ಹಸೆಮಣೆ ಏರಲು 'ಟಗರು ಪುಟ್ಟಿ' ಮಾನ್ವಿತಾ ರೆಡಿ!

ನಟಿ ಮಾನ್ವಿತಾ ಕಾಮತ್ ಅವರು ಹಸೆಮನೆ ಏರಲು ಸಿದ್ದರಾಗಿದ್ದಾರೆ. ಈ ವಿಷಯವನ್ನು ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Update: 2024-04-12 12:37 GMT
ಹಸೆಮಣೆ ಏರಲು ರೆಡಿಯಾದ ಮಾನ್ವಿತಾ ಕಾಮತ್
Click the Play button to listen to article

ದುನಿಯಾ ಸೂರಿ ನಿರ್ದೇಶನದ 'ಕೆಂಡಸಂಪಿಗೆ' ಸಿನಿಮಾ ಮೂಲಕ ನಟನಾ ವೃತ್ತಿ ಆರಂಭಿಸಿದ್ದ ನಟಿ ಮಾನ್ವಿತಾ ಕಾಮತ್ ಅವರು ಹಸೆಮಣೆ ಏರಲು ಸಿದ್ದರಾಗಿದ್ದಾರೆ. ಈ ವಿಷಯವನ್ನು ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಕುಮಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ಮೇ 1 ರಂದು ಅರುಣ್ ಕುಮಾರ್ ಅವರೊಂದಿಗೆ ಹಸಮಣೆ ಏರುತ್ತಿರುವುದಾಗಿ ಶೇರ್ ಮಾಡಿಕೊಂಡಿದ್ದಾರೆ.

Full View

ಮಾನ್ವಿತಾ ಕಾಮತ್ ಹಾಗೂ ಮ್ಯೂಸಿಕ್ ಪ್ರಡ್ಯೂಸರ್ ಅರುಣ್ ಕುಮಾರ್ ಮದುವೆ ಮೇ1 ಕ್ಕೆ ಕೊಂಕಣಿ ಸಂಪ್ರದಾಯದಂತೆ ನಡೆಯುತ್ತಿದೆ. ಆದರೆ, ಅದಕ್ಕೂ ಮುನ್ನ ಏಪ್ರಿಲ್ 29ಕ್ಕೆ ಮೆಹಂದಿ ಕಾರ್ಯಕ್ರಮ ಜರುಗಿದರೆ, ಏಪ್ರಿಲ್ 30ರಂದು ಸಂಗೀತ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಾನ್ವಿತಾ ಅಭಿಮಾನಿಗಳು ಹಾಗೂ ಚಿತ್ರರಂಗದ ತಾರೆಯರು ಶುಭಾಶಯ ಕೋರುತ್ತಿದ್ದಾರೆ.

ಶಿವಣ್ಣನೊಂದಿಗೆ 'ಟಗರು' ಸಿನಿಮಾದಲ್ಲಿ ನಟಿಸಿರುವ ಮಾನ್ವಿತಾ ಕಾಮತ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ಟಗರು ಪುಟ್ಟಿ ಎಂದೇ ಫೇಮಸ್ ಆಗಿದ್ದಾರೆ. ಮಾನ್ವಿತಾ ಕಾಮತ್ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ನಟನೆಯ 'ಕನಕ', 'ಚೌಕ', 'ತಾರಕಾಸುರ', 'ರಿಲ್ಯಾಕ್ಸ್ ಸತ್ಯ', 'ಇಂಡಿಯಾ ವರ್ಸಸ್‌ ಇಂಗ್ಲೆಂಡ್', 'ಶಿವ 143' ಅಂತಹ ಸಿನಿಮಾಗಳಲ್ಲಿ ಮಾನ್ವಿತಾ ನಟಿಸಿದ್ದಾರೆ. ಹಾಗೇ 'ಅಪ್ಪಾ ಐ ಲವ್ ಯೂ' ಸಿನಿಮಾ ತೆರೆಕಂಡಿದ್ದು, ಕೈಯಲ್ಲಿ ಇನ್ನೂ 'ಹ್ಯಾಪಿಲಿ ಮ್ಯಾರೀಡ್' , 'ಬ್ಯಾಡ್', 'ರಾಜಸ್ಥಾನ್ ಡೈರೀಸ್', ಸಿನಿಮಾಗಳು ಬಿಡುಗಡೆಯಾಗಬೇಕಿದೆ.

Tags:    

Similar News