ಕಮಲ್ ಹಾಸನ್ ಪ್ರಕರಣ: ಕರ್ನಾಟಕ ಫಿಲ್ಮ್ ಚೇಂಬರ್ ಸಭೆಗೆ ಶಿವರಾಜ್ ಕುಮಾರ್ ಗೈರು?
ಥಗ್ ಲೈಫ್'ನ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ, "ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ" ಎಂದು ಕಮಲ್ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.;
ಕಮಲ್ ಹಾಸನ್ ಅವರ ಕನ್ನಡ ಭಾಷೆಯ ಕುರಿತಾದ ವಿವಾದಾತ್ಮಕ ಹೇಳಿಕೆಯು ಕರ್ನಾಟಕದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಫಿಲಂ ಛೇಂಬರ್ ಗುರುವಾರ (ಮೇ 29ರಂದು) ಕರೆದಿದ್ದ ಸಭೆಗೆ, ಕಮಲ್ ಹೇಳಿಕೆ ನೀಡುವಾಗ ಸಭೆಯಲ್ಲಿ ಸಾಕ್ಷಿಯಾಗಿದ್ದ ಶಿವರಾಜ್ಕುಮಾರ್ ಅವರು ಗೈರಾಗಲಿದ್ದಾರೆ.
ಥಗ್ ಲೈಫ್'ನ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ, "ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ" ಎಂದು ಕಮಲ್ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯನ್ನು ಖಂಡಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್) ಈ ವಿಷಯದ ಕುರಿತು ಚರ್ಚಿಸಲು ತುರ್ತು ಸಭೆಯನ್ನು ಕರೆದಿದೆ.
ಈ ಬಗ್ಗೆ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ನರಸಿಂಹಲು ಸ್ಪಷ್ಟಪಡಿಸಿದ್ದಾರೆ. ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ಅವರು, ಸಭೆಗೆ ಶಿವರಾಜಕುಮಾರ್ ಅವರನ್ನು ಆಹ್ವಾನಿಸಲಾಗಿದೆ. ಅದರೆ, ಅವರು ಸಭೆಗೆ ಹಾಜರಾಗುವ ಸಾಧ್ಯತೆ ಕಡಿಮೆ," ಎಂದು ಹೇಳಿದ್ದಾರೆ.
ಸಭೆಯಲ್ಲಿ ಕಮಲ್ರ ಚಿತ್ರ 'ಥಗ್ ಲೈಫ್'ನ ಬಿಡುಗಡೆಯನ್ನು ಕರ್ನಾಟಕದಲ್ಲಿ ನಿಷೇಧಿಸುವ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ. ಫಿಲ್ಮ್ ಚೇಂಬರ್ನ ಅಧ್ಯಕ್ಷ ನರಸಿಂಹುಲು ಅವರು, "ಕನ್ನಡ ಭಾಷೆಯ ಗೌರವವನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯತೆ. ಕಮಲ್ ಹಾಸನ್ರ ಹೇಳಿಕೆಯು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ, ಮತ್ತು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು," ಎಂದು ಹೇಳಿಕೆ ನೀಡಿದ್ದರು.
ಶಿವರಾಜ್ ಕುಮಾರ್ ನಿಲುವೇನು?
ಕಮಲ್ ಹಾಸನ್ರ ಹೇಳಿಕೆಯ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಉಪಸ್ಥಿತರಿದ್ದರೂ, ಅವರು ತಕ್ಷಣವೇ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ. ಆದರೆ, ನಂತರ ಮಾತನಾಡಿರುವ ಅವರ ಶಿವರಾಜ್ ಕುಮಾರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. "ಕಮಲ್ ಹಾಸನ್ ಅವರು ತಮಿಳಿನ ಹಿರಿಮೆಯನ್ನು ತಿಳಿಸುವ ಸಂದರ್ಭದಲ್ಲಿ ಆ ಹೇಳಿಕೆ ನೀಡಿರಬಹುದು. ಆದರೆ ಕನ್ನಡ ಭಾಷೆಯ ಇತಿಹಾಸವು ಸಾವಿರಾರು ವರ್ಷಗಳಷ್ಟು ಶ್ರೀಮಂತವಾಗಿದೆ, ಮತ್ತು ಇದನ್ನು ಯಾರೂ ತಿರಸ್ಕರಿಸಲಾಗದು," ಎಂದು ಅವರು ಹೇಳಿದ್ದಾರೆ.