ಬಿಹಾರ ರಾಜಭವನ ವಿ/ಎಸ್‌ ಶಿಕ್ಷಣ ಇಲಾಖೆ:

ವಿಶ್ವವಿದ್ಯಾನಿಲಯಗಳ ಖಾತೆ ಸಕ್ರಿಯಗೊಳಿಸಲು ಬ್ಯಾಂಕ್‌ಗಳಿಗೆ ಸೂಚನೆ

Update: 2024-03-04 10:59 GMT
ಬಿಹಾರ ರಾಜಭವನ

ಪಾಟ್ನಾ, ಮಾ.3- ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾನಿಲಯಗಳ ಖಾತೆಗಳನ್ನು ಸ್ಥಗಿತಗೊಳಿಸಿರುವ ಶಿಕ್ಷಣ ಇಲಾಖೆಯ ಆದೇಶವನ್ನು ರದ್ದುಗೊಳಿಸುವಂತೆ ಬಿಹಾರ ರಾಜಭವನ ಭಾನುವಾರ ಬ್ಯಾಂಕ್‌ಗಳಿಗೆ ಪತ್ರ ಬರೆದಿದೆ.

ಶಿಕ್ಷಣ ಇಲಾಖೆ ಇತ್ತೀಚೆಗೆ ಕರೆದಿದ್ದ ಪರಿಶೀಲನಾ ಸಭೆಗೆ ಹಾಜರಾಗದ ವಿಶ್ವವಿದ್ಯಾಲಯಗಳ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಶಿಕ್ಷಣ ಇಲಾಖೆ ಬ್ಯಾಂಕ್‌ ಗಳಿಗೆ ಸೂಚಿಸಿತ್ತು. ರಾಜಭವನ ಮತ್ತು ಶಿಕ್ಷಣ ಇಲಾಖೆ ನಡುವಿನ ಬಿಕ್ಕಟ್ಟು ಉಲ್ಬಣಗೊಂಡಿದ್ದು, ಒಬ್ಬರು ವಿಸಿ ವಿರುದ್ಧ ಶಿಕ್ಷಣ ಇಲಾಖೆ ದೂರು ದಾಖಲಿಸಿದೆ.

ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ರಾಬರ್ಟ್ ಎಲ್ ಚೋಂಗ್ತು ಅವರು ವಿಶ್ವವಿದ್ಯಾನಿಲಯಗಳ ಖಾತೆಗಳನ್ನು ತಕ್ಷಣವೇ ಸಕ್ರಿಯಗೊಳಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಿದ್ದಾರೆ.

ಶಿಕ್ಷಣ ಇಲಾಖೆ ಫೆಬ್ರವರಿ ಅಂತ್ಯದಲ್ಲಿ ಕರೆದಿದ್ದ ಪರಿಶೀಲನಾ ಸಭೆಗೆ ಗೈರುಹಾಜರಾದ ಒಂದು ಹೊರತುಪಡಿಸಿ ಎಲ್ಲಾ ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾನಿಲಯಗಳ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವಂತೆ ಆದೇಶಿಸಿತ್ತು ಮತ್ತು ಉಪಕುಲಪತಿಗಳ ವೇತನವನ್ನು ತಡೆಹಿಡಿದಿತ್ತು.

ಶಿಕ್ಷಣ ಕಾರ್ಯದರ್ಶಿ ಬೈದ್ಯನಾಥ್ ಯಾದವ್ ಅವರ ಪತ್ರವನ್ನು (ಮಗಧ ವಿಶ್ವವಿದ್ಯಾನಿಲಯ ಮತ್ತು ಕಾಮೇಶ್ವರ್ ಸಿಂಗ್ ದರ್ಭಾಂಗ ಸಂಸ್ಕೃತ ವಿಶ್ವವಿದ್ಯಾನಿಲಯ ಹೊರತುಪಡಿಸಿ) ವಿಶ್ವವಿದ್ಯಾನಿಲಯಗಳ ಪರೀಕ್ಷಾ ನಿಯಂತ್ರಕರಿಗೆ ಕಳುಹಿಸಲಾಗಿದೆ.

ಶಿಕ್ಷಣ ಇಲಾಖೆ ಸಭೆಗೆ ಗೈರುಹಾಜರಾದ ವಿಸಿ, ಪರೀಕ್ಷಾ ನಿಯಂತ್ರಕರು ಮತ್ತು ಇತರ ಅಧಿಕಾರಿಗಳ ವಿರುದ್ಧ ಪೊಲೀಸ್ ದೂರು ನೀಡುವಂತೆ ದರ್ಭಾಂಗಾ ಜಿಲ್ಲಾ ಶಿಕ್ಷಣಾಧಿಕಾರಿ ಸಮರ್ ಬಹದ್ದೂರ್ ಸಿಂಗ್ ವಿಶ್ವವಿದ್ಯಾನಿಲಯ ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿದರು.

ಬಿಹಾರದ ಶಿಕ್ಷಣ ಸಚಿವ ವಿಜಯ್ ಕುಮಾರ್ ಚೌಧರಿ ಅವರು ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಲಭ್ಯವಾಗಲಿಲ್ಲ.

Tags:    

Similar News