ಅಬಕಾರಿ ನೀತಿ ಹಗರಣದ ಅನುಮೋದಕನ ತಂದೆ ಟಿಡಿಪಿ ಅಭ್ಯರ್ಥಿ

Update: 2024-03-30 12:10 GMT

ಅಮರಾವತಿ, ಮಾ.30- ದೆಹಲಿ ಅಬಕಾರಿ ಹಗರಣದ ಸಾಕ್ಷಿಯಾಗಿ ಬದಲಾದ ಆರೋಪಿ ರಾಘವ ಮಾಗುಂಟ ಅವರ ತಂದೆ ಎಂ. ಶ್ರೀನಿವಾಸುಲು ರೆಡ್ಡಿ ಅವರನ್ನು ಟಿಡಿಪಿ ಒಂಗೋಲ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.

ಶ್ರೀನಿವಾಸುಲು ರೆಡ್ಡಿ ಅವರು 2019 ರಲ್ಲಿ ವೈಎಸ್‌ಆರ್‌ಸಿಪಿ ಪಕ್ಷದಿಂದ ಒಂಗೋಲ್ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರು ಇತ್ತೀಚೆಗೆ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಪಕ್ಷವನ್ನು ತೊರೆದರು. 

ಶ್ರೀನಿವಾಸುಲು ರೆಡ್ಡಿಗೆ ಸೀಟು ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ರಾಜಕೀಯ ವಿಶ್ಲೇಷಕ ತೆಲಕಪಲ್ಲಿ ರವಿ, ʻಇದು ವಿಪರ್ಯಾಸ. ನೈತಿಕತೆ ಬಗ್ಗೆ ಮಾತನಾಡುತ್ತ ಇತರರನ್ನು ಟೀಕಿಸುವ ನಾವು ನಮ್ಮ ವಿಚಾರದಲ್ಲಿ ನೈತಿಕತೆ ಮರೆತುಬಿಡುತ್ತೇವೆ. ಕಳೆದ ವರ್ಷ ದೆಹಲಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಮಾಗುಂಟ ರಾಘವ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ನಂತರ ಅವರು ಸಾಕ್ಷಿಯಾಗಿ ಬದಲಾದರುʼ ಎಂದು ಹೇಳಿದರು. 

ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಟಿಡಿಪಿ ಮೈತ್ರಿ ಮಾಡಿಕೊಂಡಿದೆ. ಜಾರಿ ನಿರ್ದೇಶನಾಲಯವು ದೆಹಲಿ ಅಬಕಾರಿ ನೀತಿ ಹಗರಣ ದ ತನಿಖೆ ನಡೆಸುತ್ತಿದೆ. 

Tags:    

Similar News