RCB Champion : ಇಂದು ಆರ್ಸಿಬಿ ಐಪಿಎಲ್ 2025 ವಿಜಯೋತ್ಸವ: ಮೆರವಣಿಗೆ, ಎಲ್ಲಿ, ಏನು ಎಂಬ ವಿವರ ಇಲ್ಲಿದೆ
ಇದು ನಿಮಗಾಗಿ, ನೀವೇ ನಮ್ಮ ಬಲ. ಪ್ರತಿಯೊಂದು ಹರ್ಷೋದ್ಗಾರಕ್ಕೂ, ಪ್ರತಿಯೊಂದು ಕಣ್ಣೀರಿಗೂ, ಪ್ರತಿಯೊಂದು ವರ್ಷಕ್ಕೂ, ಪ್ರತಿ ನಿರೀಕ್ಷೆಗೂ ನೀವೇ ಸರದಾರರು. ಈ ಕಿರೀಟ ನಿಮ್ಮದು ಎಂದು ಆರ್ಸಿಬಿ ಹೇಳಿದೆ.;
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆಲುವಿನ ನಂತರ, ಅಭಿಮಾನಿಗಳಿಗಾಗಿ ವಿಜಯೋತ್ಸವದ ಮೆರವಣಿಗೆಯನ್ನು ಘೋಷಿಸಿದೆ. ಜೂನ್ 3ರಂದು ಅಹಮದಾಬಾದ್ನಲ್ಲಿ ನಡೆದ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು 6 ರನ್ಗಳಿಂದ ಸೋಲಿಸುವ ಮೂಲಕ ಆರ್ಸಿಬಿ 18 ವರ್ಷಗಳ ಬರವನ್ನು ಅಂತ್ಯಗೊಳಿಸಿತ್ತು.
ಈ ಐತಿಹಾಸಿಕ ವಿಜಯವನ್ನು ತಮ್ಮ ನಿಷ್ಠಾವಂತ ಅಭಿಮಾನಿಗಳೊಂದಿಗೆ ಆಚರಿಸಲು, ಫ್ರಾಂಚೈಸಿ ಜೂನ್ 4 ರಂದು ಮಧ್ಯಾಹ್ನ 3.30ಕ್ಕೆ ವಿಧಾನ ಸೌಧದಿಂದ ಎಂ. ಚಿನ್ನಸ್ವಾಮಿ ಸ್ಟೇಡಿಯಂವರೆಗೆ ಮೆರವಣಿಗೆ ಆಯೋಜಿಸಿದೆ. ಈ ಐತಿಹಾಸಿಕ ಕ್ಷಣದಲ್ಲಿ ಮಿಂದೇಳಲಿದ್ದು, ಸಾವಿರಾರು ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ.
"ಇದು ನಿಮಗಾಗಿ, ನೀವೇ ನಮ್ಮ ಬಲ. ಪ್ರತಿಯೊಂದು ಹರ್ಷೋದ್ಗಾರಕ್ಕೂ, ಪ್ರತಿಯೊಂದು ಕಣ್ಣೀರಿಗೂ, ಪ್ರತಿಯೊಂದು ವರ್ಷಕ್ಕೂ, ಪ್ರತಿ ನಿರೀಕ್ಷೆಗೂ ನೀವೇ ಸರದಾರರು. ಈ ಕಿರೀಟ ನಿಮ್ಮದು ಎಂದು ಆರ್ಸಿಬಿ ಹೇಳಿದೆ.
ವಿರಾಟ್ ಕೊಹ್ಲಿ ಕೂಡ ಟ್ರೋಫಿಯೊಂದಿಗೆ ಬೆಂಗಳೂರಿಗೆ ಮರಳಿದ ನಂತರ ಅಭಿಮಾನಿಗಳಿಗಾಗಿ ವಿಶೇಷ ಸಂಭ್ರಮದ ಭರವಸೆ ನೀಡಿದ್ದಾರೆ. "ನಗರವು ಕಾಯುತ್ತಿದೆ. ಅಭಿಮಾನಿಗಳು ಈಗ ಏನು ನಡೆಯುತ್ತಿರಬಹುದು ಎಂದು ಊಹಿಸಿ," ಎಂದು ಕೊಹ್ಲಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.