Kolkata rape murder| ಕಿರಿಯ ವೈದ್ಯರಿಂದ ಮುಖ್ಯ ಕಾರ್ಯದರ್ಶಿಗೆ ಪತ್ರ

Update: 2024-09-18 08:33 GMT

ಕೋಲ್ಕತ್ತಾ: ಆರೋಗ್ಯ ಇಲಾಖೆಯ ಪ್ರಧಾನ ಕಚೇರಿ ಎದುರು ನಡೆಸುತ್ತಿರುವ ಧರಣಿಯನ್ನು ಹಿಂಪಡೆಯಲು ಆಸ್ಪತ್ರೆಗಳಲ್ಲಿ ಭದ್ರತೆ ಸೇರಿದಂತೆ ಇತ್ಯರ್ಥವಾಗದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರಿಗೆ ಕಿರಿಯ ವೈದ್ಯರು ಬುಧವಾರ ಪತ್ರ ಬರೆದಿದ್ದಾರೆ. 

ಸರ್ಕಾರಿ ಆಸ್ಪತ್ರೆ ಆವರಣದೊಳಗೆ ವೈದ್ಯ ಸಿಬ್ಬಂದಿಯ ಸುರಕ್ಷತೆ-ಭದ್ರತೆ ವಿಷಯಗಳು ಹಾಗೂ ಮುಖ್ಯ ಕಾರ್ಯದರ್ಶಿ ನೇತೃತ್ವದ ವಿಶೇಷ ಕಾರ್ಯಪಡೆಯ ವಿವರಗಳ ಚರ್ಚೆಗಳು ಪ್ರಸ್ತಾವಿತ ಸಭೆಯ ಕಾರ್ಯಸೂಚಿ ಆಗಿರಲಿದೆ. 

ʻಸಿಎಂ ಅವರೊಂದಿಗಿನ ನಮ್ಮ ಕೊನೆಯ ಸಭೆಗೆ ಸಂಬಂಧಿಸಿದಂತೆ, ನಮ್ಮ ಐದು ಅಂಶಗಳ ಬೇಡಿಕೆ ಕುರಿತ ಕೆಲವು ಮುಖ್ಯ ಅಂಶಗಳಿವೆ. ವಿಶೇಷವಾಗಿ, ಆರೋಗ್ಯ ವ್ಯವಸ್ಥೆಗಳಲ್ಲಿ ಸುರಕ್ಷತೆ, ಭದ್ರತೆ ಮತ್ತು ಚಾಲ್ತಿಯಲ್ಲಿರುವ ಬೆದರಿಕೆ ಸಂಸ್ಕೃತಿ ಕುರಿತ ಪ್ರಶ್ನೆಗಳಿಗೆ ಪರಿಹಾರ ಸಿಗಬೇಕಿದೆ,ʼ ಎಂದು ಅವರು ಇಮೇಲ್‌ನಲ್ಲಿ ಬರೆದಿದ್ದಾರೆ. 

Tags:    

Similar News