ಬೆಳಗಾವಿಯ ಬಾಲಕಿ ಮಂಗಳೂರಿನಲ್ಲಿ ಕೊಲೆ

Update: 2024-08-06 14:29 GMT

ಚಿಕಿತ್ಸೆಗಾಗಿ ಮಂಗಳೂರಿಗೆ ಬಂದು ಬಂಧುಗಳ ಮನೆಯಲ್ಲಿ ಉಳಿದುಕೊಂಡಿದ್ದ ಬೆಳಗಾವಿ ಮೂಲದ ೧೩ ವರ್ಷದ ಬಾಲಕಿಯ ಹತ್ಯೆ ನಡೆದಿದೆ.

ಪಣಂಬೂರು ಸಮೀಪ ಜೋಕಟ್ಟೆಯಲ್ಲಿ ಘಟನೆ ನಡೆದಿದೆ. ಬೆಳಗಾವಿಯವರಾದ ಹನುಮಂತ ಎಂಬುವವರು ಇಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕೈ ನೋವಿನ ಚಿಕಿತ್ಸೆಗಾಗಿ ನಾಲ್ಕು ದಿನಗಳ ಹಿಂದೆ ಹನುಮಂತ ಅವರ ತಮ್ಮನ ಮಗಳು ಬೆಳಗಾವಿಯಿಂದ ಬಂದಿದ್ದಳು. ಮಂಗಳವಾರ ಬೆಳಗ್ಗೆ ಮನೆಯವರೆಲ್ಲಾ ಕೆಲಸಕ್ಕೆ ಹೋದ ವೇಳೆ ಈ ಘಟನೆ ನಡೆದಿದೆ.

ಬೆಳಗ್ಗೆ 10.30 ರ ವೇಳೆಗೆ ಬಾಲಕಿಯ ತಾಯಿಯು ಪಕ್ಕದ ಮನೆಯವರಿಗೆ ದೂರವಾಣಿ ಕರೆ ಮಾಡಿದ್ದರು. ಪಕ್ಕದ ಮನೆಯವರು ಫೋನ್‌ ಕೊಡಲು ಹೋದಾಗ ಬಾಲಕಿಯ ಮೃತದೇಹ ಕಾಣಿಸಿದೆ. ಬಾಲಕಿಯ ಕತ್ತಿಗೆ ಬಟ್ಟೆಯಿಂದ ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅವರು ತಕ್ಷಣವೇ ಬಾಲಕಿಯ ತಾಯಿಗೆ ಮಾಹಿತಿ ನೀಡಿದರು. ಅವರು ಹನುಮಂತ ಅವರಿಗೆ ತಿಳಿಸಿದರು. ಹನುಮಂತ ಅವರು ಬಂದು, ಪೊಲೀಸರಿಗೆ ದೂರು ನೀಡಿದರು.

ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಡಿಸಿಪಿ ದಿನೇಶ್‌ ಕುಮಾರ್‌ ಬಂದು ಪರಿಶೀಲನೆ ನಡೆಸಿದ್ದಾರೆ.

Tags:    

Similar News