ಉತ್ತರ ಪ್ರದೇಶದಲ್ಲಿ ಪತ್ರಕರ್ತನ ಹತ್ಯೆ; ಬೈಕ್ಗೆ ಗುದ್ದಿ ಬೀಳಿಸಿ ಮೂರು ಬಾರಿ ಗುಂಡಿನ ದಾಳಿ
35 ವರ್ಷದ ರಾಘವೇಂದ್ರ ಬಾಜಪೇಯಿ ಶನಿವಾರ ಮಧ್ಯಾಹ್ನ ಒಬ್ಬರ ಫೋನ್ ಕರೆ ಸ್ವೀಕರಿಸಿದ್ದರು. ಪೋನ್ ಕರೆಯ ಆಹ್ವಾನದ ಮೇರೆಗೆ ಅವರು ಮನೆಯಿಂದ ಹೊರಗೆ ಬಂದಿದ್ದರು. ಕೆಲವೇ ಹೊತ್ತಿನಲ್ಲಿ, ಅವರು ಹೆದ್ದಾರಿಯಲ್ಲಿ ಹತ್ಯೆಯಾಗಿದ್ದಾರೆ.;
ಉತ್ತರಪ್ರದೇಶದ ಸೀತಾಪುರದಲ್ಲಿ ಶನಿವಾರ ಲಖನೌ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಳೀಯ ಪತ್ರಕರ್ತನೊಬ್ಬನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತರನ್ನು ರಾಘವೇಂದ್ರ ಬಾಜಪೇಯಿ ಎಂದು ಗುರುತಿಸಲಾಗಿದ್ದು, ಅವರು ಉತ್ತರಪ್ರದೇಶದ ಹಿಂದಿ ದಿನಪತ್ರಿಕೆಯ ವರದಿಗಾಗು ಆರ್ಟಿಐ ಕಾರ್ಯಕರ್ತರಾಗಿದ್ದರು.
ಪ್ರಾಥಮಿಕ ವರದಿ ಪ್ರಕಾರ, ದುಷ್ಕರ್ಮಿಗಳು ಮೊದಲು ಬಾಜಪೇಯಿ ಅವರ ಬೈಕ್ಗೆ ಕಾರಿನಲ್ಲಿ ಡಿಕ್ಕಿ ಹೊಡೆಸಿದ್ದಾರೆ. ಅವರು ಆಯ ತಪ್ಪಿ ಬಿದ್ದಾತ ಮೂರು ಬಾರಿ ಗುಂಡು ಹಾರಿಸಿದ್ದಾರೆ. ಪ್ರಾರಂಭದಲ್ಲಿ ಘಟನೆಯನ್ನು ಅಪಘಾತ ಎಂದು ನಂಬಲಾಗಿತ್ತು. ಜಿಲ್ಲಾ ಆಸ್ಪತ್ರೆಗೆ ಸಾಗಿಸಿದಾಗ ವೈದ್ಯರು ಅವರ ದೇಹದಲ್ಲಿ ಮೂರು ಗುಂಡಿನ ಗಾಯಗಳನ್ನು ಪತ್ತೆ ಹಚ್ಚಿದ ನಂತರ ಇದು ಹತ್ಯೆ ಎಂದು ಗೊತ್ತಾಯಿತು.
35 ವರ್ಷದ ರಾಘವೇಂದ್ರ ಬಾಜಪೇಯಿ ಶನಿವಾರ ಮಧ್ಯಾಹ್ನ ಒಬ್ಬರ ಫೋನ್ ಕರೆ ಸ್ವೀಕರಿಸಿದ್ದರು. ಪೋನ್ ಕರೆಯ ಆಹ್ವಾನದ ಮೇರೆಗೆ ಅವರು ಮನೆಯಿಂದ ಹೊರಗೆ ಬಂದಿದ್ದರು. ಕೆಲವೇ ಹೊತ್ತಿನಲ್ಲಿ, ಅವರು ಹೆದ್ದಾರಿಯಲ್ಲಿ ಹತ್ಯೆಯಾಗಿದ್ದಾರೆ.
ತನಿಖೆ ಪ್ರಗತಿಯಲ್ಲಿದೆ ಎಂದ ಪೊಲೀಸರು
ಈ ಪ್ರಕರಣದ ಹಿಂದೆ ಯಾವ ಕಾರಣಗಳಿವೆ ಎಂಬುದನ್ನು ಪೊಲೀಸರು ಇನ್ನೂ ನಿಖರವಾಗಿ ತಿಳಿದುಕೊಳ್ಳಿಲ್ಲ. ಇದುವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಹತ್ಯೆಯ ಕುರಿತು ಅಧಿಕೃತ ದೂರು ನೀಡುವುದುಕ್ಕೆ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆಗೆ ನಾಲ್ಕು ಪೊಲೀಸ್ ತಂಡವನ್ನು ರಚಿಸಲಾಗಿದೆ. ಮಹೋಳಿ, ಇಮಲಿಯಾ ಮತ್ತು ಕೋಟ್ವಾಲಿ ಠಾಣೆಗಳ ಪೊಲೀಸರು ಮತ್ತು ವಿಶೇಷ ಕಾರ್ಯಪಡೆ (SOG) ತಂಡಗಳ ನೆರವಿನಿಂದ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ಭರವಸೆ ಪೊಲೀಸರು ನೀಡಿದ್ದಾರೆ.