ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವ ದೂರುದಾರನ ಆರೋಪ ಕುರಿತಂತೆ ಪರ- ವಿರೋಧದ ಚರ್ಚೆ ಆರಂಭವಾಗಿದೆ. ಸಾಕ್ಷಿ ದೂರುದಾನ ಹೇಳಿಕೆ ಬೆಂಬಲಿಸಿ ಹಲವು ಸ್ಥಳೀಯರು ಸಾಕ್ಷ್ಯ ನುಡಿಯಲು ಮುಂದೆ ಬಂದರೆ, ಮತ್ತೆ ಕೆಲವರು ಸಾಕ್ಷಿ ದೂರುದಾನದ ವಿರುದ್ಧ ತಿರುಗಿಬಿದ್ದಿದ್ದಾರೆ. ದೂರುದಾರನನ್ನು ವಕೀಲರ ಜೊತೆ ಕಳುಹಿಸದೇ ಪೊಲೀಸರ ಸುಪರ್ದಿಯಲ್ಲೇ ಇರಿಸಿಕೊಳ್ಳಬೇಕು ಎಂಬ ಸ್ಥಳೀಯರು ಆಗ್ರಹಿಸಿದ್ದಾರೆ. ಶ್ಯಾಮಸುಂದರ್ ಎಂಬುವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದು, ಸಾಕ್ಷಿ ದೂರುದಾರ ವ್ಯಕ್ತಿಯನ್ನು ಪೊಲೀಸ್ ಸುಪರ್ದಿಯಲ್ಲಿಯೇ ಇರಿಸಬೇಕು. ದೂರುದಾರ ಕೆಲವು ಖಾಸಗಿ ವ್ಯಕ್ತಿಗಳ ಮನೆಯಲ್ಲಿ ತಂಗುತ್ತಿರುವ ಮಾಹಿತಿ ಇದೆ. ಇದರಿಂದ ನಿಷ್ಪಕ್ಷಪಾತ ತನಿಖೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳದಲ್ಲಿ ಬುಧವಾರ ಯೂಟ್ಯೂಬರ್ಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಬಳಿಕ ಧರ್ಮಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಈ ಸಂಬಂಧ ದೂರು- ಪ್ರತಿ ದೂರು ದಾಖಲಾಗಿದೆ. ಘರ್ಷಣೆ ಕುರಿತಂತೆ ಸೂಕ್ತ ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚಿಸಿದ್ದಾರೆ.ಶೋಧ ಆರಂಭಿಸದ ಎಸ್ಐಟಿ ಬುಧವಾರ ನಡೆದ ಘರ್ಷಣೆಯ ಬಳಿಕ ಧರ್ಮಸ್ಥಳದಲ್ಲಿ ಗುರುವಾರ ನಡೆಯಬೇಕಾಗಿದ್ದ ಕಳೇಬರ ಶೋಧ ಕಾರ್ಯಾಚರಣೆ ಮಧ್ಯಾಹ್ನವಾದರೂ ಆರಂಭವಾಗಿರಲಿಲ್ಲ. 13ನೇ ಸ್ಥಳದ ಶೋಧ ಕಾರ್ಯ ವಿಳಂಬವಾಗಿದೆ. ಸಾಕ್ಷಿ ದೂರುದಾರನನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದು, ಎಸ್ಐಟಿ ಅಧಿಕಾರಿಗಳ ಜೊತೆಯಲ್ಲೇ ಇರಿಸಲಾಗಿದೆ. ಇನ್ನೊಂದೆಡೆ 13ನೇ ಸ್ಥಳದಲ್ಲಿ 15 ಅಡಿಗಿಂತಲೂ ಹೆಚ್ಚು ಆಳ ಅಗೆಯಬೇಕಾದ ಪರಿಸ್ಥಿತಿ ಇದೆ ಎನ್ನಲಾಗಿದೆ. ನೇತ್ರಾವತಿ ನದಿ ತಟದಲ್ಲಿರುವ 13 ನೇ ಸ್ಥಳದಲ್ಲಿ ಶವ ಹೂತಿಟ್ಟ ನಂತರ ಆಣೆಕಟ್ಟು ನಿರ್ಮಿಸಲಾಗಿದೆ. ಈ ಸಂದರ್ಭ ನದಿಯ ಹೂಳೆತ್ತಿ, ಇದೇ ಶವ ಹೂತಿರುವ ಜಾಗದಲ್ಲಿ ಹಾಕಲಾಗಿದೆ ಎನ್ನಲಾಗುತ್ತಿದೆ.ಸ್ಥಳೀಯ ಅಂಗಡಿ ಮಾಲೀಕ ಕೃಷ್ಣಪ್ಪ ಪೂಜಾರಿ ಪ್ರಕಾರ, ಇಲ್ಲಿ ಅಗೆಯಬೇಕಾದರೆ ಇಡೀ ದಿನ ಬೇಕು. ಅಲ್ಲಿ ಪಳಿಯುಳಿಕೆ ಇದ್ದರೂ ಬಹಳಷ್ಟು ಆಳದಲ್ಲಿ ಇರಬಹುದು ಎನ್ನುತ್ತಾರೆ. "ನನಗೆ 70 ವರ್ಷ ವಯಸ್ಸು. 40ವರ್ಷಗಳ ಹಿಂದಿನಿಂದಲೇ ಈ ಸ್ಥಳ ಎತ್ತರವಾಗಿದೆ" ಎಂದು ಹೇಳಿದರು.ಸ್ಥಳೀಯರು ಹಾಗೂ ಯೂಟ್ಯೂಬರ್ಗಳ ಘರ್ಷಣೆ ನಂತರ ಶೋಧ ಸ್ಥಳದಲ್ಲಿ ರಾಜ್ಯಮಟ್ಟದ ಮಾಧ್ಯಮಗಳು ಮಾತ್ರ ಬೀಡುಬಿಟ್ಟಿವೆ. ಸ್ಥಳೀಯ ಯೂಟ್ಯೂಬರ್ಗಳು ಕಾಣುತ್ತಿಲ್ಲ. ಧರ್ಮಸ್ಥಳ ಘರ್ಷಣೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಖಂಡಿಸಿದ್ದಾರೆ. ಮಾಧ್ಯಮದವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವ ದೂರುದಾರನ ಆರೋಪ ಕುರಿತಂತೆ ಪರ- ವಿರೋಧದ ಚರ್ಚೆ ಆರಂಭವಾಗಿದೆ. ಸಾಕ್ಷಿ ದೂರುದಾನ ಹೇಳಿಕೆ ಬೆಂಬಲಿಸಿ ಹಲವು ಸ್ಥಳೀಯರು ಸಾಕ್ಷ್ಯ ನುಡಿಯಲು ಮುಂದೆ ಬಂದರೆ, ಮತ್ತೆ ಕೆಲವರು ಸಾಕ್ಷಿ ದೂರುದಾನದ ವಿರುದ್ಧ ತಿರುಗಿಬಿದ್ದಿದ್ದಾರೆ. ದೂರುದಾರನನ್ನು ವಕೀಲರ ಜೊತೆ ಕಳುಹಿಸದೇ ಪೊಲೀಸರ ಸುಪರ್ದಿಯಲ್ಲೇ ಇರಿಸಿಕೊಳ್ಳಬೇಕು ಎಂಬ ಸ್ಥಳೀಯರು ಆಗ್ರಹಿಸಿದ್ದಾರೆ. ಶ್ಯಾಮಸುಂದರ್ ಎಂಬುವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದು, ಸಾಕ್ಷಿ ದೂರುದಾರ ವ್ಯಕ್ತಿಯನ್ನು ಪೊಲೀಸ್ ಸುಪರ್ದಿಯಲ್ಲಿಯೇ ಇರಿಸಬೇಕು. ದೂರುದಾರ ಕೆಲವು ಖಾಸಗಿ ವ್ಯಕ್ತಿಗಳ ಮನೆಯಲ್ಲಿ ತಂಗುತ್ತಿರುವ ಮಾಹಿತಿ ಇದೆ. ಇದರಿಂದ ನಿಷ್ಪಕ್ಷಪಾತ ತನಿಖೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳದಲ್ಲಿ ಬುಧವಾರ ಯೂಟ್ಯೂಬರ್ಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಬಳಿಕ ಧರ್ಮಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಈ ಸಂಬಂಧ ದೂರು- ಪ್ರತಿ ದೂರು ದಾಖಲಾಗಿದೆ. ಘರ್ಷಣೆ ಕುರಿತಂತೆ ಸೂಕ್ತ ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚಿಸಿದ್ದಾರೆ.ಶೋಧ ಆರಂಭಿಸದ ಎಸ್ಐಟಿ ಬುಧವಾರ ನಡೆದ ಘರ್ಷಣೆಯ ಬಳಿಕ ಧರ್ಮಸ್ಥಳದಲ್ಲಿ ಗುರುವಾರ ನಡೆಯಬೇಕಾಗಿದ್ದ ಕಳೇಬರ ಶೋಧ ಕಾರ್ಯಾಚರಣೆ ಮಧ್ಯಾಹ್ನವಾದರೂ ಆರಂಭವಾಗಿರಲಿಲ್ಲ. 13ನೇ ಸ್ಥಳದ ಶೋಧ ಕಾರ್ಯ ವಿಳಂಬವಾಗಿದೆ. ಸಾಕ್ಷಿ ದೂರುದಾರನನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದು, ಎಸ್ಐಟಿ ಅಧಿಕಾರಿಗಳ ಜೊತೆಯಲ್ಲೇ ಇರಿಸಲಾಗಿದೆ. ಇನ್ನೊಂದೆಡೆ 13ನೇ ಸ್ಥಳದಲ್ಲಿ 15 ಅಡಿಗಿಂತಲೂ ಹೆಚ್ಚು ಆಳ ಅಗೆಯಬೇಕಾದ ಪರಿಸ್ಥಿತಿ ಇದೆ ಎನ್ನಲಾಗಿದೆ. ನೇತ್ರಾವತಿ ನದಿ ತಟದಲ್ಲಿರುವ 13 ನೇ ಸ್ಥಳದಲ್ಲಿ ಶವ ಹೂತಿಟ್ಟ ನಂತರ ಆಣೆಕಟ್ಟು ನಿರ್ಮಿಸಲಾಗಿದೆ. ಈ ಸಂದರ್ಭ ನದಿಯ ಹೂಳೆತ್ತಿ, ಇದೇ ಶವ ಹೂತಿರುವ ಜಾಗದಲ್ಲಿ ಹಾಕಲಾಗಿದೆ ಎನ್ನಲಾಗುತ್ತಿದೆ.ಸ್ಥಳೀಯ ಅಂಗಡಿ ಮಾಲೀಕ ಕೃಷ್ಣಪ್ಪ ಪೂಜಾರಿ ಪ್ರಕಾರ, ಇಲ್ಲಿ ಅಗೆಯಬೇಕಾದರೆ ಇಡೀ ದಿನ ಬೇಕು. ಅಲ್ಲಿ ಪಳಿಯುಳಿಕೆ ಇದ್ದರೂ ಬಹಳಷ್ಟು ಆಳದಲ್ಲಿ ಇರಬಹುದು ಎನ್ನುತ್ತಾರೆ. "ನನಗೆ 70 ವರ್ಷ ವಯಸ್ಸು. 40ವರ್ಷಗಳ ಹಿಂದಿನಿಂದಲೇ ಈ ಸ್ಥಳ ಎತ್ತರವಾಗಿದೆ" ಎಂದು ಹೇಳಿದರು.ಸ್ಥಳೀಯರು ಹಾಗೂ ಯೂಟ್ಯೂಬರ್ಗಳ ಘರ್ಷಣೆ ನಂತರ ಶೋಧ ಸ್ಥಳದಲ್ಲಿ ರಾಜ್ಯಮಟ್ಟದ ಮಾಧ್ಯಮಗಳು ಮಾತ್ರ ಬೀಡುಬಿಟ್ಟಿವೆ. ಸ್ಥಳೀಯ ಯೂಟ್ಯೂಬರ್ಗಳು ಕಾಣುತ್ತಿಲ್ಲ. ಧರ್ಮಸ್ಥಳ ಘರ್ಷಣೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಖಂಡಿಸಿದ್ದಾರೆ. ಮಾಧ್ಯಮದವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.