟ ಜಗ್ಗೇಶ್‌ ರಂಗನಾಯಕ ಸಿನಿಮಾದ ಸೋಲಿನ ಕುರಿತು ಫೇಸ್‌ಬುಕ್‌ ಲೈವ್‌ನಲ್ಲಿ ತಿಳಿಸಿದ್ದಾರೆ.

ಮಠ, ಎದ್ದೇಳು ಮಂಜುನಾಥ ಬಳಿಕ ನಿರ್ದೇಶಕ ಗುರುಪ್ರಸಾದ್‌ ಮತ್ತು ನಟ ಜಗ್ಗೇಶ್‌ ಕಾಂಬಿನೇಷನ್‌ನಲ್ಲಿ ರಂಗನಾಯಕ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರವನ್ನು ನೋಡುವುದೇ ಕಷ್ಟ ಎಂಬ ಅಭಿಪ್ರಾಯವನ್ನು ಪ್ರೇಕ್ಷಕರು ವ್ಯಕ್ತಪಡಿಸಿದ್ದರು.

ಭಾನುವಾರ ಮಾರ್ಚ್‌ 17ರಂದು ಜಗ್ಗೇಶ್‌ ಹುಟ್ಟುಹಬ್ಬ. ಈ ಸಮಯದಲ್ಲಿ ಮಂತ್ರಾಲಯದಲ್ಲಿದ್ದ ಜಗ್ಗೇಶ್‌ ಅಲ್ಲಿಂದಲೇ ಲೈವ್‌ಗೆ ಬಂದಿದ್ದರು. ಈ ಸಮಯದಲ್ಲಿ ರಂಗನಾಯಕ ಸಿನಿಮಾದ ಸೋಲಿನ ಕುರಿತು ಮಾತನಾಡಿದ್ದಾರೆ. "ಮೊನ್ನೆ ಒಂದು ಚಿತ್ರ ಮಾಡಿದೆ. ಎಲ್ಲರಿಗೂ ನೋವಾಗಿದೆ. ಅದರಲ್ಲಿ ನನ್ನ ತಪ್ಪಿಲ್ಲ. ನನಗೆ ನಂಬಿಕೆ ಜಾಸ್ತಿ, ಶರಣಾಗತರಾಗಿ ಸಹಕಾರ ನೀಡಿ ಎಂದು ಯಾರಾದರೂ ನನ್ನಲ್ಲಿ ಕೇಳಿದರೆ ನಾನು ನಂಬಿಬಿಡುತ್ತೇನೆ. ಆ ಚಿತ್ರ ನನ್ನದಲ್ಲ. ನಿರ್ದೇಶಕನನ್ನು ನಂಬಿ ನಾನು ಕೆಲಸ ಕೊಟ್ಟಾಗ ಆತನ ಆಸೆಯಂತೆ ನನ್ನ ಕರ್ತವ್ಯ ಮಾಡಿರುವೆ" ಎಂದು ಅವರು ಹೇಳಿದ್ದಾರೆ.

"ಯಾರದ್ದೋ ಅಪರಾಧಕ್ಕಾಗಿ ನನ್ನ ಮೇಲೆ ಕೋಪ ಮಾಡಿಕೊಳ್ಳಬೇಡಿ. ಸಣ್ಣಪುಟ್ಟ ಲೋಪದೋಷಗಳಿದ್ದಾಗ ಕ್ಷಮೆ ಇರಲಿ. ಪ್ರೀಮಿಯರ್‌ ಪದ್ಮಿನಿಯಂತಹ ಒಳ್ಳೊಳ್ಳೆಯ ಸಿನಿಮಾ ಕೊಟ್ಟಿದ್ದೇನೆ. ಕಾಳಿದಾಸ ಕನ್ನಡ ಮೇಸ್ಟ್ರು ಮಾಡಿದ್ದೀನಿ. ನಿರ್ದೇಶಕ ಹೇಳಿದಂತೆ ನಟಿಸಿದ್ದೇನೆ. ನನಗೂ ಅದಕ್ಕೂ ಸಂಬಂಧವಿಲ್ಲ" ಎಂದು ಜಗ್ಗೇಶ್‌ ಹೇಳಿದ್ದಾರೆ.

Full View

ಸದ್ಯ ಜಗ್ಗೇಶ್‌ ಅವರ ಈ ಹೇಳಿಕೆ ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ. 

Tags:    

Similar News