ಅಗ್ನಿಪಥ: ರಾಹುಲ್ ಗಾಂಧಿ ದೇಶದ ದಾರಿ ತಪ್ಪಿಸುತ್ತಿದ್ದಾರೆ- ರಾಜನಾಥ್ ಸಿಂಗ್

Update: 2024-07-29 11:26 GMT

ನವದೆಹಲಿ, ಜು 29- ರಾಷ್ಟ್ರೀಯ ಭದ್ರತೆ ಮತ್ತು ಅಗ್ನಿಪಥ ಉಪಕ್ರಮದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ದಾರಿ ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಲು ಸಿದ್ಧ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಸೋಮವಾರ ಹೇಳಿದರು. 

ಕೇಂದ್ರ ಬಜೆಟ್ ಕುರಿತು ರಾಹುಲ್ ಗಾಂಧಿ‌ ಅವರ ಭಾಷಣದ ಬಳಿಕ ಮಾತನಾಡಿ, ಪ್ರತಿಪಕ್ಷದ ನಾಯಕರು ಬಜೆಟ್ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳನ್ನು ಹರಡಲು ಪ್ರಯತ್ನಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಂಬಂಧ ಸ್ಪಷ್ಟೀಕರಣ ನೀಡುತ್ತಾರೆ ಎಂದರು. 

ರಾಷ್ಟ್ರೀಯ ಭದ್ರತೆಯಂಥ ಸೂಕ್ಷ್ಮ ವಿಷಯ ಮತ್ತು ಅಗ್ನಿಪಥ ಉಪಕ್ರಮದ ಬಗ್ಗೆ ರಾಹುಲ್‌ ಅವರು ದೇಶವನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಂಗ್ ಹೇಳಿದರು. 

ʻನಮ್ಮ ಯೋಧರು ದೇಶದ ಗಡಿಗಳನ್ನು ರಕ್ಷಿಸುತ್ತಾರೆ. ಇದು ರಾಷ್ಟ್ರೀಯ ಭದ್ರತೆಯ ಅಂತಹ ಸೂಕ್ಷ್ಮ ವಿಷಯ. ಅಗ್ನಿವೀರರ ಬಗ್ಗೆ ದೇಶವನ್ನು ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ನೀವು ಅನುಮತಿಸಿದಾಗ ನಾನು ಹೇಳಿಕೆ ನೀಡಲು ಸಿದ್ಧ,ʼ ಎಂದು ಸಿಂಗ್ ಹೇಳಿದರು.  

ಹುತಾತ್ಮ ಅಗ್ನಿವೀರರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಲಾಗಿದೆ. ಆದರೆ, ಅದು ಕೇವಲ ವಿಮೆ ಪಾವತಿಯೇ ಹೊರತು ಪರಿಹಾರವಲ್ಲ ಎಂದು ರಕ್ಷಣಾ ಸಚಿವರು ಸದನಕ್ಕೆ ತಿಳಿಸಿದ್ದಾರೆ ಎಂದು ಗಾಂಧಿ ಹೇಳಿದ್ದರು.

Tags:    

Similar News