ಬೆಂಗಳೂರಿಗೆ ಒಬ್ಬನೇ ಮೇಯರ್ ಸಾಕು ಮತ್ತು ಕನ್ನಡಿಗ ಆಗಿರಬೇಕು: ಬಿಜೆಪಿ ಜೆಡಿಎಸ್‌ ಮೈತ್ರಿಕೂಟ

ಬೃಹತ್ ಬೆಂಗಳೂರು ಆಡಳಿತ ಮಸೂದೆಯನ್ನು ವಿರೋಧಿಸುವ ನಿರ್ಧಾರವನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸೋಮವಾರ ಪ್ರಕಟಿಸಿದ್ದು, ನಗರವನ್ನು ಬಹು ಸಣ್ಣ ನಿಗಮಗಳಾಗಿ ವಿಭಜಿಸುವ ಪ್ರಸ್ತಾಪವನ್ನು ಟೀಕಿಸಿದೆ. ಬೆಂಗಳೂರಿಗೆ ಒಂದೇ ಮೇಯರ್ ಇರಬೇಕು, ಮೇಯರ್ ಕನ್ನಡಿಗನಾಗಿರಬೇಕು ಎಂದು ಎರಡು ಪಕ್ಷಗಳು ಅಭಿಪ್ರಾಯಪಟ್ಟಿವೆ.

Update: 2024-09-10 07:44 GMT
ವಿರೋಧ ಪಕ್ಷದ ನಾಯಕ ಆರ್ ಅಶೋಕ
Click the Play button to listen to article

ಬೃಹತ್ ಬೆಂಗಳೂರು ಆಡಳಿತ ಮಸೂದೆಯನ್ನು ವಿರೋಧಿಸುವ ನಿರ್ಧಾರವನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸೋಮವಾರ ಪ್ರಕಟಿಸಿದ್ದು, ನಗರವನ್ನು ಬಹು ಸಣ್ಣ ನಿಗಮಗಳಾಗಿ ವಿಭಜಿಸುವ ಪ್ರಸ್ತಾಪವನ್ನು ಟೀಕಿಸಿದೆ. ಬೆಂಗಳೂರಿಗೆ ಒಂದೇ ಮೇಯರ್ ಇರಬೇಕು, ಮೇಯರ್ ಕನ್ನಡಿಗನಾಗಿರಬೇಕು ಎಂದು  ಎರಡು ಪಕ್ಷಗಳು ಅಭಿಪ್ರಾಯಪಟ್ಟಿವೆ. 

ಬ್ರಾಂಡ್ ಬೆಂಗಳೂರು ಸಮಿತಿಯ ಸದಸ್ಯ ವಿ ರವಿಚಂದರ್ ಅವರು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಕರಡು ಮಸೂದೆಯ ಅವಲೋಕನವನ್ನು ಮಂಡಿಸಿದ ಬಳಿಕ  ವಿರೋಧ ಪಕ್ಷದ ನಾಯಕ ಆರ್ ಅಶೋಕ ಈ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ಸರ್ಕಾರ ರಚಿಸಿದ ಸಮಿತಿಯು 12 ತಿಂಗಳ ಕಾಲ ಮಸೂದೆಗಾಗಿ ಕೆಲಸ ಮಾಡಿದೆ. ಪ್ರಸ್ತಾವಿತ ಮಸೂದೆಯ ಅಡಿಯಲ್ಲಿ ಕೆಳ ಹಂತದ ಆಡಳಿತವು ದುರ್ಬಲಗೊಳ್ಳುತ್ತದೆ ಎಂದು ವಾದಿಸಿದ ಅವರು, ದೇಶಕ್ಕೆ ಒಬ್ಬರೇ ಪ್ರಧಾನಿ ಮತ್ತು ರಾಜ್ಯಕ್ಕೆ ಒಬ್ಬ ಮುಖ್ಯಮಂತ್ರಿ ಹೇಗೆ ಇರುತ್ತಾರೋ ಅದೇ ರೀತಿ ಬೆಂಗಳೂರಿಗೆ ಒಬ್ಬ ಮೇಯರ್ ಇರಬೇಕು ಎಂದು ಒತ್ತಿ ಹೇಳಿದರು.  ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಿದರು, ಅದನ್ನು ವಿಭಜಿಸಬಾರದು, ಕನ್ನಡಿಗರಿಗೆ ನಗರದ ಮೇಲೆ ಸಾರ್ವಭೌಮ ಹಕ್ಕು ಇದೆ ಎಂದು ಅವರು ಹೇಳಿದರು. 

ಪ್ರತಿಪಕ್ಷಗಳು ತಮ್ಮ ನಿಲುವನ್ನು ಸರಕಾರಕ್ಕೆ ತಿಳಿಸಲಿದ್ದು, ಅದರಂತೆ ಚುನಾವಣೆ ನಡೆಸುವಂತೆ ಒತ್ತಾಯಿಸುವುದಾಗಿ ಅಶೋಕ್‌ ತಿಳಿಸಿದರು.

ಕರಡು ಮಸೂದೆಯಲ್ಲಿ ಸಮಿತಿಯ ಶಿಫಾರಸುಗಳಲ್ಲಿ ಕೇವಲ 83% ಮಾತ್ರ ಸೇರಿಸಲಾಗಿದೆ ಎಂದು ರವಿಚಂದರ್ ಉಲ್ಲೇಖಿಸಿದ್ದಾರೆ.

Tags:    

Similar News