ವಚನ ದರ್ಶನ ಕಲಹ ಭಾಗ -2| ಬಸವಣ್ಣ- ಕರ್ನಾಟಕದ ಸಾಂಸ್ಕೃತಿಕ ಸಂಕೇತ

ಈಗಾಗಲೇ ಪ್ರಕಟವಾಗಿರುವ ಮೊದಲ ಭಾಗ (ಲಿಂಗಾಯತ-ಆರ್‌ಎಸ್‌ಎಸ್ ಕಲಹದಲ್ಲಿ ಮುನ್ನೆಲೆಗೆ ಬಂದ ʻವಚನ ದರ್ಶನʼ (ಭಾಗ-1)) ಯಾವ ರೀತಿಯಲ್ಲಿ ಸಂಘ ಪರಿವಾರ ವಚನಗಳನ್ನು , ಬಸವ ತತ್ವವನ್ನು ಹಾಗೂ ವಚನ ಸಂಸ್ಕೃತಿಯನ್ನು ತನ್ನ ಸಿದ್ಧಾಂತಕ್ಕೆ ತಕ್ಕಂತೆ ರೂಪಾಂತರಿಸಿ, ವಚನ ಮತ್ತು ಲಿಂಗಾಯತ ಪಂಥದ ಉದಾತ್ತ ಮೌಲ್ಯಗಳನ್ನು ಹಿಂದೂ ಧರ್ಮದ ಭಾಗವಾಗಿಸಲು ಪ್ರಯತ್ನಿಸುತ್ತಿದೆ ಎಂಬ ಲಿಂಗಾಯಿತರ ಆರೋಪದ ಬಗ್ಗೆ ವಿವರಿಸಲಾಗಿತ್ತು.

By :  MA Arun
Update: 2024-09-04 11:26 GMT

ಈ ವರ್ಷದ ಜನವರಿಯಲ್ಲಿ ಕರ್ನಾಟಕ ಸರ್ಕಾರವು ಬಸವಣ್ಣ ಅವರನ್ನು ಈ ಪ್ರಾಂತ್ಯದ ಸಾಂಸ್ಕೃತಿಕ ಸಂಕೇತ ಎಂದು ಘೋಷಿಸಿತು. ಮಹಾರಾಷ್ಟ್ರದಲ್ಲಿ ಮರಾಠ ದೊರೆ ಶಿವಾಜಿ ಅನುಭವಿಸುವ ಅಧಿಕೃತ ಸ್ಥಾನಮಾನವನ್ನು ಅವರಿಗೆ ನೀಡಿ ಗೌರವಿಸಿತು

ಈಗಾಗಲೇ ಪ್ರಕಟವಾಗಿರುವ ಮೊದಲ ಭಾಗ ಯಾವ ರೀತಿಯಲ್ಲಿ ಸಂಘ ಪರಿವಾರ ವಚನಗಳನ್ನು , ಬಸವ ತತ್ವವನ್ನು ಹಾಗೂ ವಚನ ಸಂಸ್ಕೃತಿಯನ್ನು ತನ್ನ ಅನುಕೂಲಕ್ಕೆ ಸೂಕ್ತವಾಗುವಂತೆ ರೂಪಾಂತರಿಸಿ, ವಚನ ಮತ್ತು ಲಿಂಗಾಯತ ಪಂಥದ ಉದಾತ್ತ ಮೌಲ್ಯಗಳನ್ನು ಹಿಂದೂ ಧರ್ಮದ ಭಾಗವಾಗಿಸಲು ಪ್ರಯತ್ನಿಸುತ್ತಿದೆ. ಅದನ್ನು ವಿರೋಧಿಸಿ, ಲಿಂಗಾಯತ ಪಂಥವು ಯಾವುದೇ ರೀತಿಯಲ್ಲೂ ಹಿಂದೂ ಧರ್ಮದ ಭಾಗವಲ್ಲ ಎಂದು ಸ್ಪಷ್ಟಪಡಿಸಲು ನಡೆಸುತ್ತಿರುವ ಹೋರಾಟದ ಚಿತ್ರಣ ನೀಡುತ್ತದೆ.

ಅದರ ಮುಂದುವರಿದ ಭಾಗವಾಗಿ ಲಿಂಗಾಯತ ಪಂಥದ ಮತ್ತು ವಚನ ಪರಂಪರೆಯ ಮೌಲ್ಯಗಳು, ಹಿಂದೂ ಧರ್ಮಕ್ಕಿತ ಭಿನ್ನ ಎಂಬುದನ್ನು ಕುರಿತು ಲಿಂಗಾಯತ ಪಂಥದ ಪರ, ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹಂಬಲಿಸುತ್ತಿರುವವರು ಹೇಳುವುದನ್ನು ಕೇಳಿಸಿಕೊಳ್ಳೋಣ:

“ವಚನಗಳನ್ನು ಉಪನಿಷತ್ತುಗಳ ವಿಸ್ತರಣೆಯಾಗಿ ನೋಡುವುದು ಒಂದು ಅಪಹಾಸ್ಯ. ವಚನಗಳನ್ನು ಕಾರ್ಮಿಕ ವರ್ಗ, ಕೆಳಜಾತಿಯ ಪುರುಷರು ಮತ್ತು ಮಹಿಳೆಯರು ರಚಿಸಿದ್ದಾರೆ. ಈ ಶರಣರಲ್ಲಿ ಎಷ್ಟು ಮಂದಿಗೆ ವೇದ ಮತ್ತು ಉಪನಿಷತ್ತುಗಳನ್ನು ಅಧ್ಯಯನ ಮಾಡಲು ಅವಕಾಶವಿತ್ತು? ಎಂದು ಶಿವಕುಮಾರ್ ಪ್ರಶ್ನಿಸುತ್ತಾರೆ.

ಸುವರ್ಣ ಟಿವಿಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸೈಬರ್ ಸೆಕ್ಯುರಿಟಿ ತಜ್ಞ ಶಿವಾನಂದ ಗುಂಡಣ್ಣನವರ್, “ಲಿಂಗಾಯತರು ವಿಭಿನ್ನವಾಗಿರಲು ಬಯಸಿದ್ದಕ್ಕಾಗಿ ಇತಿಹಾಸದಲ್ಲಿ ಶೋಷಣೆಗೆ ಒಳಗಾಗಿದ್ದಾರೆ. 16ನೇ ಶತಮಾನದಲ್ಲಿ ನಂಜನಗೂಡಿನಲ್ಲಿ 700 ಲಿಂಗಾಯತರನ್ನು ಕಗ್ಗೊಲೆ ಮಾಡಲಾಯಿತು. ಪ್ರೊ.ಕಲಬುರ್ಗಿಯಿಂದ ಹಿಡಿದು ಗೌರಿ ಲಂಕೇಶ್ ವರೆಗೆ ಪ್ರತ್ಯೇಕ ಧರ್ಮ ಕೇಳಿದವರೆಲ್ಲ ಭಾರೀ ಬೆಲೆ ತೆತ್ತಿದ್ದಾರೆ. ಆದರೆ ಪ್ರತ್ಯೇಕ ಧರ್ಮ ಬರುವವರೆಗೂ ನಮ್ಮ ಹೋರಾಡ ನಿಲ್ಲುವುದಿಲ್ಲ ಎಂದು ಹೇಳಿ ಮುಂದೆ ಮಾತನಾಡಲು ಬಿಡದ ಕಾರಣಕ್ಕಾಗಿ ಪುಸ್ತಕವನ್ನು ಹರಿದು ಹಾಕಿದರು. ಇಲ್ಲೊಂದು ವಿಷಯವನ್ನು ಸ್ಪಷ್ಟಪಡಿಸಬೇಕು. ಸುವರ್ಣ ಟಿವಿ ಬಿಜೆಪಿಯ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಒಡೆತನದಲ್ಲಿದೆ.

ಪುಸ್ತಕದ ಮುಖಪುಟದಲ್ಲಿ ಹಿಂದೂ ಸಂತ

ಹಿಂದೂ ಸಂತನ ಚಿತ್ರವಿರುವ ಪುಸ್ತಕದ ಮುಖಪುಟದ ಮೇಲೆ ಲಿಂಗಾಯತರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿ ಫೆಡರಲ್‌ನೊಂದಿಗೆ ಮಾತನಾಡಿದ ಚಿಂಚೋಳಿಯ ವಕೀಲ ನಂದೀಶ್ ಪಾಟೀಲ್, “ವಚನಗಳ ಪುಸ್ತಕದ ಮುಖಪುಟದಲ್ಲಿ ಹಿಂದೂ ಸಂತರು ಏನು ಮಾಡುತ್ತಿದ್ದಾರೆ? ಅವರಿಗೆ ಶರಣರ ಫೋಟೋ ಸಿಗಲಿಲ್ಲವೇ? ಇದು ಬಸವಣ್ಣನವರ ಚಿತ್ರ ಎಂದು ಅವರು ಹೇಳಿಕೊಳ್ಳವುದಿಲ್ಲ. ಆದರೆ ನಾವು ಅದನ್ನು ಬಸವಣ್ಣನವರ ಚಿತ್ರವಾಗಿ ನೋಡಬೇಕೆಂದು ಅವರು ಬಯಸುತ್ತಾರೆ. ಅವರು ಇಲ್ಲಿ ಮನಸ್ಸಿನೊಂದಿಗೆ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ” ಎಂದು ಅವರು ಹೇಳಿದರು.

ಕಲಬುರಗಿಯಲ್ಲಿ ಆಂದೋಲನದ ನೇತೃತ್ವ ವಹಿಸಿದ್ದ ಶೈಕ್ಷಣಿಕ ಮತ್ತು ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಅವರು ಪುಸ್ತಕದ ಎಲ್ಲಾ 20 ಅಧ್ಯಾಯಗಳನ್ನು ವಿಶ್ಲೇಷಿಸಿದ್ದಾರೆ. ಪುಸ್ತಕವು ಬಾಲಿಷವಾಗಿದೆ ಹಾಘೂ ಮತ್ತು ಯಾವುದೇ ಶೈಕ್ಷಣಿಕ ಮೌಲ್ಯವನ್ನು ಹೊಂದಿಲ್ಲ ಎಂದು ಅವರು ಹೇಳುತ್ತಾರೆ.

“ಇದು ಪಕ್ಷಪಾತದ ಪುಸ್ತಕ. ಈ ಪುಸ್ತಕವು ವೇದಗಳನ್ನು ಟೀಕಿಸುವ ಮತ್ತು ಸಾಮಾಜಿಕ ಸಮಸ್ಯೆಗಳನ್ನು ವಿಶ್ಲೇ಼ಷಿಸಿದ ವಚನಗಳನ್ನು ನಿರ್ಲಕ್ಷಿಸಿದೆ . ಪುಸ್ತಕದ ಕುರಿತು ಚರ್ಚೆಗೆ ಕರೆದು ಪತ್ರಿಕಾಗೋಷ್ಠಿ ನಡೆಸಿದ್ದೇವೆ. ಅವರು ನಮಗೆ ಯಾವುದೇ ದಿನ, ಯಾವುದೇ ಸಮಯದಲ್ಲಿ ಮತ್ತು ಎಲ್ಲಿ ಬೇಕಾದರೂ ನಮ್ಮನ್ನು ಚರ್ಚೆಗೆ ಆಹ್ವಾನಿಸಬಹುದು ಅವರು ಕರೆದ ಕಡೆ ಹೋಗಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದೇವೆ. ಆದರೆ ಇದುವರೆಗೂ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ' ಎಂದರು.

ಪಕ್ಷಪಾತವಿಲ್ಲ: ಪ್ರಕಾಶಕರು

ಪ್ರಕಾಶನ ತಂಡದ ಸದಸ್ಯರು, “ವಚನಗಳಲ್ಲಿ ಕಂಡುಬರುವ ಸಾಮಾಜಿಕ ಕಳಕಳಿಯ ಕುರಿತು ಜಿ.ಆರ್.ಜಗದೀಶ್ ಅವರ ಒಂದು ಅಧ್ಯಾಯ ಇರುವುದರಿಂದ ಪುಸ್ತಕವು ಪೂರ್ವಾಗ್ರಹ ಪೀಡಿತವಾಗಿಲ್ಲ” ಎಂದು ಸಮರ್ಥಿಸಿಕೊಳ್ಳುತ್ತಾರೆ. "ನಮ್ಮ ಕಾಳಜಿ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವುದು ಅಲ್ಲ ಆದರೆ ಅವರ ನಡುವೆ ಸಾಮರಸ್ಯವನ್ನು ಸಾಧಿಸುವುದು" ಎಂದು ಅವರು ಹೇಳುತ್ತಾರೆ.

ವಿವಾದಾತ್ಮಕ ಮುಖಪುಟದಲ್ಲಿ, ಪ್ರಕಾಶಕರು ಉದ್ದೇಶಪೂರ್ವಕವಾಗಿ ಶರಣರ ಚಿತ್ರವನ್ನು ಮುಖಪುಟದಲ್ಲಿ ಬಳಸಿಲ್ಲ ಎಂದು ಸ್ಪಷ್ಟಪಡಿಸುವ ಅವರು. “ವಚನಗಳು ಲಿಂಗಾಯತರಿಗೆ ಸೀಮಿತವಾಗಿಲ್ಲ. ನಾವು ಅವರಿಗೆ ಸಾರ್ವತ್ರಿಕ ಮನವಿಯನ್ನು ನೀಡಲು ಬಯಸಿದ್ದೇವೆ, ಆದ್ದರಿಂದ ನಾವು ಮುಖಪುಟಕ್ಕೆ ಶರಣರಲ್ಲದ ಚಿತ್ರವನ್ನು ಆರಿಸಿದ್ದೇವೆ, ”ಎಂದು ಅವರು ತಮ್ಮ ವಾದವನ್ನು ಮಂಡಿಸುತ್ತಾರೆ.

ವಚನಗಳನ್ನು ಸಾರ್ವತ್ರಿಕಗೊಳಿಸಲು ಅವರು ವೈದಿಕ ಸಂಪ್ರದಾಯದಲ್ಲಿ ಅದ್ದಿ ತೆಗೆದ ಚಿತ್ರವನ್ನು ಆರಿಸಬೇಕಿತ್ತೇ?, ಅದರಲ್ಲಿ ಏನು ತಪ್ಪಾಗಿದೆ," ಎಂದು ಈಗ ನಡೆಯುತ್ತಿರುವ ಪ್ರತಿಭಟನೆಯನ್ನು ಪ್ರಚಾರಕ್ಕಾಗಿ ಬೆರಳೆಣಿಕೆಯಷ್ಟು ಮಂದಿ ಮಾಡುತ್ತಿದ್ದಾರೆ ಎಂದು ತಳ್ಳಿ ಹಾಕಿದರು.

ಸಂಘ ಪರಿವಾರ ಮತ್ತು ವಚನ ಸಂಸ್ಕೃತಿಯ ನಡುವೆ ಸಿಕ್ಕಿಕೊಂಡವರು

ಒಟ್ಟಾರೆಯಾಗಿ ಪುಸ್ತಕವು ಸಂಘ ಪರಿವಾರ ಮತ್ತು ಲಿಂಗಾಯತ ಗುಂಪುಗಳ ನಡುವಿನ ರಣಕಣವಾಗಿ ಮಾರ್ಪಟ್ಟಿದೆ. ಪುಸ್ತಕ ಬಿಡುಗಡೆಯ ಪೂರ್ವಭಾವಿಯಾಗಿ, ಪ್ರಕಾಶಕರು ವಿವಿಧ ನಗರಗಳಲ್ಲಿ ಲಿಂಗಾಯತ ಸ್ವಾಮಿಗಳು ಮತ್ತು ಸಂಘಟನೆಗಳನ್ನು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನಿಸಿದರು.“ಲಿಂಗಾಯತ ಗುಂಪುಗಳು ಆ ರೀತಿಯ ಸಂಘಟನೆಗಳು ಮತ್ತು ಅದೇ ಸ್ವಾಮಿಗಳನ್ನು ಸಂಪರ್ಕಿಸಲು ಪ್ರಾರಂಭಿಸಿದವು, ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಲಾಯಿತು ಈ ಬಹಿಷ್ಕಾರ ಮುಂದುವರೆದಿದೆ” ಎಂದು ಹುಬ್ಬಳ್ಳಿಯ ಲಿಂಗಾಯತ ಕಾರ್ಯಕರ್ತ ಕುಮಾರಣ್ಣ ಪಾಟೀಲ್ ಫೆಡರಲ್‌ಗೆ ತಿಳಿಸಿದರು: “ಅವರು ಆಹ್ವಾನಿಸಿದ ಜನರನ್ನು ನಾವು ಭೇಟಿ ಮಾಡಿ ಅವರನ್ನು ಅಂಥ ಸಮಾವೇಶಗಳಿಗೆ ಹಾಜರಾಗದಂತೆ ತಡೆಯಲು ಪ್ರಯತ್ನಿಸಿದ್ದೇವೆ. ಅನೇಕರು ಒಪ್ಪಿಕೊಂಡರು, ಆದರೆ ಕೆಲವರು ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಅವರು ಹೇಳುತ್ತಾರೆ.

12 ನೇ ಶತಮಾನದಲ್ಲಿ ತನ್ನ ಬೇರುಗಳನ್ನು ಗುರುತಿಸುವ ಪ್ರಮುಖ ಲಿಂಗಾಯತ ಸಂಸ್ಥೆಯಾದ ಮೂರು ಸಾವಿರ ಮಠದ ಸ್ವಾಮಿಗಳು ಈ ಲಿಂಗಾಯತ ಮತ್ತು ಹಿಂದೂ ಧರ್ಮ ಪ್ರತಿಪಾದಕ ಆರ್‌ ಎಸ್‌ ಎಸ್‌ ನಡುವೆ ಸಿಕ್ಕು ನರಳುತ್ತಿದ್ದಾರೆ. ಸಂಘ ಪರಿವಾರಕ್ಕೆ ಸಾಂಪ್ರದಾಯಿಕವಾಗಿ ನಿಕಟವಾಗಿರುವ ಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಒಪ್ಪಿಕೊಂಡಿದ್ದರು ಮತ್ತು ಅವರ ಹೆಸರನ್ನು ಮುದ್ರಿಸಿ ಆಹ್ವಾನ ಪತ್ರಿಕೆಯನ್ನು ಸಹ ಪ್ರಸಾರ ಮಾಡಲಾಯಿತು. ಆದರೆ ಅವರು ವಿವಿಧ ಲಿಂಗಾಯತ ಗುಂಪುಗಳಿಂದ ಒತ್ತಡಕ್ಕೆ ಒಳಗಾಗಿ, ಅಂತಿಮವಾಗಿ ಹಿಂದೆ ಸರಿದರು.

ಸ್ವಾಮಿಗಳು ದೂರವಿರಿ

ಬೆಂಗಳೂರಿನಲ್ಲಿ ಸ್ವತಃ ವಿಎಚ್‌ಪಿ ಕಾರ್ಯಕರ್ತ ಬೇಲಿಮಠದ ಸ್ವಾಮಿಗಳು, ಒತ್ತಡಕ್ಕೆ ಮಣಿದು ತಮ್ಮ ಹೆಸರಿನೊಂದಿಗೆ ಆಹ್ವಾನ ಕಳುಹಿಸಿದ್ದರಿಂದ ಹಿಂದೆ ಸರಿದಿದ್ದಾರೆ. ಸ್ವಾಮಿ ಅವರು ಮೊದಲು ಒಪ್ಪಿಕೊಂಡಿದ್ದರೂ, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಪ್ರಮುಖ ಸ್ವಾಮಿಗಳು ದೂರ ಉಳಿದಿದ್ದರಿಂದ, ಪ್ರಕಾಶಕರು ಪುಸ್ತಕವನ್ನು ಬೆಂಬಲಿಸಲು ಇಬ್ಬರು ಅಷ್ಟೇನೂ ಮಹತ್ವವಲ್ಲದ ಲಿಂಗಾಯತ ಸ್ವಾಮಿಗಳನ್ನು ಸೇರಿಸಿಕೊಂಡಿದ್ದಾರೆ.

ಈ ಮಠಾಧೀಶರು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಲಿಂಗಾಯತರು ಹಿಂದೂಗಳು ಮತ್ತು ಪುಸ್ತಕದಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳುತ್ತಿದ್ದಾರೆ, ಇದು ಸಮುದಾಯದಿಂದ ಹಿನ್ನಡೆಗೆ ಕಾರಣವಾಗಿದೆ.

ಸುವರ್ಣ ಟಿವಿ ಚರ್ಚೆಯಲ್ಲಿ ಗುಂಡಣ್ಣನವರ್, ಲಿಂಗಾಯತ ಧರ್ಮದ ವಿರುದ್ಧ ಕೆಲಸ ಮಾಡಲು ಎಷ್ಟು ಹಣ ನೀಡಲಾಗಿದೆ ಎಂದು ಈ ಸ್ವಾಮಿಗಳಲ್ಲಿ ಒಬ್ಬರನ್ನು ಕೇಳಿದರು. "ಸರ್, ನಿಮಗೆ ಹಣ ಬೇಕಾದರೆ, ನಾವು ನಿಮಗೆ ಹೆಚ್ಚಿನದನ್ನು ನೀಡಬಹುದು," ಅವರು ಎಂದು ಹೇಳಿ ಸ್ವಾಮೀಜಿಗಳಿಗೆ ಆಘಾತವನ್ನುಂಟುಮಾಡಿದರು.

(ಈ ಲೇಖನದ ಅಂತಿಮ ಭಾಗ -3 ಸೆಪ್ಟೆಂಬರ್‌ 5ರಂದು ಪ್ರಕಟವಾಗಲಿದೆ.)

Tags:    

Similar News