Modi 3.0 ಮೊದಲ ವರ್ಷ | ಬಲವಿಲ್ಲದ ಬಲಶಾಲಿ ಮಿತ್ರರು; ನಿಶ್ಚಿಂತ ಪ್ರಧಾನಿ ಮೋದಿ
ಪ್ರಧಾನಿಯಾಗಿ ನರೇಂದ್ರ ಮೋದಿ ಅವರದ್ದು 11 ವರ್ಷ: ಅವರು ಮೂರನೇ ಅವಧಿಯಲ್ಲಿ ಅತ್ಯಂತ ದುರ್ಬಲರಾಗಿರುತ್ತಾರೆ ಎಂದು ಕಳೆದ ವರ್ಷ ಊಹಿಸಲಾಗಿತ್ತು. ಆದರೆ 2014-2024ರಲ್ಲಿ ಹೊಂದಿದ್ದಷ್ಟೇ ಅಧಿಕಾರವನ್ನು ಸಮ್ಮಿಶ್ರ ಸರ್ಕಾರದಲ್ಲಿ ಅನುಭವಿಸುತ್ತಿದ್ದಾರೆ.;
ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಬಳಿಕ ಮೊದಲ 'ನೈಜ ಸಮ್ಮಿಶ್ರ ಸರ್ಕಾರ'ದ ನೇತೃತ್ವ ವಹಿಸಿಕೊಂಡಿದ್ದು ಕಳೆದ ವರ್ಷ. ಕಳೆದ ವರ್ಷ ನಿಟ್ಟುಸಿರು ಬಿಟ್ಟಿದ್ದ ಅವರ ಟೀಕಾಕಾರರಲ್ಲಿ ಚಿಂತೆಯ ಗೆರೆ ಮೂಡಿದೆ. ಕಳೆದ ಜೂನ್ನಲ್ಲಿ ಅವರು ನೋಡಿದ್ದು ಭ್ರಮೆ ಅಥವಾ ರಾಜಕೀಯ ಭ್ರಮೆ ಮಾತ್ರ ಎಂಬ ಆತಂಕಕ್ಕೆ ಅವರು ಒಳಗಾಗಿದ್ದಾರೆ.
ದಾಖಲೆಯ ಮೂರನೇ ಬಾರಿಗೆ (ಜವಾಹರಲಾಲ್ ನೆಹರೂ ಅವರಂತೆ ಬಹುಮತವಿಲ್ಲದೆ, ಅವರು 1962ರಲ್ಲಿ ಮೂರನೇ ಬಾರಿಗೆ ಬಹುಮತ ಹೊಂದಿದ್ದರು) ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುಮಾರು ಹತ್ತುವರೆ ತಿಂಗಳುಗಳ ಕಾಲ, ಮೋದಿ ಕಳೆದ ಒಂದು ದಶಕದಲ್ಲಿ ಅವರು ಹೊಂದಿದ್ದ ಸ್ಥಾನಮಾನಕ್ಕೆ ಹೋಲಿಸಿದರೆ ಕುಗ್ಗಿದ ಪ್ರಧಾನಿಯಾಗಿ ಕಾಣುತ್ತಿದ್ದರು.
ವಿಶೇಷವಾಗಿ 2019ರ ನಂತರ, ಅವರ ಪಕ್ಷವು ಕೇವಲ ಸರಳ ಬಹುಮತವನ್ನು ಮಾತ್ರವಲ್ಲದೆ ಲೋಕಸಭೆಯಲ್ಲಿ 303 ಸ್ಥಾನಗಳನ್ನು ಗಳಿಸಿದಾಗ ಅವರ ಶಕ್ತಿ ಹೆಚ್ಚಾಗಿತ್ತು.
ಆದಾಗ್ಯೂ, 2016ರಲ್ಲಿ ಉರಿಯಲ್ಲಿ ಮತ್ತು 2019ರಲ್ಲಿ ಪುಲ್ವಾಮಾದಲ್ಲಿ ಭಯೋತ್ಪಾದಕರು ಮತ್ತೊಮ್ಮೆ ದಾಳಿ ಮಾಡಿದಾಗ ಪ್ರತೀಕಾರ ನೀಡಿದ್ದರೋ ಅದೇ ರೀತಿ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಮೋದಿ ಅವರಿಗೆ ಪ್ರತೀಕಾರದ ಕ್ರಮ ಕೈಗೊಳ್ಳಲು ಅವಕಾಶವನ್ನು ಒದಗಿಸಿತು.
ಆದರೆ ಮೋದಿ 3.0, ಅಥವಾ ಎನ್ಡಿಎ 1.0 ರ ಮೊದಲ ವರ್ಷದ ಮುಕ್ತಾಯದಲ್ಲಿ ರಾಜಕೀಯ ಸಮತೋಲನವನ್ನು ಪರಿಗಣಿಸಿದರೆ ಕಳೆದ ವರ್ಷಕ್ಕಿಂತ ನಿಶ್ಚಿತವಾಗಿಯೂ ಅದು ಅವರ ಪರವಾಗಿದೆ.
ಬದಲಾದ ಒಲವು
ತಿಂಗಳ ಹಿಂದಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ಮರು-ಉತ್ಥಾನಕ್ಕೆ ನೇರ ಸಾಕ್ಷ್ಯ ಇಲ್ಲದಿದ್ದರೂ, ಭಾರತ ಸರ್ಕಾರದ 'ಶಕ್ತಿಯುತ ರಾಷ್ಟ್ರೀಯವಾದಿ' ಪ್ರತಿಕ್ರಿಯೆಯ ನಂತರ ನಡೆದ ಹಿಂದಿನ ಚುನಾವಣೆಗಳಲ್ಲಿ ಜನರ ವರ್ತನೆಯನ್ನು ಗಮನಿಸಿದರೆ, ರಾಜಕೀಯದ ಒಲವು ಮತ್ತೊಮ್ಮೆ ಮೋದಿ ಪರವಾಗಿ ತಿರುಗಿದಂತೆ ಕಾಣುತ್ತದೆ.
ಆಪರೇಷನ್ ಸಿಂಧೂರ್ನ ನಂತರ ಮೋದಿ ಅವರ ರಾಜಕೀಯ ಪುನರುತ್ಥಾನಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಚುನಾವಣಾ ಪುರಾವೆಗಳು ಇಲ್ಲದಿದ್ದರೂ, ಭಾರತ ಸರ್ಕಾರದ ಬಲವಾದ ರಾಷ್ಟ್ರೀಯವಾದಿ ಪ್ರತಿಕ್ರಿಯೆಯ ನಂತರ ನಡೆದ ಹಿಂದಿನ ಚುನಾವಣೆಗಳಲ್ಲಿ ಜನರ ವರ್ತನೆಯನ್ನು ನೋಡಿದರೆ, ರಾಜಕೀಯದ ಒಲವು ಮತ್ತೊಮ್ಮೆ ಮೋದಿ ಪರವಾಗಿ ತಿರುಗಿದಂತೆ ಕಾಣುತ್ತದೆ.
ಸಿ-ವೋಟರ್ ನಡೆಸಿದ ಸಮೀಕ್ಷೆಯಲ್ಲಿ, 63.3 ಪ್ರತಿಶತ ಜನರು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಮೋದಿ ನೇತೃತ್ವದ ಸರ್ಕಾರ ನೀಡಿದ ಪ್ರತಿಕ್ರಿಯೆ ಮತ್ತು ಅದರಿಂದ ಉಂಟಾದ ಪರಿಸ್ಥಿತಿ, ಮಿಲಿಟರಿ ಸಂಘರ್ಷ ಸೇರಿದಂತೆ ಎಲ್ಲವನ್ನೂ ನಿರ್ವಹಿಸಿದ ರೀತಿಯ ಬಗ್ಗೆ ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಆದರೆ, ಆಪರೇಷನ್ ಸಿಂಧೂರ್ ಇನ್ನೂ ಚಾಲ್ತಿಯಲ್ಲಿದ್ದಾಗ ಮತ್ತು ಕದನ ವಿರಾಮ ಇನ್ನೂ ಘೋಷಿಸದೇ ಇದ್ದ ಸಂದರ್ಭದಲ್ಲಿ, 'ಸಂಪೂರ್ಣ ತೃಪ್ತಿ' ವ್ಯಕ್ತಪಡಿಸಿದ್ದ ಶೇ.68.1 ರಷ್ಟಿದ್ದ ಜನರ ಸಂಖ್ಯೆ ಶೇ. 4.8ರಷ್ಟು ಕಡಿಮೆಯಾಗಿತ್ತು.
ನರೇಂದ್ರ-ಸರೆಂಡರ್
ಕದನ ವಿರಾಮದ ಪರಿಕಲ್ಪನೆ ಅನೇಕರಿಗೆ ಪಥ್ಯವಾಗಲಿಲ್ಲ. ಏಕೆಂದರೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಮತ್ತಷ್ಟು ಹಾನಿ ಮಾಡಲು ಮೋದಿ ಸರ್ಕಾರ ಅವಕಾಶ ನೀಡಬೇಕಿತ್ತು ಎಂಬುದು ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು. ವಾಸ್ತವವಾಗಿ, 1971ರಲ್ಲಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದಂತೆ ಮೋದಿ ಅವರು ಮತ್ತೊಮ್ಮೆ ಪಾಠ ಕಲಿಸುವಲ್ಲಿ ವಿಫಲರಾದರು ಎಂಬುದು ಅನೇಕರ ಅಸಮಾಧಾನಕ್ಕೆ ಕಾರಣವಾಯಿತು.
ಮೋದಿಯವರ ಕ್ರಮಗಳನ್ನು ಯಾರು ‘ಸಂಪೂರ್ಣವಾಗಿ’ ಬೆಂಬಲಿಸಿದ್ದರೋ ಅವರ ಗುಂಪಿನಿಂದ ದೂರ ಸರಿದು ನಿಂತ ಈ ಜನರು, ಸೈದ್ಧಾಂತಿಕ ವಿರೋಧಿಗಳಾಗಿ ಬದಲಾಗಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಅವರು ಹಿಂದುತ್ವ ಮತ್ತು ಉಗ್ರ ರಾಷ್ಟ್ರೀಯತಾವಾದದ ರಾಜಕೀಯ ಮಿಶ್ರಣದ ಕಟ್ಟಾ ಬೆಂಬಲಿಗರಾಗಿಯೇ ಉಳಿದರು.
ಪ್ರಮುಖವಾಗಿ, ಕಾಂಗ್ರೆಸ್ ಪಕ್ಷವು ಬಿಜೆಪಿ ಪರ ಇರುವ ಇಂತಹವರನ್ನು ತಮ್ಮೆಡೆಗೆ ಸೆಳೆಯಲು, ಕೃತಕ ಬುದ್ಧಿಮತ್ತೆಯ ಮೂಲಕ (AI) ಸೃಷ್ಟಿಸಿದ ಒಂದು ಅವಿವೇಕದ ವಿಡಿಯೋವನ್ನು ಬಿಡುಗಡೆ ಮಾಡಿತು. ಈ ವಿಡಿಯೋದಲ್ಲಿ ಇಂದಿರಾ ಗಾಂಧಿಯನ್ನು ಹೋಲುವ ಪಾತ್ರವೊಂದು ಹಿಂದಿಯಲ್ಲಿ ಮೋದಿ ಅವರನ್ನು ಹೀಗೆ ತರಾಟೆಗೆ ತೆಗೆದುಕೊಳ್ಳುತ್ತದೆ: “ನರೇಂದ್ರ ಅವರೇ, ಏನು ಮಾಡಿದ್ದೀರಾ? ಬೆಂಬಲಿಗರು ಮತ್ತು ವಿರೋಧ ಪಕ್ಷದವರೊಂದಿಗೆ ನೀವು ನಿಮ್ಮ ಪೂರ್ಣ ಸಾಮರ್ಥ್ಯವನ್ನು ಬಳಸಬೇಕಿತ್ತು. ಸೇನೆ ಪೂರ್ಣ ಬಲದಿಂದ ಹೋರಾಡಿದ್ದರೆ, ವಿಜಯ ಕೇವಲ ಎರಡು ಹೆಜ್ಜೆ ದೂರದಲ್ಲಿತ್ತು..."
ಇದಾದ ನಂತರ ರಾಹುಲ್ ಗಾಂಧಿಯವರು ಕೂಡ ಪ್ರಧಾನಿ ವಿರುದ್ಧ 'ನರೇಂದ್ರ-ಸರೆಂಡರ್' ಎಂಬ ವ್ಯಂಗ್ಯದ ಮಾತಾಡಿದರು. ಇದು ಕೇವಲ ಒಂದು ವಿಷಯವನ್ನು ಬಿಂಬಿಸುತ್ತದೆ: ಭಾರತದ ಅತಿದೊಡ್ಡ ವಿರೋಧ ಪಕ್ಷವಾದ ಕಾಂಗ್ರೆಸ್ನ ದೃಷ್ಟಿಯಲ್ಲಿ, ಪಾಕಿಸ್ತಾನದ ವಿರುದ್ಧದ ಕ್ರಮಕ್ಕೆ ಸಿಕ್ಕ ಬೆಂಬಲ ಅಗಾಧ ಪ್ರಮಾಣದಲ್ಲಿ ಇರದೇ ಇದ್ದರೂ ಅದು ಮಹತ್ವದ್ದಾಗಿತ್ತು ಎಂಬುದು ಸ್ಪಷ್ಟ.
ಹಾಗಿದ್ದೂ ಪಾಕಿಸ್ತಾನದ ವಿರುದ್ಧ 'ಆಪರೇಷನ್ ಸಿಂಧೂರ್' ನಡೆಸಿದ ಕಾರಣಕ್ಕೆ ಮೋದಿ ಅವರಿಗೆ ಲಭ್ಯವಾದ ಸಾರ್ವಜನಿಕ ಬೆಂಬಲದ ಬಗ್ಗೆ ಇದು ಕೊನೆಯ ಮಾತೇನೂ ಅಲ್ಲ. ಶರತ್ಕಾಲದ ಕೊನೆಯಲ್ಲಿ ಬಿಹಾರದಲ್ಲಿ ಮುಂದಿನ ಸುತ್ತಿನ ಚುನಾವಣೆಗಳು ನಡೆಯುವ ಹೊತ್ತಿಗೆ, ಇನ್ನೂ ಅನೇಕ ಬೆಳವಣಿಗೆಗಳು ನಡೆಯುವುದು ನಿಶ್ಚಿತ. ಬಹುಶಃ ಭಾರತ-ಪಾಕಿಸ್ತಾನ ಗಡಿಯಲ್ಲೂ ಅಂತಹ ಬೆಳವಣಿಗೆಗಳು ನಡೆಯಬಹುದು. ಇದು ಸಾರ್ವಜನಿಕ ಭಾವನೆಗಳ ಮೇಲೆ ಹಿಂದಿನಂತೆ ಪ್ರಭಾವ ಬೀರಬಹುದು ಅಥವಾ ಪ್ರತಿಕೂಲ ಪರಿಣಾಮ ಬೀರಬಹುದು.
ಆದರೆ ಮೋದಿ 3.0, ಅಥವಾ ಎನ್ಡಿಎ 1.0 ರ ಮೊದಲ ವರ್ಷದ ಮುಕ್ತಾಯದಲ್ಲಿ ರಾಜಕೀಯ ಸಮತೋಲನವನ್ನು ಪರಿಗಣಿಸಿದರೆ ಕಳೆದ ವರ್ಷಕ್ಕಿಂತ ನಿಶ್ಚಿತವಾಗಿಯೂ ಅದು ಅವರ ಪರವಾಗಿದೆ.
ತಪ್ಪಿದ ಲೆಕ್ಕಾಚಾರ
ಕಳೆದ ವರ್ಷ ಮಾಡಿದ ಅಂದಾಜು ಭಿನ್ನವಾಗಿತ್ತು. ಮೋದಿ ಅವರ ಮೂರನೇ ಅಧಿಕಾರವಧಿ ಅತ್ಯಂತ ದುರ್ಬಲವಾಗಿರುತ್ತದೆ ಎಂದು ಭಾವಿಸಲಾಗಿತ್ತು. ಮೊದಲನೆಯದಾಗಿ 2014ರ ನಂತರ ಪ್ರಥಮ ಬಾರಿಗೆ ಸಂಸತ್ತಿನ ಕೆಳಮನೆಯಲ್ಲಿ ಬಿಜೆಪಿಯು ಪೂರ್ಣ ಬಹುಮತ (240)ವನ್ನು ಹೊಂದಿರಲಿಲ್ಲ. ಸಂಖ್ಯೆಯ ದೃಷ್ಟಿಯಿಂದ ಅದು ಮೂರು ಮಹತ್ವದ ಪಕ್ಷಗಳಾದ ಟಿಡಿಪಿ(16), ಜೆಡಿಯು (12) ಮತ್ತು ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್)(5) ಯನ್ನು ಅವಲಂಬಿಸಿತ್ತು.
ಬಹಳ ಕಾಲದಿಂದ ಕಡೆಗಣಿಸಲಾಗಿದ್ದ ಮತ್ತು ವಿರಳವಾಗಿ ಸಮಾಲೋಚನೆ ನಡೆಸುತ್ತಿದ್ದ ಪಕ್ಷಗಳಿಗೆ ಇನ್ನಾದರೂ ಜೀವ ಬರುತ್ತದೆ ಮತ್ತು ನೀತಿ ನಿರೂಪಣೆಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಮತ್ತು ತಮ್ಮ ಸದಸ್ಯರೇ ಮುಖ್ಯಸ್ಥರಾಗಿರುವ ಸಚಿವಾಲಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪಕ್ಷಗಳು, ಸರ್ಕಾರದ ನಿರ್ಧಾರ ಕೈಗೊಳ್ಳುವಾಗ ತಮ್ಮ ಪ್ರಭಾವವನ್ನು ಬಳಸಿಕೊಳ್ಳಲು ಬೇಡಿಕೆ ಇಡುತ್ತವೆ ಎಂದು ಭಾವಿಸಲಾಗಿತ್ತು.
ಆದರೆ ಕಳೆದ ಒಂದು ವರ್ಷದಲ್ಲಿ, ಈ ಪಕ್ಷಗಳು ಹೆಚ್ಚಾಗಿ ತಮ್ಮ ಹಕ್ಕನ್ನು ಪ್ರತಿಪಾದಿಸದೆ ಸುಮ್ಮನೆ ಕುಳಿತಿವೆ.. ಇದರ ಪರಿಣಾಮವಾಗಿ, ಮೋದಿ ಅವರು ತಮ್ಮ ಸಹಜ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಲು ಮತ್ತು ಮೃದು ಧೋರಣೆಯನ್ನು ತಳೆಯಲು ಹಾಗೂ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ.
ಸಡಿಲಾಗದ ಮೋದಿ ಹಿಡಿತ
ನರೇಂದ್ರ ಮೋದಿ ಅವರು ಗುಜರಾತ್ ದಿನಗಳಿಂದಲೂ ಇತರ ಪಕ್ಷಗಳು ಅಥವಾ ನಾಯಕರ ಜೊತೆಗಿನ 'ಸಹಯೋಗ'ದಲ್ಲಿ ಕೆಲಸ ಮಾಡಿಲ್ಲ ಎಂಬ ವಾಸ್ತವಾಂಶದ ಆಧಾರದ ಮೇಲೆ ಕಳೆದ ವರ್ಷ ಮೌಲ್ಯಮಾಪನ ಮಾಡಲಾಗಿತ್ತು. ಆದರೆ ವರ್ಷವಿಡೀ ಪರಿಸ್ಥಿತಿ ಹೇಗಿತ್ತೆಂದರೆ, ಯಾವುದೇ ಸಮ್ಮಿಶ್ರ ಪಾಲುದಾರರು ಮೋದಿ ತಮ್ಮ ಕಾರ್ಯಶೈಲಿಯನ್ನು 'ಬದಲಾಯಿಸಲು' ಯಾವುದೇ ಒತ್ತಡ ಹೇರಲಿಲ್ಲ.
ಇದರ ಫಲವಾಗಿ 2014 ಮತ್ತು 2024ರ ನಡುವೆ ಸರ್ಕಾರದಲ್ಲಿಅವರು ಹೊಂದಿದ್ದ ಅದೇ ಮಟ್ಟದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಸಹಕಾರಿಯಾಗಿದೆ ಎಂಬುದು ಸ್ಪಷ್ಟ.
ಲೋಕಸಭೆಯಲ್ಲಿ ಎನ್ಡಿಎಯ ಸಂಖ್ಯಾಬಲದ ಹಿನ್ನೆಲೆಯಲ್ಲಿ ಮೋದಿ ಎನ್ಡಿಎ ಸಮನ್ವಯ ಸಮಿತಿಯನ್ನು ರಚಿಸಲು ಮತ್ತು ಬಿಜೆಪಿಯೇತರ ನಾಯಕರನ್ನು ಅದರ ಸಂಚಾಲಕರನ್ನಾಗಿ ನೇಮಕ ಮಾಡಲು ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ ಎಂದು ಕಳೆದ ವರ್ಷ ಭಾವಿಸಲಾಗಿತ್ತು.
ಬಿಜೆಪಿ ಮತ್ತು ಆರ್ಎಸ್ಎಸ್ ನಡುವಿನ ಭಿನ್ನಾಭಿಪ್ರಾಯವು ಬಿಜೆಪಿ ಸಂಸದೀಯ ಬಹುಮತವನ್ನು ಪಡೆಯುವಲ್ಲಿ ವಿಫಲವಾಗಲು ಪ್ರಮುಖ ಕಾರಣವಾಗಿತ್ತು ಎಂಬುದು ಕೂಡ ಕಳೆದ ವರ್ಷದ ಲೆಕ್ಕಾಚಾರವಾಗಿತ್ತು.
ತಗ್ಗಿದ ವೈಭವೀಕರಣ
ಕಳೆದ ಒಂದು ವರ್ಷದ ಅವಧಿಯಲ್ಲಿ ಏನಾಗಿದೆ? ಮೋದಿ ಆರ್ಎಸ್ಎಸ್ನ ಉನ್ನತ ನಾಯಕರೊಂದಿಗೆ ಹೆಚ್ಚು ವಿನಮ್ರರಾಗಿದ್ದಾರೆ. ಈ ವರ್ಷದ ಮಾರ್ಚ್ ಅಂತ್ಯದಲ್ಲಿ ಅವರು ನಾಗ್ಪುರಕ್ಕೆ ಭೇಟಿ ನೀಡಿದ್ದು ಇದರ ಸಂಕೇತ. ಅವರು 2014ರಿಂದ ಅತ್ಯಂತ ಶ್ರದ್ಧೆಯಿಂದ ಬೆಳೆಸಿಕೊಂಡಿದ್ದ ತಮ್ಮ ವ್ಯಕ್ತಿತ್ವದ ವೈಭವೀಕರಣವನ್ನು ಕೂಡ ತಗ್ಗಿಸಿದ್ದಾರೆ.
ಆರ್ಎಸ್ಎಸ್ ಕೂಡ ಹರಿಯಾಣ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಪರವಾಗಿ ಯಶಸ್ವಿಯಾಗಿ ಪ್ರಚಾರ ಮಾಡಿದೆ ಮತ್ತು ಜಾರ್ಖಂಡ್ನಲ್ಲಿ ಅದು ಯಶಸ್ವಿಯಾಗದಿದ್ದರೂ, ಅಲ್ಲಿಯೂ ಅದರ ಕಾರ್ಯಕರ್ತರು ಸುಮ್ಮನೆ ಕುಳಿತಿರಲಿಲ್ಲ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೂ ಮೊದಲು, ಬಿಜೆಪಿಯ ಮುಂದಿನ ಅಧ್ಯಕ್ಷರು ಯಾರು ಎಂಬ ಸಂಕೀರ್ಣ ವಿಷಯಕ್ಕೆ ಪರಿಹಾರ ದಕ್ಕುವ ಸಾಧ್ಯತೆ ಕಾಣುತ್ತಿತ್ತು. ಆದರೆ ಆಪರೇಷನ್ ಸಿಂಧೂರ್ ನಂತರ, ಈ ವಿಷಯ ಮತ್ತೆ ತೆರೆಮರೆಗೆ ಸರಿದಿದೆ.
ಬಿಜೆಪಿ ಮುಂದಿನ ರಾಷ್ಟ್ರೀಯ ಅಧ್ಯಕ್ಷರನ್ನು 'ಆಯ್ಕೆ' ಮಾಡುವ ಮೊದಲು ಆಗಬೇಕಾಗಿರುವುದು ರಾಜ್ಯ ಘಟಕದ ಚುನಾವಣೆ. ಅದನ್ನು ಯಾವ ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುತ್ತದೆ ಮತ್ತುಅದಕ್ಕೆ ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸುವುದು ವಿವೇಕತನಕ್ಕೆ ಮೀರಿದ್ದು.
ಆದರೆ, ಮೋದಿ ಅವರಿಗೆ ತಮ್ಮ ಅದೃಷ್ಟ ಮತ್ತಷ್ಟು ಉತ್ತಮಗೊಳ್ಳುತ್ತಿದೆ ಎಂಬುದನ್ನು ಅರಿತು, ಇಂತಹ ನಿರ್ಣಾಯಕ ವಿಷಯದಲ್ಲಿ ಮತ್ತೊಮ್ಮೆ ಹೊಂದಾಣಿಕೆ ತೋರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ದಾರಿ ಮಧ್ಯೆ ಟ್ರಂಪ್
ಕಳೆದ ವರ್ಷದಲ್ಲಿ ರಾಹುಲ್ ಗಾಂಧಿ ಅವರು ಜಾತಿ ಗಣತಿಯ ವಿಚಾರದಲ್ಲಿ ಅಬ್ಬರದ ಪ್ರಚಾರ ಮಾಡಿದರು. ಬಹಳ ವಿಳಂಬದ ಬಳಿಕ ಮತ್ತು ನುಣುಚಿಕೊಳ್ಳುವ ಕ್ರಮವಾಗಿ ಮೋದಿ ತಮ್ಮ ನಿಲುವನ್ನು ಬದಲಿಸಿಕೊಂಡರು, ಮುಂದಿನ ಜನಗಣತಿಯಲ್ಲಿ ಪ್ರತಿವಾದಿಯ ಜಾತಿ ಗುರುತಿನ ಬಗೆಗಿನ ಪ್ರಶ್ನೆಯನ್ನು ಸೇರಿಸುವ ಸರ್ಕಾರದ ಉದ್ದೇಶವನ್ನು ಘೋಷಿಸಿದರು, ಇದರ ವೇಳಾಪಟ್ಟಿ ಅಂತಿಮವಾಗಿ ಪ್ರಕಟವಾಗಿದೆ.
ಮೋದಿ ಅವರ ದಾರಿಗೆ ಬಾರದ ಏಕೈಕ ಸಂಗತಿ ಎಂದರೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಉತ್ತಮ ಒಪ್ಪಂದ ಮಾಡಿಕೊಳ್ಳುವ ಮತ್ತು ಭಾರತ-ಅಮೆರಿಕ ಸಂಬಂಧಗಳನ್ನು ಮತ್ತಷ್ಟು ಸುಗಮಗೊಳಿಸುವ ಅವರ ಭರವಸೆ. ಆದರೆ ಟ್ರಂಪ್ ಭಾರತ-ಪಾಕಿಸ್ತಾನದ ಕದನ ವಿರಾಮಕ್ಕೆ ತಾನೇ ಮಧ್ಯಸ್ಥಿಕೆ ವಹಿಸಿದೆ ಎಂದು ಪದೇ ಪದೇ ಹೇಳುತ್ತಿರುವುದರಿಂದ, ಮೋದಿ ಈಗ ಬಹಳಷ್ಟು ವಿಷಯಗಳನ್ನು ನಿಭಾಯಿಸಬೇಕಾಗಿದೆ.
ನರೇಂದ್ರ ಮೋದಿ ಅವರು 2001ರ ಅಕ್ಟೋಬರ್ ನಿಂದ ನಿರಂತರವಾಗಿ ಸಾರ್ವಜನಿಕ ಹುದ್ದೆಯಲ್ಲಿದ್ದಾರೆ. ಅಲ್ಲಿಂದೀಚೆಗೆ ಅವರು ನಿರಂತರ ಒಂದಲ್ಲ ಒಂದು ಮೈಲಿಗಲ್ಲನ್ನು ದಾಟುತ್ತ ಬಂದಿದ್ದಾರೆ. ಆದರೆ ಕಳೆದ ವರ್ಷ ಜೂನ್ 4ರಂದು ಸಾರ್ವತ್ರಿಕ ಚುನಾವಣಾ ಫಲಿತಾಂಶಗಳು ಪ್ರಕಟವಾದಾಗ ಮತ್ತು ಜೂನ್ 9ರಂದು ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಇದ್ದ ಒತ್ತಡವನ್ನು ಗಮನಿಸಿದರೆ ಅವರು ಈಗ ಹೆಚ್ಚು ನಿರಾಳವಾಗಿ ಉಸಿರಾಡುತ್ತಿದ್ದಾರ