ಪುಣೆಯಲ್ಲಿ ಭಾರೀ ಮಳೆಗೆ ಹಳೆಯ ಸೇತುವೆ ಕುಸಿತ: 5 ಮಂದಿ ಸಾವು, ಹಲವರು ನಾಪತ್ತೆ
ಪ್ರಾಥಮಿಕ ವರದಿಗಳ ಪ್ರಕಾರ, ಪ್ರಬಲ ನೀರಿನ ಪ್ರವಾಹವೇ ಸೇತುವೆ ಕುಸಿಯಲು ಕಾರಣವಾಗಿದೆ. ಇದರಿಂದಾಗಿ 5 ಮಂದಿ ಸಾವನ್ನಪ್ಪಿದ್ದು, 5-6 ಜನರನ್ನು ನದಿಯಿಂದ ರಕ್ಷಿಸಲಾಗಿದೆ.;
ಪುಣೆಯ ತಾಲೆಗಾಂವ್ ಪ್ರದೇಶದಲ್ಲಿ ಇಂದ್ರಾಯಣಿ ನದಿಯ ಮೇಲಿನ ಹಳೆಯ ಸೇತುವೆ ಭಾನುವಾರ ಮಧ್ಯಾಹ್ನ ಕುಸಿದು, ಕನಿಷ್ಠ 15 ರಿಂದ 20 ಮಂದಿ ರಭಸವಾದ ನೀರಿನ ಸೆಳವಿಗೆ ಕೊಚ್ಚಿಕೊಂಡು ಹೋಗಿದ್ದಾರೆ. ಶಿಥಿಲ ಸ್ಥಿತಿಯಲ್ಲಿದ್ದ ಈ ಸೇತುವೆಯ ಮೇಲೆ ಕೆಲಕಾಲದಿಂದ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೆ, ಭಾರೀ ಮಳೆ ಮತ್ತು ನದಿಯ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ, ಹಲವರು ನದಿಯ ಉಕ್ಕಿ ಹರಿಯುವ ದೃಶ್ಯವನ್ನು ವೀಕ್ಷಿಸಲು ಸೇತುವೆಯ ಮೇಲೆ ಜಮಾಯಿಸಿದ್ದರು.
ಪ್ರಾಥಮಿಕ ವರದಿಗಳ ಪ್ರಕಾರ, ಪ್ರಬಲ ನೀರಿನ ಪ್ರವಾಹವೇ ಸೇತುವೆ ಕುಸಿಯಲು ಕಾರಣವಾಗಿದೆ. ಇದರಿಂದಾಗಿ 5 ಮಂದಿ ಸಾವನ್ನಪ್ಪಿದ್ದು, 5-6 ಜನರನ್ನು ನದಿಯಿಂದ ರಕ್ಷಿಸಲಾಗಿದೆ. ಆದರೆ, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಆತಂಕ ವ್ಯಕ್ತಪಡಿಸಿದೆ.
ರಕ್ಷಣಾ ಮತ್ತು ಹುಡುಕಾಟ ಕಾರ್ಯಾಚರಣೆಯನ್ನು ಯುದ್ಧದ ಪಾದದಲ್ಲಿ ಆರಂಭಿಸಲಾಗಿದ್ದು, ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತದ ತಂಡಗಳು ಪರಿಹಾರ ಕಾರ್ಯದಲ್ಲಿ ತೊಡಗಿವೆ. ಸ್ಥಳಕ್ಕೆ 15 ಆಂಬುಲೆನ್ಸ್ಗಳನ್ನು ತುರ್ತಾಗಿ ಕಳುಹಿಸಲಾಗಿದೆ.