Bangalore Stampede: ಕಾಲ್ತುಳಿತ: ಸರ್ಕಾರದಿಂದ ಗ್ರಹಿಕೆಯಲ್ಲಿ ತಪ್ಪಾಗಿದೆ ಎಂದ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ

"ಮೊದಲು ಪ್ರಿಪೆರೇಡ್‌ ಬೇಡ ಎಂದು ಪೊಲೀಸರು ಹೇಳಿದ್ದರು. ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಜನ ಬಂದಿದ್ದರು. ಈ ಬಗ್ಗೆ ಗ್ರಹಿಕೆ ಮಾಡುವಲ್ಲಿ ತಪ್ಪಾಗಿದೆ," ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.;

Update: 2025-06-05 12:44 GMT

ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ 11 ಸಾವಿಗೆ ಕಾರಣವಾದ ಕಾಲ್ತುಳಿತ ಘಟನೆಯಲ್ಲಿ ಸರ್ಕಾರದಿಂದ ತಪ್ಪಾಗಿದೆ. ಜನಸಾಗರ ಸೇರುವ ಬಗ್ಗೆ ಅಂದಾಜು ಮಾಡದಿರುವುದು ಈ ದುರಂತಕ್ಕೆ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ವರದಿಗಾರರ ಜತೆ ಮಾತನಾಡಿದ ಅವರು, ಪೊಲೀಸರು ಪ್ರಿ-ಪೆರೇಡ್‌ (ಆರ್‌ಸಿಬಿ ತಂಡದ ಪೆರೇಡ್‌ ಮೊದಲು ವಿಧಾನಸೌಧ ಬಳಿ ಸನ್ಮಾನ ಸಮಾರಂಭ) ಮಾಡುವುದು ಭದ್ರತೆ ದೃಷ್ಟಿಯಿಂದ ಸಾಧ್ಯವಿಲ್ಲ ಎಂದು ಹೇಳಿದ್ದರು.  ಪ್ರಿಪೆರೇಡ್‌ ಮಾಡಲು ಸರ್ಕಾರದ  ಮೇಲೆ ಬಹಳ ಒತ್ತಡವಿತ್ತು.  ಆರ್‌ಸಿಬಿ ಫ್ರಾಂಚೈಸಿ ಕಡೆಯಿಂದ,ಇತರರಿಂದ ಒತ್ತಡವಿತ್ತು. ಹಾಗಾಗಿ ಸರ್ಕಾರ ಈ ಕಾರ್ಯಕ್ರಮಕ್ಕೆ ನಿರ್ಧಾರ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.

 "ಮೊದಲು ಪ್ರಿಪೆರೇಡ್‌ ಬೇಡ ಎಂದು ಪೊಲೀಸರು ಹೇಳಿದ್ದರು.  ಪ್ಲಾನಿಂಗ್‌ನಲ್ಲಿ ತಪ್ಪಾಗಿದೆ. ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಜನ ಬಂದಿದ್ದರು. ಈ ಬಗ್ಗೆ ಗ್ರಹಿಕೆ ಮಾಡುವಲ್ಲಿ ಸರ್ಕಾರದಿಂದ ತಪ್ಪಾಗಿದೆ, " ಎಂದು ಅವರು ತಿಳಿಸಿ, "ಪೊಲೀಸರು ಕಾರ್ಯಕ್ರಮದ ಬಗ್ಗೆ ಮೊದಲು ಬೇಡ ಎಂದಿದ್ದರು. ಬಳಿಕ ಕಾರ್ಯಕ್ರಮ ನಡೆಸಬಹುದು ಎಂದು ಹೇಳಿದ್ದಾರೆ. ಎಲ್ಲಿ ತಪ್ಪಾಗಿದೆ ಅಂತ ಹೇಳಿ ತನಿಖೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರದಿಂದ ಐಪಿಎಲ್‌ ಕಪ್‌ ಗೆದ್ದ ಆರ್‌ಸಿಬಿ ತಂಡವನ್ನು ಸನ್ಮಾನ ಮಾಡಬೇಕೆಂಬ ಉದ್ದೇಶದಿಂದ ವಿಧಾನಸೌಧ ಬಳಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಅಷ್ಟೊಂದು ಜನ ಬರುತ್ತಾರೆ ಎಂಬ ಬಗ್ಗೆ ಅಂದಾಜು ಮಾಡದಿರುವುದು ವೈಫಲ್ಯ. ಹಾಗಾಗಿ ಪೊಲೀಸರಿಗೆ ಜನದಟ್ಟಣೆಯನ್ನು ನಿಯಂತ್ರಿಸುವುದು ಕಷ್ಟವಾಯಿತು ಎಂದು ಯತೀಂದ್ರ ಹೇಳಿದರು. ಎಲ್ಲಿ ತಪ್ಪಾಗಿದೆ ಅಂತ ಹೇಳಿ 

ಪ್ರತಿಪಕ್ಷಗಳು ಘಟನೆ ಬಗ್ಗೆ ಆಕ್ಷೇಪ ಎತ್ತುವುದು ತಪ್ಪಲ್ಲ. ಸರ್ಕಾರ ಎಡವಿದಾಗ ಎಚ್ಚರಿಸುವ ಕೆಲಸವನ್ನು ಅವರು ಮಾಡಿದ್ದಾರೆ.   ಸರ್ಕಾರವೂ ಅದನ್ನು ಒಪ್ಪಿಕೊಂಡಿದೆ. ಅದರೆ ಅದೇ ಕಾರಣಕ್ಕೆ ರಾಜಕಾರಣ ಮಾಡಬಾರದು ಎಂದ ಯತೀಂದ್ರ ಸಿದ್ದರಾಮಯ್ಯ," ಎಲ್ಲಿ ತಪ್ಪಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ," ಎಂದು ವಿವರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕೇಳುವುದು ಸಹಜ. ಆದರೆ, ಸನ್ಮಾನ ಮಾಡಬೇಕೆಂದು ಬಿಜೆಪಿಯೂ ಒತ್ತಾಯಿಸಿತ್ತು ಎಂದು ಟೀಕಿಸಿದರು.

ಪ್ರತಿಪಕ್ಷಗಳು - ಆಕ್ಷೇಪ-  ತಪ್ಪೇನಿಲ್ಲ. ಸರ್ಕಾರ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಎಡವಿದಾ. ಹಿಪೋಕ್ರಸಿ ಮಾಡಬಾರದು.  ಎನೋ ತಪ್ಪಾದಾಗ ಸಿಎಂ, ಡಿಸಿಎಂ ರಾಜೀನಾಮೆ ಕೇಳೋದು ಸಹಜ. ಅವರ ತಪ್ಪಿಲ್ಲ. ಆದರೆ, ರಾಜಕಾರಣ ಮಾಡಬಾರದು," ಎಂದು ಅವರು ಹೇಳಿದರು.

Tags:    

Similar News