ಕಾಂತಾರ: ಅಧ್ಯಾಯ 1ಕ್ಕೆ ಬಹುಭಾಷಾ ನಟ ಜಯರಾಮ್ ಎಂಟ್ರಿ?

ಈ ಸೆಟ್‌ ಹವಾನಿಯಂತ್ರಣ, ಡಬ್ಬಿಂಗ್ ಸ್ಟುಡಿಯೋ ಮತ್ತು ಎಡಿಟಿಂಗ್ ಸೂಟ್‌ನಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.

Update: 2024-05-30 09:21 GMT
ಬಹುಭಾಷಾ ನಟ ಜಯರಾಮ್‌
Click the Play button to listen to article

ದಕ್ಷಿಣ ಭಾರತದಾದ್ಯಂತ ಹೆಸರಾಗಿರುವ ಮಲಯಾಳಂನ ಹೆಸರಾಂತ ನಟ ಜಯರಾಮ್, ಶಿವರಾಜಕುಮಾರ್ ನಟನೆಯ ಶ್ರೀನಿ ನಿರ್ದೇಶನದ ಘೋಸ್ಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದೀಗ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ: ಅಧ್ಯಾಯ 1ಕ್ಕೆ ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.

ಬಹುನಿರೀಕ್ಷಿತ ಬಹುಭಾಷಾ ಯೋಜನೆಯು ಸದ್ಯ ನಿರ್ಮಾಣ ಹಂತದಲ್ಲಿದ್ದು, ಜಯರಾಮ್ ಇದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಹೊಂಬಾಳೆ ಫಿಲ್ಮ್ಸ್ ಈ ಯೋಜನೆಯಲ್ಲಿ ಜಯರಾಮ್ ಅವರ ಪಾಲ್ಗೊಳ್ಳುವಿಕೆ ಬಗ್ಗೆ ಅಧಿಕೃತ ಹೇಳಿಕೆಯನ್ನು ಇನ್ನಷ್ಟೇ ನೀಡಬೇಕಿದೆ.

ಕಾಂತಾರ: ಅಧ್ಯಾಯ 1 ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸಿದ್ದು, ದಟ್ಟ ಅರಣ್ಯದ ನಡುವೆ ಹೊರಾಂಗಣ ದೃಶ್ಯಗಳ ಚಿತ್ರೀಕರಣಕ್ಕಾಗಿ ನಿರ್ಮಾಣ ತಂಡವು ತಾತ್ಕಾಲಿಕವಾಗಿ ಕುಂದಾಪುರದಲ್ಲಿ ಬೀಡುಬಿಟ್ಟಿದೆ. ಈಮಧ್ಯೆ, ಕಾಂತಾರ ಹಿಂದಿನ ತಂಡವು ಭಾರತೀಯ ಚಿತ್ರರಂಗದಲ್ಲಿ ಮತ್ತೊಮ್ಮೆ ಕ್ರಾಂತಿಯನ್ನುಂಟುಮಾಡಲು ಯೋಜಿಸಿದೆ. ರಾಮೋಜಿ ಫಿಲ್ಮ್ ಸಿಟಿಗೆ ಹೋಲಿಸಬಹುದಾದ 200x200 ಅಡಿಯ ವಿಸ್ತಾರವಾದ ಕಸ್ಟಮ್-ನಿರ್ಮಿತ ಸೆಟ್ ಅನ್ನು ಕುಂದಾಪುರದಲ್ಲಿ ನಿರ್ಮಿಸಲಾಗಿದೆ. ಈ ಸೆಟ್‌ ಹವಾನಿಯಂತ್ರಣ, ಡಬ್ಬಿಂಗ್ ಸ್ಟುಡಿಯೋ ಮತ್ತು ಎಡಿಟಿಂಗ್ ಸೂಟ್‌ನಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.

ಅನಿರುದ್ಧ್ ಮಹೇಶ್ ಮತ್ತು ಶನಿಲ್ ಗುರು ಅವರೊಂದಿಗೆ ಕಥೆಯನ್ನು ಬರೆದಿರುವ ರಿಷಬ್ ಶೆಟ್ಟಿ ಅವರು ನಿರ್ದೇಶನದೊಂದಿಗೆ ತಾವೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮೂಲ ಚಿತ್ರದ ಕೆಲವು ನಟರು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

Tags:    

Similar News