Save Kappat Gudda| ಹಚ್ಚಹಸಿರಿನ ಜೀವಜಾಲದ ತೊಟ್ಟಿಲು ಆಗುತ್ತಿದೆಯೇ ಬಳ್ಳಾರಿ-ಸಂಡೂರು?

ರಾಜ್ಯದ ರಕ್ಷಿತ ಅರಣ್ಯ ಪ್ರದೇಶದ ಸಮೀಪದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ತನ್ನ ತೀರ್ಮಾನವನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಆದರೆ ಈ ತೀರ್ಮಾನವನ್ನು ಸರ್ಕಾರ ಪುನರ್‌ ವಿಮರ್ಶಿಸುವ ಬಗ್ಗೆ ಪರಿಸರವಾದಿಗಳಿಗೆ ನಂಬಿಕೆ ಇಲ್ಲ. ಮುಖ್ಯವಾಗಿ ಕಪ್ಪತ್ತಗುಡ್ಡದ ರಕ್ಷಿತ ಅರಣ್ಯದ ಸುತ್ತಲಿನ ಸಾಮಾನ್ಯರು ಮತ್ತು ಸಂತರಿಗೆ ಸರ್ಕಾರದ ತೂಗುಕತ್ತಿಯಂಥ ತೀರ್ಮಾನ ಎಂದಾದರೂ ಕಪ್ಪತ್ತಗುಡ್ಡದ ಮೇಲೆ ಬಿದ್ದೇ ಬೀಳುತ್ತದೆ ಎಂಬ ಆತಂಕವಿದೆ. ಹಾಗಾಗಿ ಕಪ್ಪತ್ತಗುಡ್ಡದ ಸುತ್ತಮುತ್ತಲಿನ ಜನರು ಪರಿಸರವಾದಿಗಳು ಸಂಘಟಿತರಾಗಿ ಹೋರಾಟಕ್ಕೆ ಇಳಿದಿದ್ದಾರೆ.

Update: 2024-10-19 00:30 GMT
ಕಪ್ಪದಗುಡ್ಡ ಬೆಟ್ಟ
Click the Play button to listen to article

ಕರ್ನಾಟಕದ ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯದ 10 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಕಾರ್ಯಾಚರಣೆಗೆ ಅನುಮತಿ ನೀಡುವ ನಿರ್ಧಾರವನ್ನು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಇತ್ತೀಚೆಗೆ ಮುಂದೂಡಿದಾಗ ಪರಿಸರವಾದಿಗಳು, ಸ್ಥಳೀಯ ಸಾಧು-ಸಂತರು ಮತ್ತು ಕಪ್ಪತ್ತಗುಡ್ಡದ ಸುತ್ತಲಿನ ನಿವಾಸಿಗಳು ನೆಮ್ಮದಿಯ ನಿಟ್ಟುಸಿರಿಟ್ಟರು. ಆದರೆ ಆ ನೆಮ್ಮದಿ ಬಹಳ ದಿನ ಉಳಿಯಲಾರದೆಂಬ ಅರವಿವು ಅವರುಗಳಿಗಿದೆ.- ಇದು ಶ್ರೀಮಂತ ಇತಿಹಾಸಕ್ಕೆ ಹೆಸರುವಾಸಿಯಾದ ಪಶ್ಚಿಮ ಘಟ್ಟಗಳ ಭಾಗವಾಗಿರುವ, ಜೀವಜಾಲದ ತೊಟ್ಟಿಲಾಗಿರುವ ಕಪ್ಪತಗುಡ್ಡದ ನೆತ್ತಿಯ ಮೇಲೆ ಅಪಾಯದ ತೂಗುಕತ್ತಿ ತೂಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ವನ್ಯಜೀವಿ ಮಂಡಳಿ (SBWL) ಕೇಂದ್ರ ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳ ಸುತ್ತಲಿನ ಸುಮಾರು 30 ಗಣಿಗಾರಿಕೆ ಪ್ರಸ್ತಾವನೆಗಳಿಗೆ ಇನ್ನೂ ಹಸಿರು ನಿಶಾನೆ ತೋರಿಸದಿರುವುದು, ಅನುಮತಿ ನೀಡುವ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಿರುವುದು ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ಕಾರಣವೇ ಎಂಬ ಪ್ರಶ್ನೆ ಎದುರಾಗಿದೆ. ಚುನಾವಣೆಯ ನಂತರ ಅನುಮತಿಯನ್ನು ನೀಡಲಾಗುತ್ತದೆಯೇ ಎಂಬ ಪ್ರಶ್ನೆಯೂ ಕಾಡುತ್ತಿದೆ. ದಕ್ಷಿಣ ಕರ್ನಾಟಕ ಪ್ರದೇಶದ ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯವೂ ಸೇರಿದೆ ಅನುಮತಿಗಾಗಿ ಕಾದಿರುವ 30 ಸಂರಕ್ಷಿತ ಅರಣ್ಯ ಪ್ರದೇಶದ ಪೈಕಿ ಒಂದಾಗಿದೆ ಮತ್ತು ಈ ಕ್ರಮವು ಕಾಂಗ್ರೆಸ್ ಸರ್ಕಾರದ ಸಂರಕ್ಷಣಾ ನಿಲುವು ಮತ್ತು ಅರಣ್ಯವನ್ನು ರಕ್ಷಿಸುವ ಮತ್ತು ವಿಸ್ತರಿಸುವ ಬದ್ಧತೆಗೆ ಸ್ಪಷ್ಟವಾಗಿ ವಿರುದ್ಧವಾಗಿದೆ.

ಕಪ್ಪತಗುಡ್ಡದಲ್ಲಿ 30 ಗಣಿಗಾರಿಕೆ ಪ್ರಸ್ತಾವನೆಗಳಲ್ಲಿ 28

ಪ್ರಸ್ತಾವಿತ 30 ಪ್ರಸ್ತಾವನೆಗಳಲ್ಲಿ, 28 ಪ್ರದೇಶಗಳು ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯದ 10-ಕಿಮೀ ವ್ಯಾಪ್ತಿಯೊಳಗೆ ಬರುತ್ತವೆ. ಕಪ್ಪತಗುಡ್ಡ ಸೇರಿದಂತೆ ಸಂರಕ್ಷಿತ ಅರಣ್ಯ ಪ್ರದೇಶಗಳ ಸುತ್ತ ಗಣಿಗಾರಿಕೆ ಪರವಾನಗಿಗೆ ಅನುಮತಿ ನೀಡುವುದನ್ನು SBWL ಮುಂದೂಡಿದ್ದರೂ, ಪರಿಸರವಾದಿಗಳು ಮತ್ತು ಪ್ರದೇಶದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರವು ಅನುಮತಿ ನೀಡುವ ತನ್ನ ತೀರ್ಮಾನವನ್ನು ಸಂಪೂರ್ಣವಾಗಿ ಕೈಬಿಡುತ್ತದೆ ಎಂಬ ವಿಶ್ವಾಸ ಅವರಿಗಿಲ್ಲ ಎಂದು ಹೇಳುವ ಪರಿಸರವಾದಿ ಚಿಂತಕ ಮತ್ತು ಖ್ಯಾತ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ ಅವರು ಈ ರಾಜ್ಯ ಸರ್ಕಾರದ ನಿಲುವು 'ಪರಿಸರ ವಿರೋಧಿ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳನ್ನು (ಇಎಸ್‌ಎ) ಘೋಷಿಸಲು ಹೊರಡಿಸಿದ ಆರನೇ ಕರಡು ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF &CC) ಕರ್ನಾಟಕ ಸರ್ಕಾರದ ಇತ್ತೀಚಿನ ನಡೆಯನ್ನು ನಾಗೇಶ ಹೆಗಡೆ ಅವರು ತಮ್ಮ ಅನಿಸಿಕೆಗೆ ಆಧಾರವಾಗಿ ನೀಡುತ್ತಾರೆ. ಅಲ್ಲದೆ, ಕರ್ನಾಟಕ ರಾಜ್ಯ ಸರ್ಕಾರವು ಜುಲೈ 31 ರಂದು MoEF & CC ಹೊರಡಿಸಿದ ಪಶ್ಚಿಮ ಘಟ್ಟಗಳ ಕುರಿತು ಡಾ ಕಸ್ತೂರಿರಂಗನ್ ಸಮಿತಿಯ ವರದಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆಯ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಹೆಚ್ಚು ಕಡಿಮೆ ಕರಡನ್ನು ತಿರಸ್ಕರಿಸುವುದೇ ಅಲ್ಲದೆ, ಕಸ್ತೂರಿರಂಗನ್‌ ಸಮಿತಿಯ ವರದಿಯನ್ನು ಒಪ್ಪಲು ತಾನು ಸುತಾರಾಂ ಸಿದ್ದವಿಲ್ಲ ಎಂಬುದನ್ನು ಕೂಡ ಮನವರಿಕೆ ಮಾಡಿಕೊಟ್ಟಿದೆ. ಇವೆಲ್ಲವೂ ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯದ ಭವಿಷ್ಯದ ಬಗ್ಗೆ ಪರಿಸರವಾದಿಗಳನ್ನು ಆತಂಕಕ್ಕೀಡು ಮಾಡಿದೆ.

ಸಂರಕ್ಷಣಾ ಮೀಸಲು

ಕಬ್ಬಿಣ ಮತ್ತು ಚಿನ್ನದ ಅದಿರು ನಿಕ್ಷೇಪಗಳಿಂದ ಸಮೃದ್ಧವಾಗಿರುವ ಹಸಿರು ಕಪ್ಪತಗುಡ್ಡವನ್ನು 2015 ರಲ್ಲಿ ಸಂರಕ್ಷಣಾ ಮೀಸಲು ಎಂದು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಘೋಷಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 89.92 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಹೊಂದಿರುವು ಕಪ್ಪತ್ತಗುಡ್ಡ ಪ್ರದೇಶ ಜೀವಜಾಲದ ತೊಟ್ಟಿಲಾಗಿದ್ದು, ಅದನ್ನು ಸಂರಕ್ಷಿಸಲಾಗುತ್ತಿದೆ ಎಂದು ಘೋಷಿಸಿದ್ದ ಸರ್ಕಾರವೇ ಈಗ ಅದಕ್ಕೆ ಕೊಡಲಿಪೆಟ್ಟು ಕೊಡಲು ಸಜ್ಜಾಗಿರುವುದು ಆಶ್ಚರ್ಯ ಹುಟ್ಟಿಸಿರುವುದೇ ಅಲ್ಲದೆ, ಈ ಸರ್ಕಾರ ಗಣಿಗಾರಿಕಾ ಲಾಬಿಗೆ ಸಂಪೂರ್ಣವಾಗಿ ಶರಣಾಗಿದೆಯೇ? ಎಂಬ ಅನುಮಾನವನ್ನು ಮೂಡಿಸಿದೆ.

ಇಲ್ಲೊಂದು ಸಂಗತಿಯನ್ನು ಗಮನಿಸಬೇಕು. ಆಘಾತಕಾರಿಯಾದ ಹಿಮ್ಮುಖ ನಡೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ವನ್ಯಜೀವಿ ಮಂಡಳಿಯು, ನವೆಂಬರ್ 2017 ರಲ್ಲಿ ಕಪ್ಪತ್ತುಗುಡ್ಡ ವನ್ಯಧಾಮಕ್ಕೆ ತಾನು ನೀಡಿದ್ದ ಸಂರಕ್ಷಣಾ ಕವಚವನ್ನು ಕಳಚಿಹಾಕಿತು. ಈ ಕ್ರಮವು ಪರಿಸರವಾದಿಗಳು ಮತ್ತು ಗದಗ ಪ್ರದೇಶದ ವಿವಿಧ ಧಾರ್ಮಿಕ ಮಠಗಳ ಭಕ್ತರನ್ನು ಕೆರಳಿಸಿತು, ಅವರು ಗಣಿಗಾರಿಕೆ ಲಾಬಿಯ ಒತ್ತಡಕ್ಕೆ ಸರ್ಕಾರವು ಮಣಿದಿದೆ ಎಂದು ಅವರು ಆರೋಪಿಸಿದ್ದರು. 32.346 ಹೆಕ್ಟೇರ್‌ನಲ್ಲಿ ವ್ಯಾಪಿಸಿರುವ ಕಪ್ಪತಗುಡ್ಡ ಅರಣ್ಯ ವ್ಯಾಪ್ತಿಯ ಅಕ್ಷರಶಃ ಅಪರೂಪದ ಸಸ್ಯ, ಪ್ರಾಣಿ, ಔಷಧೀಯ ಸಸ್ಯಗಳ ಭಂಡಾರವಾಗಿರುವ, ಸಸ್ಯ ಸಂಕುಲವನ್ನು ರಕ್ಷಿಸುವಂತೆ ನಂದಿವೇರಿ ಸಂಸ್ಥಾನ ಮಠದ ಶ್ರೀಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಮನವಿ ಮಾಡಿದ್ದರು.

ಕುಗ್ಗುತ್ತಿರುವ ಅರಣ್ಯ ಪ್ರದೇಶ

ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರ್ಕಾರಗಳು ಗಣಿಗಾರಿಕೆ ಲಾಬಿಗೆ ಮಣಿದಿರುವುದರಿಂದ ಪರಿಸರವಾದಿಗಳು ಮತ್ತು ಪ್ರದೇಶದ ಸ್ಥಳೀಯ ಮಠಗಳ ವೀಕ್ಷಕರು ಆತಂಕಗೊಂಡಿದ್ದಾರೆ. 'ಗಣಿಗಾರಿಕೆ ಲಾಬಿ ಸರ್ಕಾರವನ್ನು ಬಗ್ಗಿಸಲು ಕೇಳಿದಾಗ, ರಾಜ್ಯವು ತೆವಳಿತು' ಎಂದು ಕೆಲವು ಅರಣ್ಯ ಅಧಿಕಾರಿಗಳು ವಿಷಾದದಿಂದಲೇ ಹೇಳುತ್ತಾರೆ. ಇದಕ್ಕೆ ಉದಾಹರಣೆಯಾಗಿ, ಕಳೆದ ಎರಡು ದಶಕಗಳಲ್ಲಿ ಗಣಿಗಾರಿಕೆ ಸೇರಿದಂತೆ ಮೂಲಸೌಕರ್ಯ ಯೋಜನೆಗಳಿಗೆ ಸುಮಾರು 20,805 ಹೆಕ್ಟೇರ್ ಅರಣ್ಯ ಭೂಮಿಯನ್ನು ಸರ್ಕಾರ ತಿರುಗಿಸಿದೆ ಎಂದು ಅವರು ಉಲ್ಲೇಖಿಸುತ್ತಾರೆ.

2001 ರಿಂದ 2023 ರವರೆಗೆ, ಕರ್ನಾಟಕವು 54.1 ಲಕ್ಷ ಹೆಕ್ಟೇರ್ ಅರಣ್ಯ ಹೊದಿಕೆಯನ್ನು ಕಳೆದುಕೊಂಡಿತು, ಇದು 2000 ರಿಂದ 2.4 ರಷ್ಟು ಅರಣ್ಯ ಪ್ರದೇಶದಲ್ಲಿ ಕಡಿಮೆಯಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಸಹ ಅರಣ್ಯ ಪ್ರದೇಶ ಕುಗ್ಗುತ್ತಿರುವ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿತ್ತು ಮತ್ತು ಕರ್ನಾಟಕದ ನಿರ್ಧಾರವನ್ನು ಪ್ರಶ್ನಿಸಿತ್ತು. 4,228.21 ಎಕರೆ ಅರಣ್ಯ ಭೂಮಿ ಗಣಿಗಾರಿಕೆಗೆ ಇದುವರೆಗಿನ ಸರ್ಕಾರಗಳ ಈ ಪರಿಸರ ವಿರೋಧಿ ನಿಲುವನ್ನು ಪ್ರಶ್ನಿಸಿ ಪರಿಸರವಾದಿಗಳು ಸರ್ಕಾರದ 'ನೈಜ' ಉದ್ದೇಶಗಳನ್ನು ಏಕೆ ಪ್ರಶ್ನಿಸುತ್ತಿದ್ದಾರೆ ಮತ್ತು ಸರ್ಕಾರ ಗಣಿಗಾರಿಕೆ ಲಾಬಿಗೆ ಮಣಿದಿರುವುದು ಸ್ಪಷ್ಟ ಎನ್ನುತ್ತಿದ್ದಾರೆ.

ಕಪ್ಪತಗುಡ್ಡದ ಪಾವಿತ್ರ್ಯ

ಕಪ್ಪತಗುಡ್ಡವು ಗದಗ, ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಹರಡಿಕೊಂಡಿದ್ದು, ಗದಗ, ಬಿಂಕದಕಟ್ಟಿ ಗ್ರಾಮದಿಂದ ಆರಂಭವಾಗಿ ಮುಂಡರಗಿಯ ಸಿಗಟಾಲೂರು ಗ್ರಾಮದವರೆಗೂ ಕಪ್ಪತ್ತಗುಡ್ಡ ವ್ಯಾಪಿಸಿಕೊಂಡಿದೆ. ಅರಣ್ಯಗಳ ಮಾಜಿ ಉಪ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ್ ಅವರ ಪ್ರಕಾರ, "ಬೆಟ್ಟದ ಮೇಲೆ ಸುಮಾರು 500 ಪ್ರಮುಖ ಔಷಧೀಯ ಗಿಡಮೂಲಿಕೆಗಳು ಲಭ್ಯವಿದೆ." ಸ್ಥಳೀಯ ಜನರು ಮತ್ತು ಪರಿಸರವಾದಿಗಳು ಭಾವನಾತ್ಮಕವಾಗಿ ಮತ್ತು ಪರಿಸರ ಕಾರಣಕ್ಕಾಗಿ ವೈಜ್ಞಾನಿಕವಾಗಿ ಅದರೊಂದಿಗೆ ಗುರುತಿಸಿಕೊಂಡಿದ್ದಾರೆ.

ಇತ್ತೀಚೆಗೆ ಕಪ್ಪತಗುಡ್ಡದಲ್ಲಿ ಪ್ರತಿಭಟನೆ ಕಾರ್ಯಕ್ರಮ

ಗದಗ, ಶಿರಹಟ್ಟಿ, ಮುಂಡರಗಿ ಭಾಗದ ಜನರಿಗೆ ಕಪ್ಪತಗುಡ್ಡ ಆಮ್ಲಜನಕದ ಮೂಲ ಎಂದು ಪರಿಸರವಾದಿ ಚಂದ್ರಕಾಂತ ಚವ್ಹಾಣ ನಂಬಿದ್ದಾರೆ. ಈ ಕಪ್ಪತ್ತಗುಡ್ಡದ ಪ್ರದೇಶ ದೇವಾಲಯಗಳು ಮತ್ತು ಧಾರ್ಮಿಕ ಮಠಗಳಿಗೆ ತವರು, ಗದಗದ ಅತೀವವಾಗಿ ಹಸಿರು ಹೊದಿಕೆ ಈ ಕಪ್ಪತಗುಡ್ಡ ಎಂದು ನಂಬುವ ಬೆಟ್ಟಗಳಲ್ಲಿ ವಾಸಿಸುವ ಜನರು ಮತ್ತು ಸುತ್ತಮುತ್ತಲಿನ 40 ಗ್ರಾಮಸ್ಥರು ಕಪ್ಪತ್ತುಗುಡ್ಡದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ.

ಚಿನ್ನದ ಗಣಿಗಾರಿಕೆ

ಕಪ್ಪತ್ತುಗಗುಡ್ಡದಲ್ಲಿ ಕಬ್ಬಿಣ ಮತ್ತು ಚಿನ್ನದ ಅದಿರು ನಿಕ್ಷೇಪಗಳಿಂದ ಸಮೃದ್ಧವಾಗಿರುವುದರಿಂದ ಗಣಿಗಾರಿಕೆ ಲಾಬಿಯ ಒತ್ತಡಕ್ಕೆ ಮಣಿದು ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಅನ್ನದಾನೇಶ್ವರ ಮಹಾಶಿವಯೋಗಿ ಮಠದ ಪೀಠಾಧ್ಯಕ್ಷ ಅಭಿನವ ಅನ್ನದಾನೇಶ್ವರ ಸ್ವಾಮಿ ಆರೋಪಿಸಿದ್ದಾರೆ. ವಾಸ್ತವವಾಗಿ, ಚಿನ್ನದ ಅಗೆಯುವವರು ಈ ಬೆಟ್ಟಗಳಲ್ಲಿ ಅಮೂಲ್ಯವಾದ ಲೋಹಕ್ಕಾಗಿ ವರ್ಷಗಳಿಂದ ಹುಡುಕುತ್ತಿದ್ದಾರೆ.

ಗದಗ ಮತ್ತು ಸುತ್ತಮುತ್ತ ಚಿನ್ನದ ಅದಿರು ಪತ್ತೆಯಾಗಿರುವುದು ಇತ್ತೀಚಿನ ವಿದ್ಯಮಾನವೇನಲ್ಲ. 20 ನೇ ಶತಮಾನದ ಆರಂಭದಲ್ಲಿ, ಧಾರವಾಡ ಗೋಲ್ಡ್ ಮೈನ್ಸ್ ಲಿಮಿಟೆಡ್ ಮತ್ತು M/S ಜಾನ್ ಟೇಲರ್ ಮತ್ತು ಲಂಡನ್ನ ಸನ್ಸ್ ಚಿನ್ನದ ಅದಿರಿನ ಸಾಧ್ಯತೆಯನ್ನು ಅನ್ವೇಷಿಸಲು ಎಂಟು ವರ್ಷಗಳ ಕಾಲ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಆದರೆ. ಬಂಡೆಗಳನ್ನು ಬಗೆದಾಗ ದಕ್ಕಿದ ಚಿನ್ನದ ಅದಿರು ಅದರ ಉತ್ಸಾಹವನ್ನು ಕುಗ್ಗಿಸಿತು. ಮತ್ತುತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿತು.

ಅಭಿನವ ಅನ್ನದಾನೇಶ್ವರ ಸ್ವಾಮಿ ಅವರ ಪ್ರಕಾರ, ಬಲ್ದೋಟ ಗ್ರೂಪ್ ಕಂಪನಿ - ರಾಮಗಢ್ ಮಿನರಲ್ಸ್ ಮತ್ತು ಮೈನಿಂಗ್ ಪ್ರೈವೇಟ್ ಲಿಮಿಟೆಡ್ (RMML) - ಗದಗ ಜಿಲ್ಲೆಯಲ್ಲಿ ದಿನಕ್ಕೆ 1,000 ಟನ್ ಚಿನ್ನದ ಅದಿರು ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಈಗಲೂ ಪ್ರಯತ್ನಿಸುತ್ತಿದೆ.

RMML 2017 ರಲ್ಲಿ ಕಪ್ಪತಗುಡ್ಡದ ಜೆಲ್ಲಿಗೆರೆಯಲ್ಲಿ ಸಾಂಗ್ಲಿ ಚಿನ್ನದ ಗಣಿಗಳನ್ನು ಸ್ಥಾಪಿಸಲು 39.9 ಹೆಕ್ಟೇರ್ (ಸುಮಾರು 98.6 ಎಕರೆ) ಅರಣ್ಯ ಭೂಮಿಗೆ ಅರ್ಜಿ ಸಲ್ಲಿಸಿತ್ತು. ಆದರೆ ರಾಜ್ಯ ಸರ್ಕಾರವು 17,872 ಹೆಕ್ಟೇರ್ ಪ್ರದೇಶವನ್ನು ಸಂರಕ್ಷಣಾ ಮೀಸಲು ಎಂದು ಘೋಷಿಸಿದಾಗ, RMML ಸರ್ಕಾರದ ತೀರ್ಮಾನವನ್ನು ರಾಜ್ಯ ಹೈಕೋರ್ಟಿನಲ್ಲಿ ಪ್ರಶ್ನಿಸಿತು. ಆದರೆ, ಹೈಕೋರ್ಟ್ ಆರ್‌ಎಂಎಂಎಲ್‌ನ ಮನವಿಯನ್ನು ವಜಾಗೊಳಿಸಿತು. ಇದಲ್ಲದೆ, ಪರಿಸರವಾದಿ ನಾಗೇಶ್ ಹೆಗಡೆಯವರ ದೃಷ್ಟಿಯಲ್ಲಿ, “ಅದಿರು ಹೊರತೆಗೆಯುವ ವೆಚ್ಚ ಮತ್ತು ಸಂಸ್ಕರಣಾ ವೆಚ್ಚವು ಚಿನ್ನದ ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿರುತ್ತದೆ ಮತ್ತು ಯೋಜನೆಯು ಯಾವುದೇ ಚಿನ್ನದ ಗಣಿಗಾರಿಕೆ ಕಂಪನಿಗೆ ಆರ್ಥಿಕವಾಗಿ ಲಾಭವಾಗುವುದಿಲ್ಲ” ಎನ್ನುತ್ತಾರೆ.

ಮತ್ತೊಂದು ಬಳ್ಳಾರಿ ಅಥವಾ ಸಂಡೂರು?

ಇದೀಗ ಗಣಿಗಾರಿಕೆಯಿಂದ ಬರಡಾಗಿರುವು ಬಳ್ಳಾರಿ ಅಥವಾ ಸಂಡೂರಿನ ಹಾದಿಯಲ್ಲಿಯೇ ಕಪ್ಪತಗುಡ್ಡವೂ ಸಾಗಲಿದೆ ಎಂದು ಗದಗ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಪರಿಸರವಾದಿಗಳು ಹಾಗೂ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಪ್ಪತಗುಡ್ಡ ಹಾಗೂ ಸುತ್ತಮುತ್ತ ಗಣಿಗಾರಿಕೆಗೆ ಅನುಮತಿ ನೀಡುವ ಚಿಂತನೆಯನ್ನು ಸರಕಾರ ಸಂಪೂರ್ಣವಾಗಿ ಕೈಬಿಡಬೇಕು ಎಂದು ಅವರ ಆಗ್ರಹಿಸಿ ಹೋರಾಟಕ್ಕೆ ಇಳಿದಿದ್ದಾರೆ. ಅಲ್ಲದೆ, ಗಣಿಗಾರಿಕೆ ಪ್ರಸ್ತಾವನೆಗಳ ಕುರಿತು ರಾಜ್ಯ ವನ್ಯಜೀವಿ ಮಂಡಳಿಯ ಸಭೆ ನಡೆಸುವುದರ ವಿರುದ್ಧ ಮತ್ತು ಕಪ್ಪತ್ತುಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವ ನಿಲುವನ್ನು ಸರ್ಕಾರ ಕೈಬಿಡಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಕುರಿತು ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿರುವ ಗದಗ ತೋಂಟದಾರ್ಯ ಮಠದ ಪೀಠಾಧಿಪತಿ ಸಿದ್ದರಾಮ ಸ್ವಾಮಿ, ನಂದಿವೇರಿ ಮಠದ ಶಿವಕುಮಾರ್‌ ಸ್ವಾಮಿ, ಕಪ್ಪತಗುಡ್ಡ ಹಾಗೂ ಸುತ್ತಮುತ್ತ ಗಣಿಗಾರಿಕೆ ನಡೆಸಲು ಗದಗದ ಜನತೆ ಅವಕಾಶ ನೀಡುವುದಿಲ್ಲ, ಇದನ್ನು ನಾವು ಶತಾಯಗತಾಯ ವಿರೋಧಿಸುತ್ತೇವೆ ಎಂದಿದ್ದಾರೆ. ''ಕಪ್ಪತಗುಡ್ಡ ಮತ್ತು ಸುತ್ತಮುತ್ತ ಗಣಿಗಾರಿಕೆಗೆ ಅನುಮತಿ ನೀಡುವ ನಿರ್ಧಾರವನ್ನು ಸರಕಾರ ಮುಂದೂಡಿದೆ. ಆದರೆ, ಸರ್ಕಾರ ಗಣಿಗಾರಿಕೆಗೆ ಪರವಾನಗಿ ನೀಡಿದರೆ, ಕಪ್ಪತಗುಡ್ಡದಂಥ ಜೀವಜಾಲದ ತೊಟ್ಟಿಲಿನ ಶವ ಪೆಟ್ಟಿಗೆಗೆ ಮೊದಲ ಮೊಳೆ ಹೊಡೆದಂತಾಗುತ್ತದೆ' ಎಂದು ತೋಂಟದಾರ್ಯ ಮಠಾಧೀಶ ಸಿದ್ದರಾಮ ನೊಂದು ನುಡಿದಿದ್ದಾರೆ.

ಗಣಿಗಾರಿಕೆ ವಿರೋಧಿಸಿ ಪ್ರತಿಭಟನೆ

ಈ ಹಿಂದೆ, ರಾಜ್ಯ ಸರ್ಕಾರವು 2019 ರಲ್ಲಿ ಕಪ್ಪತಗುಡ್ಡ ಬೆಟ್ಟದ ಶ್ರೇಣಿಗೆ ವನ್ಯಜೀವಿ ಅಭಯಾರಣ್ಯದ ಹಣೆಪಟ್ಟಿ ನೀಡಿರುವುದನ್ನು ಹಿಂತೆಗೆದುಕೊಳ್ಳಲು ಪ್ರಯತ್ನಿಸಿದಾಗ ಈ ಪ್ರದೇಶದಲ್ಲಿ ಭಾರಿ ಪ್ರತಿಭಟನೆಗಳು ನಡೆದವು. ವಿದ್ಯಾರ್ಥಿಗಳು, ಪರಿಸರವಾದಿಗಳು ಮತ್ತು ವಿವಿಧ ಮಠಗಳ ಮಠಾಧೀಶರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಪ್ಪತಗುಡ್ಡ ಉಳಿಸಲು ನಂದಾವೇರಿ ಮಠದ ಜನರು ಹಾಗೂ ಭಕ್ತರು ಈಗಾಗಲೇ ಆಂದೋಲನ ಸನ್ನದ್ಧರಾಗಿದ್ದಾರೆ. .

ಕಪ್ಪತಗುಡ್ಡ ಭಾಗದಲ್ಲಿ ಗಣಿಗಾರಿಕೆಗೆ ಅನುಮತಿ ನೀಡದಂತೆ ಕಳೆದ ಕೆಲವು ವರ್ಷಗಳಿಂದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಕಪ್ಪತಗುಡ್ಡ ಅರಣ್ಯ ಪ್ರದೇಶದ ಮೇಲೆ ಕಣ್ಣಿಟ್ಟಿರುವ ಗಣಿ ಉದ್ಯಮಿಗಳಿಗೆ ಅನುಮತಿ ನಿರಾಕರಿಸಿ ಎಂದು ಎಂದು 2022ರಲ್ಲಿ ಹೊರಟ್ಟಿ ಬಿಜೆಪಿ ಸರಕಾರಕ್ಕೆ ಪತ್ರ ಬರೆದಿದ್ದರು.

ಕಪ್ಪತಗುಡ್ಡ ಮತ್ತು ಸುತ್ತಮುತ್ತ ಗಣಿಗಾರಿಕೆಗೆ ಅನುಮತಿ ನೀಡುವ ಯಾವುದೇ ಸರ್ಕಾರವು ಬೃಹತ್ ಪ್ರತಿಭಟನೆಗೆ ಕಾರಣವಾಗುತ್ತದೆ ಎಂದು ಪರಿಸರವಾದಿಗಳು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯ ರಾಷ್ಟ್ರೀಯ ಸಮಿತಿ (NCPNR) ನ್ಯಾಯಾಂಗದ ಸಹಾಯದಿಂದ RMML ನ ಹಿಂದಿನ ಪ್ರಯತ್ನಗಳನ್ನು ತಡೆಯುವಲ್ಲಿ ಯಶಸ್ವಿಯಾಗಿತ್ತು. ಈಗ ಮತ್ತೆ ಸರ್ಕಾರ ಅಂಥ ತೀರ್ಮಾನ ತೆಗೆದುಕೊಂಡರೆ ಜನಾಂದೋಲನ ನಡೆಸುವುದೇ ಅಲ್ಲದೆ ನ್ಯಾಯಾಲಯದ ಕದ ತಟ್ಟುವುದಾಗಿ NCPNR ನ ಸ್ಥಾಪಕ ಅಧ್ಯಕ್ಷ ಮತ್ತು ಹೋರಾಟಗಾರ ಎಸ್.‌ ಆರ್‌ ಹಿರೇಮಠ ಅವರು ʼದ ಫೆಡರಲ್-ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಕಪ್ಪತಗುಡ್ಡ ಹಾಗೂ ಸುತ್ತಮುತ್ತಲ ಗಣಿಗಾರಿಕೆಗೆ ಸರ್ಕಾರ ಪರವಾನಗಿ ನೀಡದಂತೆ ಹೋರಾಟಕ್ಕೆ ಸಜ್ಜಾಗಿರುವ ಜನ ಸಂಗ್ರಾಮ ಪರಿಷತ್ತಿನ ರಾಘವೇಂದ್ರ ಕುಷ್ಟಗಿ, ಸಮಾಜ ಪರಿವರ್ತನಾ ಸಮುದಾಯದ ದೀಪಕ್ ಹಾಗೂ ಎಸ್.ಆರ್.ಹಿರೇಮಠ ಅವರು ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಎಚ್ಚರಿಸಿದ್ದಾರೆ. ಈಗ ಎಲ್ಲರ ಚಿತ್ತ ಮುಂದೆ ನಡೆಯಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ವನ್ಯಜೀವಿ ಮಂಡಳಿ (SBWL)ಯ ಸಭೆಯ ಫಲಶೃತಿಯ ಮೇಲೆ ನಿಂತಿದೆ.

Tags:    

Similar News