ಕೈಸರ್‌ಗಂಜ್ ಕ್ಷೇತ್ರ: ಬ್ರಿಜ್ ಭೂಷಣ್ ಬದಲು ಪುತ್ರ ಅಭ್ಯರ್ಥಿ

Update: 2024-05-02 13:01 GMT
ಕರಣ್‌ ಭೂಷಣ್‌ ಸಿಂಗ್

ಉತ್ತರಪ್ರದೇಶದ ಕೈಸರ್‌ ಗಂಜ್‌ ಕ್ಷೇತ್ರದಿಂದ ಕರಣ್ ಭೂಷಣ್ ಸಿಂಗ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಗುರುವಾರ ಆಯ್ಕೆ ಮಾಡಿದೆ. ಕರಣ್‌ ಅವರ ತಂದೆ ಮತ್ತು ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟಿದೆ. ಬ್ರಿಜ್‌ಭೂಷಣ್‌ ಮಹಿಳಾ ಕುಸ್ತಿಪಟು ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. 

ಬ್ರಿಜ್ ಭೂಷಣ್ ಗೆ ಟಿಕೆಟ್ ನಿರಾಕರಿಸಿದ್ದರೂ, ಟಿಕೆಟ್‌ ಕುಟುಂಬದಲ್ಲೇ ಉಳಿದಿದೆ ಎಂಬುದು ಆರು ಬಾರಿ ಸಂಸದರಾಗಿರುವ ಅವರ ಪ್ರಭಾವವನ್ನು ತೋರಿಸುತ್ತದೆ. 

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ‌ ಅವರು ಸತತ ಐದು ಬಾರಿ ಗೆದ್ದಿರುವ, ಗಾಂಧಿ ಕುಟುಂಬದ ಭದ್ರಕೋಟೆಯಾದ ರಾಯ್‌ ಬರೇಲಿಯಿಂದ ದಿನೇಶ್ ಪ್ರತಾಪ್ ಸಿಂಗ್ ಅವರಿಗೆ ಟಿಕೆಟ್‌ ನೀಡಲಾಗಿದೆ. ಸೋನಿಯಾ ಅವರು ರಾಜ್ಯಸಭಾ ಸದಸ್ಯೆಯಾಗಿದ್ದು, ಕಾಂಗ್ರೆಸ್ ಈ ಸ್ಥಾನಕ್ಕೆ ಅಭ್ಯರ್ಥಿಯನ್ನು ಇನ್ನೂ ಘೋಷಿಸಬೇಕಿದೆ.

Tags:    

Similar News