Bihar Election Results| ಬಿಹಾರ ಚುನಾವಣೆ: ನಿತೀಶ್ ಅಲೆಯಲ್ಲಿ ಬಿರುಗಾಳಿ ಎಬ್ಬಿಸಿದ ಎನ್‌ಡಿಎ; ಆರ್‌ಜೆಡಿಗೆ ಹಿನ್ನಡೆ - ನೆಲಕಚ್ಚಿದ ಕಾಂಗ್ರೆಸ್

ಬಿಜೆಪಿಗೆ ಹಂಚಿಕೆಯಾಗಿದ್ದ 101 ಸ್ಥಾನಗಳಲ್ಲಿ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು ಕಳೆದ ವರ್ಷದ ಲೋಕಸಭೆ ಚುನಾವಣೆಯಲ್ಲಿ ಕಂಡಿದ್ದ ಹಿನ್ನಡೆಗೆ ಪ್ರತಿಕಾರವಾಗಿದೆ ಎಂದು ವಿಶ್ಲೇಷಿಸಲಾಗಿದೆ.

Update: 2025-11-14 00:50 GMT

ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಬಿಹಾರದಲ್ಲಿ ಭಾರಿ ಗೆಲುವು ದಾಖಲಿಸಲು ಸಜ್ಜಾಗಿದೆ. 243 ವಿಧಾನಸಭಾ ಸ್ಥಾನಗಳಲ್ಲಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. ಬಿಹಾರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಸರಿ ಪಕ್ಷವು ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ದಾಖಲಿಸುವತ್ತ ಹೆಜ್ಜೆ ಇಟ್ಟಿದೆ.

ಚುನಾವಣೆ ಆಯೋಗದ ಮಾಹಿತಿ ಪ್ರಕಾರ, ಬಿಜೆಪಿಗೆ ಹಂಚಿಕೆಯಾಗಿದ್ದ 101 ಸ್ಥಾನಗಳಲ್ಲಿ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು ಕಳೆದ ವರ್ಷದ ಲೋಕಸಭೆ ಚುನಾವಣೆಯಲ್ಲಿ ಕಂಡಿದ್ದ ಹಿನ್ನಡೆಗೆ ಪ್ರತಿಕಾರವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ ಬೆಂಬಲ ಎನ್‌ಡಿಎಗೆ ಲಾಭ ತಂದುಕೊಟ್ಟಿದೆ. 2020ರಲ್ಲಿ ಕೇವಲ 43 ಸ್ಥಾನ ಜಯಿಸಿದ್ದ ಜೆಡಿಯು, ಈಗ 70ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ಜೆಪಿ (ಆರ್ವಿ) 29 ಸ್ಥಾನಗಳಲ್ಲಿ ಸ್ಪರ್ಧಿಸಿ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆರ್‌ಜೆಡಿ ಹಾಗೂ ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನ್ 35 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಆರ್‌ಜೆಡಿ 26 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ.

ಮತಗಟ್ಟೆ ಸಮೀಕ್ಷೆಗಳು ಏನು ಹೇಳಿದ್ದವು?

ಬಹುತೇಕ ಎಲ್ಲಾ ಮತಗಟ್ಟೆ ಸಮೀಕ್ಷೆಗಳು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಸುಲಭದ ಗೆಲುವನ್ನು ಭವಿಷ್ಯ ನುಡಿದಿದ್ದವು.

ಆದರೆ, 'ಆಕ್ಸಿಸ್ ಮೈ ಇಂಡಿಯಾ' ಸಮೀಕ್ಷೆಯು ಎನ್‌ಡಿಎಗೆ 121-141 ಸ್ಥಾನಗಳೊಂದಿಗೆ ಅಲ್ಪ ಬಹುಮತ ಸಿಗಲಿದೆ ಎಂದು ಹೇಳಿದರೆ, ಮಹಾಘಟಬಂಧನ್‌ಗೆ 98-118 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಿದೆ.

'ಟುಡೇಸ್ ಚಾಣಕ್ಯ' ಸಮೀಕ್ಷೆಯು ಬಿಜೆಪಿ ನೇತೃತ್ವದ ಎನ್‌ಡಿಎಗೆ 160 ಸ್ಥಾನಗಳ ಬೃಹತ್ ಗೆಲುವನ್ನು ಊಹಿಸಿದೆ.

ಎರಡೂ ಬಣಗಳಲ್ಲಿ ವಿಶ್ವಾಸದ ಮಾತು

ಮತಗಟ್ಟೆ ಸಮೀಕ್ಷೆಗಳ ಹೊರತಾಗಿಯೂ, ಎರಡೂ ಮೈತ್ರಿಕೂಟಗಳು ತಮ್ಮ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿವೆ. ಎನ್‌ಡಿಎ ನಾಯಕರು ಸಮೀಕ್ಷೆಗಳನ್ನು ಆಧರಿಸಿ ಈಗಾಗಲೇ ಸಂಭ್ರಮದಲ್ಲಿದ್ದರೆ, ಮಹಾಘಟಬಂಧನ್ ನಾಯಕರು ಈ ಸಮೀಕ್ಷೆಗಳನ್ನು ತಿರಸ್ಕರಿಸಿದ್ದಾರೆ. ಜನ ಸ್ವರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್, "ಈ ಎಲ್ಲಾ ಸಮೀಕ್ಷೆಗಳು ನಕಲಿ. ಬಿಹಾರವು ಐತಿಹಾಸಿಕ ಬದಲಾವಣೆಯತ್ತ ಸಾಗುತ್ತಿದೆ" ಎಂದು ಹೇಳಿದ್ದರು. 

Live Updates
2025-11-14 11:44 GMT

ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿ (ಎನ್‌ಡಿಎ) ಸರ್ಕಾರದ ಆಡಳಿತ ಹಾಗೂ ಅಭಿವೃದ್ಧಿಯ ಅಜೆಂಡಾಗೆ  ದೊರೆತ ಜನಮನ್ನಣೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ. ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪೊಸ್ಟ್‌ವೊಂದನ್ನು ಮಾಡಿರುವ ಅವರು, ಎನ್‌ಡಿಎ ರಾಜ್ಯದ ಸಮಗ್ರ ಅಭಿವೃದ್ಧಿ ಖಚಿತಪಡಿಸಿದೆ. ನಮ್ಮ ಕಾರ್ಯಪಟುತನ ಮತ್ತು ರಾಜ್ಯವನ್ನು ಹೊಸ ಎತ್ತರಗಳಿಗೆ ಕೊಂಡೊಯ್ಯುವ ದೃಷ್ಟಿಕೋನವನ್ನು ಜನರು ನೋಡಿ ನಮಗೆ ಭಾರಿ ಬಹುಮತ ನೀಡಿದ್ದಾರೆ ಎಂದು ತಿಳಿಸಿದ್ದಾರೆ. 

ಮೋದಿಯವರು ಮುಖ್ಯಮಂತ್ರಿ ನಿತೀಶ್‌ ಕುಮಾರ್ ಹಾಗೂ ಮೈತ್ರಿ ಪಕ್ಷಗಳ ನಾಯಕರಾದ ಚಿರಾಗ್‌ ಪಸ್ವಾನ್, ಜಿತನ್‌ ರಾಮ್‌ ಮಂಜಿ ಮತ್ತು ಉಪೇಂದ್ರ ಕುಶ್ವಾಹಾ ಅವರಿಗೆ ಅಭಿನಂದನೆ ಸಲ್ಲಿಸಿದರು. ಮುಖ್ಯಮಂತ್ರಿ ನಿತೀಶ್‌ ಕುಮಾರ್  ಸೇರಿದಂತೆ ನಮ್ಮ ಎನ್‌ಡಿಎ ಕುಟುಂಬದ ಮೈತ್ರಿ ಸಹಯೋಗಿಗಳಾದ ಚಿರಾಗ್‌ ಪಸ್ವಾನ್ ಜೀ, ಜಿತನ್‌ ರಾಮ್‌ ಮಂಜಿ ಜೀ ಮತ್ತು ಉಪೇಂದ್ರ ಕುಶ್ವಾಹಾ ಜೀಗಳಿಗೆ ಈ ಭರ್ಜರಿ ಗೆಲುವಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಅವರು ತಿಳಿಸಿದರು. 

2025-11-14 11:33 GMT

ಬಿಜೆಪಿ 10 ಸ್ಥಾನಗಳನ್ನು ಗೆದ್ದಿದ್ದು, 81 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.  ಜೆಡಿಯ ಆರು ಸ್ಥಾನಗಳನ್ನು ಗೆದ್ದು, 77 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಆರ್‌ಜೆಡಿ ಈಗಾಗಲೇ ಮೂರು ಸ್ಥಾನಗಳನ್ನು ಮಾತ್ರ ಗೆದ್ದಿದ್ದು, 24 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ ಎಂದು ಚುನಾವಣಾ ಆಯೋಗದ ಮಾಹಿತಿಯಲ್ಲಿ ತಿಳಿಸಲಾಗಿದೆ.

2025-11-14 11:30 GMT

ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಬಿಜೆಪಿ ಎಂಟು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಮತ್ತು 83 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಜೆಡಿಯು ಆರು ಸ್ಥಾನಗಳಲ್ಲಿ ಗೆದ್ದಿದ್ದು, 77 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆರ್‌ಜೆಡಿ ಇದುವರೆಗೆ ಕೇವಲ ಒಂದು ಸ್ಥಾನ ಗೆದ್ದಿದ್ದು, 26 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಲೋಕ ಜನಶಕ್ತಿ ಪಾರ್ಟಿ (ರಾಮವಿಲಾಸ್) ಒಂದು ಸ್ಥಾನ ಗೆದ್ದಿದ್ದು, ಇನ್ನೂ 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

2025-11-14 11:13 GMT

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವನ್ನು “ಅಭಿವೃದ್ಧಿ ಬಿಹಾರ್”ಗಾಗಿ ನೀಡಿದ ಜನರ ಜಯ ಎಂದು ಕರೆದಿದ್ದಾರೆ. ಇದು ಪ್ರಗತಿಯಲ್ಲಿ ನಂಬಿಕೆಯಿರುವ ಪ್ರತಿಯೊಂದು ನಾಗರಿಕನ ಜಯವೆಂದೂ ಅವರು ಹೇಳಿದ್ದಾರೆ. ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಅವರು, “ಜಂಗಲ್ ರಾಜ ಮತ್ತು ತೃಪ್ತಿ ರಾಜಕಾರಣ”ಕ್ಕೆ ಸಂಬಂಧಿಸಿದವರು ರಾಜ್ಯವನ್ನು ಇನ್ನೆಂದಿಗೂ ದುರುಪಯೋಗಪಡಿಸಿಕೊಳ್ಳಲು ಅವಕಾಶ ಸಿಗುವುದಿಲ್ಲ ಎಂದು ಶಾ ಹೇಳಿದ್ದಾರೆ. ಜನರು ಈಗ ಕಾರ್ಯಪರ ರಾಜಕೀಯಕ್ಕೆ ಆಧಾರಿಸಿಕೊಂಡೇ ಮತ  ಹಾಕುತ್ತಾರೆ ಎಂದು ಅವರು ತಿಳಿಸಿದರು. 

 ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಎನ್‌ಡಿಎ ಮೈತ್ರಿಯ ಎಲ್ಲಾ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಈ ಜಯಕ್ಕಾಗಿ ಅಭಿನಂದನೆ ಸಲ್ಲಿಸಿದರು. ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಶ್ರಮಿಸಿದ ಬಿಜೆಪಿ ಕಾರ್ಯಕರ್ತರಿಗೆ ಅವರು ಕೃತಜ್ಞತೆ ವ್ಯಕ್ತಪಡಿಸಿದರು. ಈ ವೇಳೆ ಜನತೆಗೆ ಭರವಸೆ ನೀಡುತ್ತಾ  “ಬಿಹಾರದ ಜನರು, ವಿಶೇಷವಾಗಿ ನಮ್ಮ ತಾಯಂದಿರು ಮತ್ತು ಸಹೋದರಿಯರು ಎನ್‌ಡಿಎಗೆ ನೀಡಿರುವ ನಂಬಿಕೆ ಮತ್ತು ಆಶಯವನ್ನು ನಾವು ಮತ್ತಷ್ಟು ಸಮರ್ಪಣೆಯೊಂದಿಗೆ ಪೂರೈಸುತ್ತೇವೆ. ಮೋದಿ  ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಈ ಭರವಸೆಯನ್ನು ನಿಷ್ಠೆಯಿಂದ ನೆರವೇರಿಸುತ್ತದೆ ಎಂದು ಅವರು ತಿಳಿಸಿದ್ದಾರೆ. 

2025-11-14 11:08 GMT

ಚುನಾವಣೆ ಆಯೋಗದ ಮಾಹಿತಿಯ ಪ್ರಕಾರ, ಮಧುಬನ್, ಬರುರಾಜ್ ಮತ್ತು ಸಾಹೇಬ್‌ಗಂಜ್ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಜೆಡಿಯ,  ಕಳ್ಯಾಣಪುರ, ಅಲೌಲಿ, ಹರ್ಣೌಟ್, ಮೋಕಾಮಾ, ಮಸೌರಿಹಿ ಮತ್ತು ಬೆಳಗಂಜ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 

2025-11-14 10:56 GMT

ಎನ್‌ಡಿಎ ಈಗ 204 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಮತ್ತು ಪ್ರತಿಪಕ್ಷಗಳ ಮಹಾಘಟಬಂಧನ್‌ ಕೇವಲ 32 ಸ್ಥಾನಗಳಲ್ಲಿ ಮಾತ್ರ ಮುನ್ನಡೆ  ಸಾಧಿಸಿದೆ. 

2025-11-14 10:44 GMT

ರಾಷ್ಟ್ರೀಯ ಲೋಕ ಮೊರ್ಚಾ ಮುಖ್ಯಸ್ಥ ಉಪೇಂದ್ರ ಕುಶ್ವಾಹಾ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಮಹಾಘಟಬಂಧನ್‌ ವಿರೋಧ ಪಕ್ಷವನ್ನು ಕಟುವಾಗಿ ಟೀಕಿಸಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅವರ ನಡೆ–ನುಡಿಗಳು ಮತದಾರರನ್ನು ದೂರವಿಟ್ಟಿವೆ ಎಂದು ಅವರು ಹೇಳಿದರು. ತೇಜಸ್ವಿಗೆ ತೀವ್ರ ಸಂದೇಶ ನೀಡಿದ ಕುಶ್ವಾಹಾ “ತೇಜಸ್ವಿ ಯಾದವ್ ಮುಂದಿನ 10 ಅಥವಾ 20 ವರ್ಷಗಳಲ್ಲಿ ಅಧಿಕಾರಕ್ಕೆ ಬರಬೇಕೆಂದಿದ್ದರೆ, ತನ್ನ ಶೈಲಿ ಬದಲಿಸಬೇಕು. ಅವನೂ ಅವನವರ ವರ್ತನೆಯೂ ಬದಲಾಗಬೇಕು ಎಂದು ಅವರು ತಿಳಿಸಿದ್ದಾರೆ. 



2025-11-14 10:40 GMT

ಆರ್‌ಜೆಡಿ ನಾಯಕ ಮತ್ತು ಗ್ರ್ಯಾಂಡ್ ಅಲಯನ್ಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ರಾಘೋಪುರ್ ವಿಧಾನಸಭಾ ಕ್ಷೇತ್ರದಲ್ಲಿ ಈಗ 8,461 ಮತಗಳಿಂದ ಹಿನ್ನಡೆಯಲ್ಲಿದ್ದಾರೆ.

2025-11-14 10:27 GMT

ಬಿಜೆಪಿ 96 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ ಮತ್ತು ಅದರ ಎನ್‌ಡಿಎ ಮೈತ್ರಿ ಜೆಡಿಯು 85 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ವಿಪಕ್ಷಗಳ ಪೈಕಿ ಆರ್‌ಜೆಡಿ 23 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ ಮತ್ತು ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಮುನ್ನಡೆಯಲ್ಲಿದೆ.

2025-11-14 10:02 GMT

ಬಿಜೆಪಿ 95 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಮತ್ತು ಅದರ ಎನ್‌ಡಿಎ ಮೈತ್ರಿ ಜೆಡಿಯು 84 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.ವಿರೋಧ ಪಕ್ಷಗಳ ವಿಷಯದಲ್ಲಿ, ಆರ್‌ಜಿಡಿ 24 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಮತ್ತು ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಹೊಂದಿದೆ.

Tags:    

Similar News