Wayanad Landslide LIVE | ಇದು ರಾಷ್ಟ್ರೀಯ ವಿಪತ್ತು, ಸರ್ಕಾರ ಏನು ಮಾಡುತ್ತದೆ ನೋಡೋಣ: ರಾಹುಲ್

Update: 2024-08-01 05:04 GMT
Live Updates - Page 2
2024-08-01 10:52 GMT

ಬೈಲಿ ಸೇತುವೆ ನಿರ್ಮಾಣದಿಂದ ಕಾರ್ಯಾಚರಣೆ ಸುಲಭ: ವಿಜಯನ್

ಭಾರೀ ಪುಮಾಣದಲ್ಲಿ ಮಣ್ಣು ಸಂಗ್ರಹವಾಗಿರುವ ಕಾರಣ ಶೋಧ ಕಾರ್ಯಾಚರಣೆ ಆರಂಭಿಸಲು ಆರಂಭದಲ್ಲಿ ಕಷ್ಟವಾಗಿತ್ತು. ಆರಂಭದಲ್ಲಿ, ರಕ್ಷಣಾ ಕಾರ್ಯಾಚರಣೆಗಾಗಿ ದೊಡ್ಡ ಯಂತ್ರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಈಗ ಸೇನೆಯು ಬೈಲಿ ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸುತ್ತಿದೆ, ಕಾರ್ಯಾಚರಣೆ ಸುಲಭವಾಗುತ್ತದೆ. ಇನ್ನೂ ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಬದುಕುಳಿದವರಿಗೆ ಪುನರ್ವಸತಿ ಕಲ್ಪಿಸುವ ಕುರಿತು ಕೇಳಿದ ಪುಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಈಗ ಮೊದಲು ಸಂತ್ರಸ್ತರ ರಕ್ಷಣ ಮಾಡುತ್ತೇವೆ. ನಾವು ಈ ಹಿಂದೆ ಬದುಕುಳಿದವರನ್ನು ಪರಿಣಾಮಕಾರಿಯಾಗಿ ಪುನರ್ವಸತಿ ಮಾಡಿದ್ದೇವೆ. ನಾವು ಅದೇ ರೀತಿ ಮುಂದುವರಿಯುತ್ತೇವೆ ಎಂದು ವಿಜಯನ್ ಹೇಳಿದರು.

ಪರಿಹಾರ ಶಿಬಿರಗಳ ಒಳಗೆ ಚಿತ್ರೀಕರಣ ಮತ್ತು ವರದಿ ಮಾಡುವುದನ್ನು ತಡೆಯುವಂತೆ ಮುಖ್ಯಮಂತ್ರಿ ಮಾಧ್ಯಮಗಳಿಗೆ ಸೂಚಿಸಿದರು. ಶಿಬಿರಗಳು ಪ್ರಸ್ತುತ ಹಲವಾರು ಕುಟುಂಬಗಳಿಗೆ ವಸತಿ ನೀಡುತ್ತಿದ್ದು, ಖಾಸಗಿತನವನ್ನು ಗೌರವಿಸಬೇಕು ಎಂದು ಅವರು ಹೇಳಿದರು.

ವರದಿಗಾರರು ಸೇರಿದಂತೆ ಕುಟುಂಬಗಳನ್ನು ಭೇಟಿಯಾಗಲು ಬಯಸುವವರು ಶಿಬಿರದ ಹೊರಗೆ ಭೇಟಿ ಮಾಡುವ ಮೂಲಕ ಇತರರ ಖಾಸಗಿತನವನ್ನು ಗೌರವಿಸಬಹುದು ಎಂದು ಮುಖ್ಯಮಂತ್ರಿ ಹೇಳಿದರು.

ಪತ್ರಿಕಾಗೋಷ್ಠಿಯ ನಂತರ ವಿಜಯನ್ ಅವರು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ (CMDRF) ವಿವಿಧ ಸಂಸ್ಥೆಗಳು ನೀಡಿರುವ ಚೆಕ್‌ಗಳನ್ನು ಸ್ವೀಕರಿಸಿದರು.

2024-08-01 10:28 GMT

ವಯನಾಡ್‌ನಲ್ಲಿರುವ ಪರಿಹಾರ ಶಿಬಿರಕ್ಕೆ ರಾಹುಲ್, ಪ್ರಿಯಾಂಕಾ ಭೇಟಿ

2024-08-01 09:23 GMT

ಭೂಕುಸಿತ ಸ್ಥಳಕ್ಕೆ ರಾಹುಲ್, ಪ್ರಿಯಾಂಕಾ ಭೇಟಿ

2024-08-01 09:22 GMT

2024-08-01 09:22 GMT

ಚೂರಲ್ಮಲಾ ತಲುಪಿದ ರಾಹುಲ್ ಗಾಂಧಿ


2024-08-01 08:23 GMT

ಎರಡು ಗ್ರಾಮಗಳು ಭೂಪಟದಿಂದಲೇ ಮಾಯವಾಗಿವೆ: ಶಶಿ ತರೂರ್

2024-08-01 08:21 GMT

ಸಿಎಂ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ

2024-08-01 08:13 GMT

ಬೈಲಿ ಸೇತುವೆಯ ಕಾಮಗಾರಿ ಮುಂದುವರಿದಿದೆ‌

2024-08-01 06:19 GMT

ತಾಯಿ ಕಳೆದುಕೊಂಡ ಶಿಶುಗಳಿಗೆ ಎದೆಹಾಲು ನೀಡುತ್ತಿರುವ ನಿಸ್ವಾರ್ಥ ಮಹಿಳೆ: ಹೃದಯಸ್ಪರ್ಶಿ ಕಥೆ

ಭೂಕುಸಿತ ಪೀಡಿತ ವಯನಾಡ್ ಜಿಲ್ಲೆಯಿಂದ ಸಾವು ಮತ್ತು ವಿನಾಶದ ಘೋರ ವರದಿಗಳ ನಡುವೆ, ಇಡುಕ್ಕಿಯಲ್ಲಿ ಹೃದಯಸ್ಪರ್ಶಿ ಕಥೆ ಹೊರಹೊಮ್ಮಿದೆ. ಎರಡು ಮಕ್ಕಳ ಮಹಿಳೆಯೊಬ್ಬಳು ತಮ್ಮ ತಾಯಿಯನ್ನು ಕಳೆದುಕೊಂಡ ಶಿಶುಗಳಿಗೆ ಎದೆಹಾಲು ನೀಡುತ್ತಾರೆ.

ಆ ನಿಸ್ವಾರ್ಥ ಮಹಿಳೆ, ಆಕೆಯ ಪತಿ, 4 ವರ್ಷ ಮತ್ತು ನಾಲ್ಕು ತಿಂಗಳ ವಯಸ್ಸಿನ ಇಬ್ಬರು ಮಕ್ಕಳು ಈಗಾಗಲೇ ಮಧ್ಯ ಕೇರಳದ ಇಡುಕ್ಕಿಯಲ್ಲಿರುವ ತಮ್ಮ ಮನೆಯಿಂದ ವಯಂಡ್‌ಗೆ ತೆರಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಹಿಳೆ, ʻʻನಾನು ಎರಡು ಚಿಕ್ಕ ಮಕ್ಕಳ ತಾಯಿಯಾಗಿದ್ದು, ತಾಯಂದಿರಿಲ್ಲದ ಮಕ್ಕಳು ಎದೆಹಾಲು ಇಲ್ಲದೇ ಬದುಕುವುದು ಹೇಗೆ ಎಂಬ ಪ್ರಶ್ನೆ ನನಗೆ ಮೂಡಿತು, ಆಗ ನಾನು ಈ ನಿರ್ಧಾರ ತೆಗೆದುಕೊಳ್ಳಲು ಪ್ರೇರಣೆಯಾಯಿತು. ಈ ಬಗ್ಗೆ ತನ್ನ ಪತಿಯೊಂದಿಗೆ ಚರ್ಚಿಸಿದಾಗ, ಅವರು ಅದಕ್ಕೆ ತುಂಬಾ ಬೆಂಬಲ ನೀಡಿದರುʼʼ ಎಂದು ಅವರು ಹೇಳಿದರು.

2024-08-01 05:56 GMT

ಸೇನೆಯ ಯೋಜನೆ


Tags:    

Similar News