Bangalore stampede: ಚಿನ್ನಸ್ವಾಮಿ ಕ್ರೀಡಾಂಗಣ ತುಮಕೂರಿಗೆ ಸ್ಥಳಾಂತರ?
ವಿಶಾಲವಾದ ಕ್ರೀಡಾಂಗಣದ ಜೊತೆಗೆ ದೊಡ್ಡ ಪ್ರಮಾಣದ ಪಾರ್ಕಿಂಗ್ ಸೌಲಭ್ಯದ ಅಗತ್ಯತೆ ಇದೆ. ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ಪ್ರೇಕ್ಷಕರು ಕುಳಿತುಕೊಳ್ಳುವಂತಹ ಸ್ಥಳದ ಅವಕಾಶ ಬೇಕಾಗಿದೆ!;
ಐಪಿಎಲ್ ಪಂದ್ಯಾವಳಿಯಲ್ಲಿ ಚೊಚ್ಚಲ ಕಪ್ ಮುಡಿಗೇರಿಸಿಕೊಂಡ ಆರ್ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಬಳಿಕ ಇದೀಗ ಕ್ರೀಡಾಂಗಣದ ಸ್ಥಳ ಬದಲಾವಣೆ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ.
ಕ್ರೀಡಾಂಗಣದ ಹೊರಗೆ 11 ಜನರು ಸಾವಿಗೆ ಕಾರಣವಾದ ಕಾಲ್ತುಳಿತ ದುರಂತವು ಬೆಂಗಳೂರಿಗೆ ಜನಸಂಖ್ಯೆಗನುಗುಣವಾಗಿ ವಿಶಾಲವಾದ ಕ್ರೀಡಾಂಗಣದ ಅಗತ್ಯ ಇದೆ ಎಂಬುದನ್ನು ಸಾಬೀತುಪಡಿಸಿದೆ. ಬೆಂಗಳೂರು ನಗರದ ಹೊರವಲಯಕ್ಕೆ ಕ್ರೀಡಾಂಗಣವನ್ನು ಸ್ಥಳಾಂತರಿಸಬೇಕು ಎಂಬ ಚರ್ಚೆಗೆ ದುರಂತವು ಪುಷ್ಠಿಕರಿಸಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರವಾಗಿ ಚರ್ಚೆ ಆರಂಭಗೊಂಡಿದೆ ಎಂದು ಮೂಲಗಳು ಹೇಳಿವೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 35 ಸಾವಿರದಿಂದ 40 ಸಾವಿರದಷ್ಟು ಆಸನಗಳಿವೆ. ಬೆಂಗಳೂರಿನಲ್ಲಿ ಪ್ರಸ್ತುತ ಜನಸಂಖ್ಯೆಗೆ ಇದು ಸಾಕಾಗುವುದಿಲ್ಲ. ನಗರ ಪ್ರದೇಶವು ಸಾಕಾಷ್ಟು ಬೆಳವಣಿಗೆ ಕಂಡಿದೆ. ಅಲ್ಲದೇ, ನಗರದ ಮಧ್ಯಭಾಗದಲ್ಲಿ ಕ್ರೀಡಾಂಗಣ ಇರುವುದರಿಂದ ಜನದಟ್ಟಣೆಯ ಜೊತೆಗೆ ಸಂಚಾರದಟ್ಟಣೆಯೂ ಹೆಚ್ಚಾಗಿದೆ. ಹೀಗಾಗಿ ವಿಶಾಲವಾದ ಕ್ರೀಡಾಂಗಣದ ಜೊತೆಗೆ ದೊಡ್ಡ ಪ್ರಮಾಣದ ಪಾರ್ಕಿಂಗ್ ಸೌಲಭ್ಯದ ಅಗತ್ಯತೆ ಇದೆ. ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ಪ್ರೇಕ್ಷಕರು ಕುಳಿತುಕೊಳ್ಳುವಂತಹ ಸ್ಥಳದ ಅವಕಾಶ ಇದೆ ಎಂಬುದು ಕ್ರಿಕೆಟ್ ಅಭಿಮಾನಿಗಳು ಆಗ್ರಹವಾಗಿದೆ.
ಕ್ರೀಡಾಂಗಣವನ್ನು1980ರಲ್ಲಿ ನಿರ್ಮಿಸಲಾಯಿತು. ಆಗ ಬೆಂಗಳೂರಲ್ಲಿ 16 ಲಕ್ಷ ದಷ್ಟು ಮಾತ್ರ ಜನಸಂಖ್ಯೆ ಇತ್ತು. ಕ್ರಿಕೆಟ್ ಅಭಿಮಾನಿಗಳ ಸ್ಥಳವಕಾಶಕ್ಕೆ ತಕ್ಕಂತೆ ಕ್ರೀಡಾಂಗಣ ಆಗ ಸಾಕಾಗಿತ್ತು. ಆದರೆ, ಈಗ ಬೆಂಗಳೂರು ವಿಶ್ವಮಟ್ಟಕ್ಕೆ ಬೆಳೆದಿದೆ. ಅಲ್ಲದೇ, ಜಾಗತಿಕವಾಗಿ ಪ್ರತಿ ಉದ್ಯಮವನ್ನು ಆಕರ್ಷಿಸುತ್ತಿದೆ. ದೇಶ-ವಿದೇಶದಿಂದಲೂ ಜನರು ಉದ್ಯೋಗವನ್ನು ಅರಿಸಿ ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಜನಸಂಖ್ಯೆ ಒಂದೂವರೆ ಕೋಟಿಗೂ ಅಧಿಕ ಇದೆ. ಇದರಲ್ಲಿ ಕ್ರಿಕೆಟ್ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ದಿನೇ ದಿನೇ ಬೆಳೆಯುತ್ತಿದೆ. ಹೊರವಲಯವನ್ನು ಸಹ ಬೆಂಗಳೂರಿನ ವ್ಯಾಪ್ತಿಗೆ ಸೇರಿಸಲಾಗುತ್ತಿದೆ. ಇದು ಬೆಂಗಳೂರಿನ ಜನಸಂಖ್ಯೆಯನ್ನು ಸಹ ವಿಸ್ತರಿಸುತ್ತಿದೆ. ಇದಕ್ಕೆ ತಕ್ಕಂತಹ ಸೌಲಭ್ಯಗಳನ್ನು ಸಹ ಕಲ್ಪಿಸಬೇಕಾಗಿರುವುದು ಸರ್ಕಾರದ ಹೊಣೆಯಾಗಿದೆ.
ಐಪಿಎಲ್ ಪ್ರಾರಂಭವಾಗಿ 18 ವರ್ಷಗಳು ಕಳೆದಿದ್ದು, ಅದರ ಜನಪ್ರಿಯತೆ ಹೆಚ್ಚುತ್ತಿದೆ. ಇದು ಬೆಂಗಳೂರು ನಗರಕ್ಕೂ ಸವಾಲನ್ನೊಡ್ಡಿದೆ. ಪ್ರಸ್ತುತ ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ ಮತ್ತು ಮೂಲಸೌಕರ್ಯ ಎರಡರಲ್ಲಿಯೂ ಅವಶ್ಯಕತೆಗಳಿಗೆ ತಕ್ಕಂತೆ ಇಲ್ಲವಾಗಿದೆ. ಅದು ಈಗ ತೀರಾ ಕಡಿಮೆ ಎನ್ನಿಸಿದೆ. ಕಾಲ್ತುಳಿತ ದುರಂತವು ಹಲವು ಸವಾಲುಗಳನ್ನು ಹೊರಹಾಕಿದೆ. ಹೀಗಾಗಿಯೇ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಸ್ಥಳಾಂತರಿಸುವ ಕುರಿತು ಉನ್ನತಮಟ್ಟದಲ್ಲಿ ಗಂಭೀರವಾಗಿ ಚರ್ಚೆಗಳು ಪ್ರಾರಂಭವಾಗಿದೆ.
ಕ್ರಿಕೆಟ್ ಕ್ರೀಡಾಂಗಣಕ್ಕಾಗಿ ಸರ್ಕಾರಿ ಭೂ ಹಂಚಿಕೆಯಾಗಿದೆ. ಆದರೂ ಹೊಸ ಕ್ರೀಡಾಂಗಣವನ್ನು ನಿರ್ಮಿಸುವ ಬಗ್ಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. ಇದೀಗ ಈ ವಿಚಾರವನ್ನು ರಾಜ್ಯ ಕ್ರಿಕೆಟ್ ಮಂಡಳಿಯು ಗಂಭೀರವಾಗಿ ಪರಿಗಣಿಸಬೇಕಿದೆ. ತುಮಕೂರು ಬಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಕಾರ್ಯ ನಿರ್ಮಾಣವಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕು ಸ್ಥಾಪನೆ ಸಹ ನೆರವೇರಿಸಿದ್ದಾರೆ. 50 ಎಕರೆ ಜಾಗದಲ್ಲಿ ಕ್ರೀಡಾಂಗಣ ತಲೆ ಎತ್ತಲಿದೆ. ಇದು ಮುಂದಿನ ವರ್ಷಗಳಲ್ಲಿ ಕ್ರಿಕೆಟ್ಗೆ ಹೊಸ ನೆಲೆಯಾಗಲಿದೆ. ಆದರೆ, ತುಮಕೂರು ಯೋಜನೆಯು ಬೆಂಗಳೂರಿನಿಂದ 90 ಕಿಲೋಮೀಟರ್ ದೂರದಲ್ಲಿದೆ. ಇದು ಕ್ರಿಕೆಟ್ ಉತ್ಸಾಹಿಗಳಿಗೆ ನಿರಾಸೆ ಮೂಡಿಸಿದೆ. ಬೆಂಗಳೂರು ನಗರದ ಸಮೀಪವೇ ಕ್ರೀಡಾಂಗಣ ಹೊಂದಬೇಕು ಎಂಬುದು ಕ್ರಿಕೆಟ್ ಅಭಿಮಾನಿಗಳ ಪ್ರಮುಖ ಬೇಡಿಕೆಯಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕ್ಯಾಂಪಸ್ಗೆ ಜಾಗ ನೀಡಲಾಗಿದೆ. ಇದು ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯಕ್ಕಿಂತ ಮೂರು ಪಟ್ಟು ಹೆಚ್ಚು ಹೊಂದಿದೆ. ಇದಲ್ಲದೇ, ನಗರದ ಹೊರವಲಯದ ಬೈಲಕೆರೆಯ ಯೋಜಿತ ಪೆರಿಫೆರಲ್ ರಿಂಗ್ ರಸ್ತೆ ಬಳಿಯ 40 ಎಕರೆ ಜಾಗ ಇದ್ದು, ಇದು ವಿಶ್ವ ದರ್ಜೆಯ ಕ್ರೀಡಾಂಗಣಕ್ಕೆ ಸೂಕ್ತವಾಗಿದೆ ಎಂದು ಹೇಳಲಾಗಿದೆ.
ಕೋಲಾರ, ಮಂಗಳೂರುಲ್ಲೂ ಜಾಗ
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ಗೆ ಕೋಲಾರ, ಚಿಕ್ಕಮಗಳೂರು, ಮಂಗಳೂರು, ಉಡುಪಿ ಮತ್ತು ಪುತ್ತೂರಿನಲ್ಲಯೂ ಭೂಮಿ ಮಂಜೂರು ಮಾಡಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ. ಆದರೆ ಅಲ್ಲಿ ಗಡಿ ಗೋಡೆಗಳನ್ನು ಹೊರತುಪಡಿಸಿದರೆ ಹೆಚ್ಚಾಗಿ ಅಭಿವೃದ್ಧಿಯಾಗಿಲ್ಲ. ಬಳ್ಳಾರಿ ಮತ್ತು ದಾವಣರೆಗೆಯಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಈ ಕುರಿತು ದ ಫೆಡರಲ್ ಕರ್ನಾಟಕ ಜೊತೆಗೆ ಮಾತನಾಡಿದ ಕ್ರೀಡಾ ಪತ್ರಕರ್ತ ಜೊಸೇಫ್ ಹೂವೆರ್, ರಾಜ್ಯದ ವಿವಿಧೆಡೆ ಕ್ರೀಡಾ ಅಸೋಯೇಷನ್ಗೆ ಭೂಮಿ ನೀಡಲಾಗಿದೆ. ಆದರೆ, ಬೆಂಗಳೂರಿನ ಸುತ್ತಮುತ್ತ ಜಾಗ ಎಲ್ಲಿ ಇದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಿಷೇಧಿಸುವ ಬಗ್ಗೆ ಚಿಂತನೆ ಇದೆ. ಆದರೆ ಎಲ್ಲಿ ಆ ಪಂದ್ಯಗಳನ್ನು ಆಡಿಸಲಾಗುತ್ತದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಕಾಲ್ತುಳಿತ ದುರಂತ ಬಳಿಕ ಆರ್ಸಿಬಿಯ ಯಾವೊಬ್ಬರು ಸಾವನ್ನಪ್ಪಿದ್ದ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಹೀಗಾಗಿ ಅವರಿಗೇಕೆ ಪಂದ್ಯಗಳನ್ನಾಡಲು ಜಾಗ ಕೊಡಬೇಕು ಎಂದು ಹೇಳಿದ್ದಾರೆ.
ಬೆಂಗಳೂರಲ್ಲಿ ನಡೆಯಬೇಕಿದ್ದ ಪಂದ್ಯ ಸ್ಥಳಾಂತರ
ಈ ನಡುವೆ, ಕಾಲ್ತುಳಿತ ದುರಂತ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದಿನ ದಿನದಲ್ಲಿ ನಿಗದಿಯಾಗಿದ್ದ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಂಡಿವೆ. ನಗರದಲ್ಲಿ ಕ್ರಿಕೆಟ್ ಆತಿಥ್ಯ ವಹಿಸಬೇಕಾಗಿರುವುದಕ್ಕೆ ದುರಂತ ಹೊಡೆತ ಬಿದ್ದಿದ್ದೆ. ನವೆಂಬರ್ 13ರಿಂದ 19ರವರೆಗೆ ನಡೆಯಬೇಕಿದ್ದಭಾರತ 'ಎ' ಮತ್ತು ದಕ್ಷಿಣ ಆಫ್ರಿಕಾ 'ಎ' ನಡುವಿನ ಪಂದ್ಯ ಸ್ಥಳಾಂತರಗೊಂಡಿದೆ. ಬೆಂಗಳೂರು ಪಂದ್ಯಗಳನ್ನು ಗುಜರಾತ್ನ ರಾಜ್ಕೋಟ್ಗೆ ಸ್ಥಳಾಂತರ ಮಾಡಲಾಗಿದ ಎಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ತಿಳಿಸಿದೆ. .