ಕೋಲ್ಕತ್ತಾ ವೈದ್ಯೆ ಹತ್ಯೆ: ಸಂತ್ರಸ್ತೆ ಮನೆಗೆ ಮಮತಾ ಭೇಟಿ

Update: 2024-08-12 11:06 GMT

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹತ್ಯೆಗೀಡಾದ ಆರ್‌.ಜಿ. ಕರ್ ಆಸ್ಪತ್ರೆ ವೈದ್ಯೆಯ ನಿವಾಸಕ್ಕೆ ಭೇಟಿ ನೀಡಿ, ಪೋಷಕರು ಮತ್ತು ಕುಟುಂಬ ಸದಸ್ಯರೊಂದಿಗೆ ಸೋಮವಾರ (ಆಗಸ್ಟ್ 12) ಮಾತನಾಡಿದರು.

ಸಿಎಂ ಮಧ್ಯಾಹ್ನ 12.45 ರ ಸುಮಾರಿಗೆ ವೈದ್ಯೆಯ ನಿವಾಸವನ್ನು ತಲುಪಿದರು. ʻಸಿಎಂ ವೈದ್ಯೆಯ ಪೋಷಕರು ಮತ್ತು ಕುಟುಂಬ ಸದಸ್ಯರೊಂದಿಗೆ ಮಾತನಾಡಿದರು,ʼ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸ್ನಾತಕೋತ್ತರ ತರಬೇತಿ ಪಡೆಯುತ್ತಿದ್ದ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ (ಆಗಸ್ಟ್ 9) ಪತ್ತೆಯಾಗಿದೆ. ಈ ಸಂಬಂಧ ವ್ಯಕ್ತಿಯೊಬ್ಬರನ್ನು ಶನಿವಾರ (ಆಗಸ್ಟ್ 10) ಬಂಧಿಸಲಾಗಿದೆ.

Tags:    

Similar News