ಭಾರತೀಯ ನ್ಯಾಯಸಂಹಿತೆ: ಕರ್ನಾಟಕ, ಕೇರಳದಲ್ಲಿ ಮೊದಲ ಪ್ರಕರಣ ದಾಖಲು

ಕರ್ನಾಟಕ ಪೊಲೀಸರು ತಮ್ಮ ಮೊದಲ ಬಿಎನ್‌ಎಸ್‌ ಪ್ರಕರಣವನ್ನು ನಿರ್ಲಕ್ಷ ಚಾಲನೆಯಿಂದ ಸಾವಿಗೆ ಕಾರಣವಾಗಿದ್ದಾರೆ ಎಂದು ದಾಖಲಿಸಿದ್ದಾರೆ.

Update: 2024-07-01 14:38 GMT

ಕೇರಳದ ಮೊದಲ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ದೂರು ಕರ್ನಾಟಕದ 24 ವರ್ಷದ ಬೈಕ್ ಸವಾರನ ಮೇಲೆ  ದಾಖಲಾಗಿದೆ. ಕರ್ನಾಟಕದಲ್ಲಿ ಇಂಥದ್ದೇ ಅಪರಾಧಕ್ಕಾಗಿ ಕಾರು ಚಾಲಕನ ವಿರುದ್ಧ ಮೊದಲ ಬಿಎನ್‌ಎಸ್‌ ಪ್ರಕರಣವನ್ನು ದಾಖಲಿಸಲಾಗಿದೆ.

ದಂಡ ವಿಧಿಸಲಾಗಿದೆ: ಕೇರಳದಲ್ಲಿ ಕೊಂಡೊಟ್ಟಿ ಠಾಣೆಯ ಪೊಲೀಸರು ಮಡಿಕೇರಿ ಮೂಲದ ಶಫಿ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 281 (ಸಾರ್ವಜನಿಕ ಮಾರ್ಗದಲ್ಲಿ ದುಡುಕಿನ ಚಾಲನೆ ಅಥವಾ ಸವಾರಿ) ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 194 ಡಿ ಅಡಿಯಲ್ಲಿ (ಶಿರಸ್ತ್ರಾಣ ಧರಿಸದೆ ಇರುವುದು) ಪ್ರಕರಣ ದಾಖಲಿಸಿದ್ದಾರೆ. 

ಕೊಳತ್ತೂರು ಜಂಕ್ಷನ್‌ನಲ್ಲಿ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿರುವುದನ್ನು ಕಂಡು, ಪ್ರಕರಣ ದಾಖಲಿಸಲಾಗಿದೆ ಎಂದು ಕೊಂಡೊಟ್ಟಿ ಪೊಲೀಸ್‌ ಎಸ್‌ಎಚ್‌ಒ ದೀಪಕುಮಾರ್‌ ತಿಳಿಸಿದ್ದಾರೆ. ಜಾಮೀನು ಸಿಗುವ ಅಪರಾಧವಾಗಿರುವುದರಿಂದ ಹೋಗಲು ಅನುಮತಿ ನೀಡಲಾಗಿದೆ. ಆದರೆ, ಆತನ ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಮೊದಲ ಪ್ರಕರಣ: ರವಿ ಎಚ್‌.ಎಸ್. ಅವರ ದೂರಿನ ಮೇರೆಗೆ ಬಿಎನ್‌ಎಸ್‌ಎಸ್ ಸೆಕ್ಷನ್ 173 ರಡಿ ರಾಜ್ಯದಲ್ಲಿ ಮೊದಲ ಎಫ್‌ಐಆರ್ ದಾಖಲಿಸಲಾಗಿದೆ. ʻವೇಗ ಮತ್ತು ನಿರ್ಲಕ್ಷ್ಯದ ಚಾಲನೆʼ,ʻನಿರ್ಲಕ್ಷ್ಯದಿಂದ ಸಾವುʼ ಎಂದು ಹೇಳುತ್ತದೆ.

ಹಾಸನ ಜಿಲ್ಲೆಯ ಹಳೇಬೀಡು ನಿವಾಸಿ ಸಾಗರ್ ಎಂಬಾತ ಏಕಾಏಕಿ ಕಾರು ಚಲಾಯಿಸಿದ್ದಾನೆ ಎಂದು ರವಿ ಆರೋಪಿಸಿದ್ದಾರೆ. ಏರ್‌ಬ್ಯಾಗ್‌ನಿಂದ ರವಿ ಮತ್ತು ಸಾಗರ್ ಪಾರಾಗಿದ್ದು, ಹಿಂದಿನ ಸೀಟಿನಲ್ಲಿದ್ದ ಅವರ ಅತ್ತೆಯ ತಲೆಗೆ ಗಂಭೀರ ಗಾಯಗಳಾಗಿವೆ. ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು.

ದೂರಿನ ಆಧಾರದ ಮೇಲೆ ಪೊಲೀಸರು ಸಾಗರ್ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 106 (ನಿರ್ಲಕ್ಷ್ಯದಿಂದ ಸಾವು) ಮತ್ತು 281 (ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

Tags:    

Similar News