ರಾಗ ಚಲಿಸುತ್ತದೆ, ಉಸಿರಾಡುತ್ತದೆ: ಗಾಯಕ ಅದರಲ್ಲಿ ಪಾಲ್ಗೊಳ್ಳುತ್ತಾನೆ

ಟಿ.ಎಂ. ಕೃಷ್ಣ ಅವರಿಗೆ ಸಂಗೀತ ಕಲಾನಿಧಿ ಪುರಸ್ಕಾರ ವಿವಾದ

Update: 2024-03-29 09:17 GMT

ಟಿ.ಎಂ.ಕೃಷ್ಣ ಅವರಿಗೆ ಸಂಗೀತ ಕಲಾನಿಧಿ ಪುರಸ್ಕಾರವನ್ನು ಘೋಷಿಸಿರುವುದು ವಿವಾದಕ್ಕೆ ಕಾರಣವಾಗಿದೆ. 

ಉರಿಯುವ ಬೆಂಕಿಗೆ ತುಪ್ಪ ಸುರಿಯುವುದು ಈ ಲೇಖನದ ಉದ್ದೇಶವಲ್ಲ.ಬದಲಾಗಿ, ಕರ್ನಾಟಕ ಸಂಗೀತಕ್ಕೆ ಮತ್ತು ಭಾರತೀಯ ಸಮಾಜದ ಕಲ್ಪನೆಗಳ ಜಗತ್ತಿಗೆ ಕೃಷ್ಣ ಅವರ ಕೊಡುಗೆಗಳನ್ನುವಿವರಿಸುವ ಬೆಂಕಿಯನ್ನು ನಂದಿಸುವ ಉದ್ದೇಶ ಹೊಂದಿದೆ. 

ಈ ಕಾರಣದ ಕೇಂದ್ರದಲ್ಲಿರುವ ವಿಷಯವು ಭಾರತೀಯ ಸಮಾಜದ ಸಾಂಕೇತಿಕ ಮತ್ತು ರೋಗಲಕ್ಷಣ ಈ ಎರಡರ ಸಮಸ್ಯೆಯಾಗಿದೆ. ಸಾಂಕೇತಿಕವಾಗಿ, ಕ್ಷೇತ್ರ ಯಾವುದೇ ಆಗಿರಲಿ, ಜಾತಿಯನ್ನು ಪ್ರಶ್ನಿಸುವ ಚಟುವಟಿಕೆಗಳು ಸವಲತ್ತು ಪಡೆದುಕೊಂಡ ಜಾತಿಗಳವರನ್ನು ಸ್ಪರ್ಶಿಸುತ್ತದೆ. ಒಂದು ರೋಗಲಕ್ಷಣವಾಗಿ ನೋಡಿದರೆ, ಹೊರಗಿಡುವಿಕೆ ನಡೆದಿದೆ ಎಂಬುದನ್ನು ಮತ್ತು ಉಳ್ಳವರು ಹಾಗೂ 'ಇತರ'ರನ್ನು ಹೊರಗಿಡಲು ಐತಿಹಾಸಿಕವಾಗಿ ನಿರ್ಮಿಸಲಾದ ಗೋಡೆಗಳ ಬಗ್ಗೆ ತಿಳಿಸುತ್ತದೆ. ನೀವು ಯಾವ ಕಡೆ ಇದ್ದೀರಿ ಎಂಬುದನ್ನು ಆಧರಿಸಿ, ಹೋರಾಡಲು ಏನಾದರೂ ಇರುತ್ತದೆ: ಒಂದು ಕಡೆ ಸವಲತ್ತು ಮತ್ತು ಇನ್ನೊಂದು ಕಡೆ ಸಾಮಾಜಿಕ ನ್ಯಾಯ. 

ಸಂಗೀತಗಾರನ ಅನ್ವೇಷಣೆ: ಕೃಷ್ಣ ಅವರು ಎತ್ತಿರುವ ಪ್ರಶ್ನೆಗಳು ಮತ್ತು ತಮ್ಮ ಸಂಗೀತ ಪ್ರಯಾಣದ ಮೂಲಕ ಅದಕ್ಕೆ ಉತ್ತರಗಳನ್ನು ಹುಡುಕುವಿಕೆಗೆ ನಡೆಸಿದ ಪ್ರಯತ್ನಗಳಿಂದ ಸಂಬಂಧಿಸಿದ ಸಮಸ್ಯೆಗಳ ಕುರಿತು ನಿಲುವು ತೆಗೆದುಕೊಳ್ಳಲು ಸಾಧ್ಯವಾಗಬಹುದು. ಇವು ಮುಖ್ಯ ಪ್ರಶ್ನೆಗಳಾಗಿದ್ದು, ಕೋಪ ಮತ್ತು ಅಸಹಿಷ್ಣುತೆಯಿಂದ ವಿಚಲಿತರಾಗುವ ಬದಲು ಸಮಸ್ಯೆಗಳತ್ತ ಗಮನ ಹರಿಸಲು ಸಹಾಯ ಮಾಡಬಹುದು. 

ಕೃಷ್ಣ ಅನೇಕ ವರ್ಷಗಳ ಹಿಂದೆ ನಡೆದ ಅನುಭವಿಸಿದ ತೀವ್ರ ಭಾವನಾತ್ಮಕ ಕ್ಷಣವೊಂದನ್ನುಸ್ಮರಿಸಿಕೊಳ್ಳುತ್ತಾರೆ. ಚೆನ್ನೈನ ಮೈಲಾಪುರದಲ್ಲಿ ತ್ಯಾಗರಾಜರ ಕೀರ್ತನೆಯನ್ನು ಹಾಡುತ್ತಿರುವಾಗ ಇದು ಸಂಭವಿಸಿತು. ಅವರು ಸುಂದರ ಕ್ಷಣವೊಂದನ್ನು ಅನುಭವಿಸುತ್ತಿದ್ದರು. ಸೃಜನಾತ್ಮಕ ಪ್ರಕ್ರಿಯೆಯಲ್ಲಿ ಕಳೆದುಹೋದಂತೆ ಭಾಸವಾಗಿ, ದೇಹದಿಂದ ನಿರ್ಗಮಿಸಿ ಹೊರಗಿನಿಂದ ನೋಡುತ್ತಿರುವ ಅನುಭವ ಆಯಿತು. 

ಇದು ಧಾರ್ಮಿಕ ಜನರು ಆಗಾಗ ಹೇಳುವ ಅಲೌಕಿಕ ಅನುಭವವನ್ನು ಹೋಲುತ್ತದೆ; ಒಂದು ರೀತಿಯ ಕಳೆದುಹೋಗುವಿಕೆ, ತೀವ್ರವಾದ ಸ್ವಯಂ ಒಂದಾಗುವಿಕೆ. ಆದರೆ, ಕೃಷ್ಣ ಧಾರ್ಮಿಕ ವ್ಯಕ್ತಿಯಲ್ಲ. ಹಾಗಾದರೆ, ಈ ಅನುಭವ ಎಲ್ಲಿಂದ ಬಂತು? 

ತಂತ್ರ ಮತ್ತು ವ್ಯಾಕರಣದಾಚೆ: ಅವರು ತಮ್ಮನ್ನು ಒಂದು ಬ್ರ್ಯಾಂ‌ಡ್‌ ನಂತೆ ನೋಡಲಾರಂಭಿಸಿದಾಗ, ಸೂಪರ್‌ಸ್ಟಾರ್ ಆಗಬೇಕೆಂದುಕೊಂಡಾಗ, ಪ್ರಸಿದ್ಧನಾಗಲು, ಅದರ ಬಗ್ಗೆ ಬರೆಯಲು ಬಯಸಿದಾಗ ಬಂದಿತು. ನಿಧಾನಿಸಬೇಕೆಂದು ಅವರನ್ನು ಒತ್ತಾಯಿಸಿತು; ಏನು ಮಾಡುತ್ತಿದ್ದೇನೆ, ಏನು ಹಾಡುತ್ತಿದ್ದೇನೆ ಎಂದು ಪ್ರಶ್ನಿಸಿಕೊಳ್ಳಲು ಹೇಳಿತು. ಸಂಗೀತವು ಕಲೆ - ತಂತ್ರ ಮತ್ತು ವ್ಯಾಕರಣವನ್ನು ಮೀರಿದ ವಿಷಯ ಎಂದು ಅವರು ಅರಿತುಕೊಂಡರು.ಅಲ್ಲಿ ಮೂಲಭೂತ ಅಸ್ತಿತ್ವದ ಪ್ರಶ್ನೆಗಳಿದ್ದವು. 

ಅವರು ಕೇಳಿಕೊಂಡರು: ಈ ಸಂಗೀತ ಎಲ್ಲಿಂದ ಬರುತ್ತದೆ? ಈ ರಾಗ ಎಲ್ಲಿಂದ ಬರುತ್ತದೆ? ಈ ನಿಯಮಗಳು, ನುಡಿಗಟ್ಟುಗಳು ಮತ್ತು ಆಲೋಚನೆಗಳು ಎಲ್ಲಿಂದ ಬರುತ್ತವೆ? ಹಳೆಯ ಮತ್ತು ಶುದ್ಧ ಎಂಬ ಈ ವಿಷಯ ಯಾವುದು? 

ಅವರು ತಮ್ಮ ಕೌಟುಂಬಿಕ ಸ್ಥಿತಿಗತಿಯನ್ನೂ ನೋಡಿದರು - ಸವಲತ್ತುಗಳಿರುವ, ಪ್ರಗತಿಪರ, ಕಾಸ್ಮೋಪಾಲಿಟನ್ ಮತ್ತು ಇಂಗ್ಲಿಷ್ ಮಾತನಾಡುವ, ಜಾತಿ ಕುರಿತು ಎಂದಿಗೂ ಚರ್ಚಿಸದೆ ಇರುವುದರಿಂದ ಅದು ಅಸ್ತಿತ್ವದಲ್ಲಿಲ್ಲ ಎಂದುಕೊಂಡ, ಪ್ರಶ್ನೆ ಕೇಳುವುದನ್ನು ಮತ್ತು ಯಾವುದೇ ಉತ್ತರ ಅಂತಿಮವಲ್ಲ ಎನ್ನುವುದನ್ನು ಪ್ರೋತ್ಸಾಹಿಸುವ ಮನೆತನ.

ಕರ್ನಾಟಕ ಸಂಗೀತ ಪರಿಸರ: ಈ ಸಮಯದಲ್ಲಿ ಅವರಿಗೆ ಹಾರ್ಪರ್‌ ಕಾಲಿನ್ಸ್‌ನಿಂದ ಪುಸ್ತಕವನ್ನು ಬರೆಯುವ ಅವಕಾಶ ಬಂದಿತು. ʻಎ ಸದರ್ನ್ ಮ್ಯೂಸಿಕ್: ದಿ ಕರ್ನಾಟಕ್ ಸ್ಟೋರಿ (2016)ʼ ಪ್ರಕಟಗೊಂಡಿತು.ಈ ಪುಸ್ತಕಕ್ಕಾಗಿ ಸಂಶೋಧಿಸುವಾಗ ಅವರು ಕರ್ನಾಟಕ ಸಂಗೀತದ ಪರಿಸರ, ಜಾತಿ ಮತ್ತು ಲಿಂಗದ ಬಗ್ಗೆ ಮತ್ತು ಜಾತಿ ಸಮಸ್ಯೆ ಕುರಿತು ಸ್ವಂತ ನಿಲುವನ್ನು ಪರಿಶೋಧಿಸಿದರು.

ತಮ್ಮ ಸಂಗೀತ ಪ್ರಪಂಚವನ್ನು ಆಕ್ರಮಿಸಿಕೊಂಡಿರುವ ಜನರು, ಬೇರ್ಪಡಿಸುವ ಗೋಡೆಗಳು ಮತ್ತು ಪರದೆಗಳ ಮೂಲಕ ಇತರರ ಪ್ರಪಂಚವನ್ನು ಹೇಗೆ ರಚಿಸುತ್ತಿದ್ದಾರೆ ಎಂಬುದನ್ನು ಅವರು ನೋಡಿದರು. ತಮ್ಮ ಪ್ರಪಂಚ ಮತ್ತು ಕಲೆ ಸಾಂಸ್ಕೃತಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಮಾನಸಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಶ್ರೇಷ್ಠ ಸ್ಥಾನವನ್ನು ಹೊಂದಿರುವುದನ್ನು ಗಮನಿಸಿದರು.

ಅವರು ಕೇಳಿಕೊಂಡ ಪ್ರಶ್ನೆಯೇನೆಂದರೆ, ನನ್ನ ಪ್ರಪಂಚ ಏಕೆ ಏಕರೂಪವಾಗಿದೆ ಮತ್ತು ಒಂದೇ ರೀತಿಯ ಜನರಿಂದ ಮಾಡಲ್ಪಟ್ಟಿದೆ? ಮತ್ತು ಒಬ್ಬ ಹಿಂದೂ ಅಲ್ಲದ ಅಥವಾ ನಾಸ್ತಿಕ ನನ್ನ ಕರ್ನಾಟಕ ಸಂಗೀತ ಪ್ರಪಂಚಕ್ಕೆ ಏಕೆ ಸೇರಬಾರದು? ಇದು ಏಕೆ ನಿರ್ದಿಷ್ಟ ಚಿಂತನೆ ಅಥವಾ ಧಾರ್ಮಿಕತೆಯ ಜನರನ್ನು ಮಾತ್ರ ಒಳಗೊಂಡಿದೆ?

ಸಂಗೀತ ತರಗತಿ ಮತ್ತು ಸಭಾ ಸಂಸ್ಕೃತಿ: ಅವರು ವಿರೋಧಿಗಳಿಂದ ಎದುರಿಸಿದ ಪ್ರಶ್ನೆ ಏನೆಂದರೆ, ನೀವು ಸಂಗೀತದ ಸಾಮಾಜಿಕ-ಧಾರ್ಮಿಕ ತತ್ವಗಳಿಗೆ ವಿರುದ್ಧ ಇರುವಾಗ, ಕರ್ನಾಟಕ ಸಂಗೀತವನ್ನು ಏಕೆ ಹಾಡುತ್ತೀರಿ? ಆದರೆ, ಕೃಷ್ಣ ತಾವು ಎದುರಿಸುತ್ತಿರುವ ದೊಡ್ಡ ವಿಚಾರಗಳನ್ನು ಈ ಹಂಚಿಕೊಂಡ ತಾವಿನಲ್ಲಿ ತರಲು ಬಯಸಿದ್ದರು ಮತ್ತು ಸಂವಾದಕ್ಕೆ ಸಿದ್ಧವಿರುವವರು ಮತ್ತು ತೆರೆದುಕೊಂಡವರೊಂದಿಗೆ ಮಾತುಕತೆ ಮುಂದುವರಿಸಲು ಬಯಸಿದರು. 

ಕರ್ನಾಟಕ ಸಂಗೀತ ಪ್ರಪಂಚವು ಸಂಗೀತ ತರಗತಿಯಿಂದ ಪ್ರಾರಂಭವಾಗುತ್ತದೆ ಎಂದು ಅವರಿಗೆ ಗೊತ್ತಾಯಿತು. ಅದು ಹೇಳಿದ ಕಥೆಗಳು, ಯಾವ ರೀತಿ ಹೇಳಲಾಯಿತು ಮತ್ತು ಹೇಳದೆ ಉಳಿದ ಕಥೆಗಳಿಂದ ಸುತ್ತುವರಿದ ಪರಿಸರವಾಗಿತ್ತು. ಅಲ್ಲಿ ವಿದ್ಯಾರ್ಥಿ ‘ಸುಸಂಸ್ಕೃತʼನಾಗಿದ್ದ. ಕಥೆಗಳು ಮತ್ತು ನಡವಳಿಕೆ, ಉಡುಗೆ, ಸಂಸ್ಕೃತಿಯ ಕಲ್ಪನೆ, ಸಂಗೀತ ಮತ್ತು ಧರ್ಮಗ್ರಂಥದ ಪ್ರಪಂಚದ ಮೂಲಕ ಸುಸಂಸ್ಕೃತಿಯನ್ನು ವ್ಯಾಖ್ಯಾನಿಸಲಾಗಿತ್ತು.

ಈ ಸಾಂಸಂಸ್ಕೃತೀಕರಣ ಹೊರಗಿನ ಜಾಗಗಳಲ್ಲೂ ಮುಂದುವರಿಯಿತು: ಸಭೆಗಳಲ್ಲಿ ಅದೇ ರೀತಿಯ ಜನ ಸೇರುತ್ತಿದ್ದರು, ಅಲ್ಲಿನ ಕ್ಯಾಂಟೀನ್‌ಗಳಲ್ಲಿ ಊಟ ಮಾಡುತ್ತಿದ್ದರು ಮತ್ತು ದೇವಾಲಯಗಳಲ್ಲಿನ ಸಂಗೀತ ಕಚೇರಿಗಳಲ್ಲಿ ಪಾಲ್ಗೊಂಡರು.

ಈ ಪ್ರಪಂಚದಲ್ಲಿ 'ರಾಜಕೀಯ' ಎಂಬುದು ಕೆಟ್ಟ ಪದವಾಗಿತ್ತು. ಈ ಪ್ರಪಂಚದ ಜನರು ತಾವು ರಾಜಕೀಯವನ್ನು ಮೀರಿದ ಜಗತ್ತಿನಲ್ಲಿ, ದೈವಿಕ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ ಎಂದುಕೊಂಡಿದ್ದರು. ಅಂಥ ಪರಿಸರದಲ್ಲಿ ಯಾವುದೇ ರಾಜಕೀಯ ಪ್ರಶ್ನೆಗಳು ಇರುವುದಿಲ್ಲ.

ಕಲೆ ಎಂಬುದು ರಾಜಕೀಯ: ಸಂಗೀತ ಲೋಕವನ್ನು ಕೃಷ್ಣ ನೋಡಿದ್ದು ಹೀಗಲ್ಲ. ಕಲೆ ಏನನ್ನಾದರೂ ಹೇಳುತ್ತಿದ್ದರೆ, ಅದು ದೃಷ್ಟಿಕೋನವೊಂದನ್ನು ಸೃಷ್ಟಿಸುತ್ತದೆ ಮತ್ತು ಆದ್ದರಿಂದ, ಅದು ರಾಜಕೀಯವಾಗಿರುತ್ತದೆ. ಈ ದೃಷ್ಟಿಕೋನ ತ್ಯಾಗರಾಜರ ಜೀವನ ಮತ್ತು ಕಾರ್ಯಕ್ಕೂ ಅನ್ವಯಿಸುತ್ತದೆ. ತ್ಯಾಗರಾಜರು ಧಾರ್ಮಿಕ ಮತ್ತುಅಧ್ಯಾತ್ಮಿಕ ವಿಷಯಗಳಿಗೆ ಮಾತ್ರ ಸೀಮಿತವಾಗಿದ್ದರೇ? ಅವರು ಮತ್ತು ಅವರ ಕೃತಿಗಳಲ್ಲಿ ರಾಜಕೀಯ ಇರಲಿಲ್ಲವೇ?

ತ್ಯಾಗರಾಜರನ್ನು ಇತರರು ನೋಡುವಂತೆಯೇ ಕೃಷ್ಣ ಕೂಡ ನೋಡಿದರು - ಒಬ್ಬ ಮೇಧಾವಿ, ಶ್ರೇಷ್ಠ ಚಿಂತನೆಯ, ಸಂಕೀರ್ಣ ವಿಚಾರಗಳ ವ್ಯಕ್ತಿ ಎಂದು. ತ್ಯಾಗರಾಜರಲ್ಲಿ ಸಮಸ್ಯಾತ್ಮಕ ಅಂಶವೂ ಇದ್ದಿತ್ತು. ಉದಾಹರಣೆಗೆ, ಶೂದ್ರರು ಮತ್ತು ಕೀಳು ಎಂದು ಪರಿಗಣಿಸಲ್ಪಟ್ಟ ಮಹಿಳೆಯರಿಗೆ ಸಂಗೀತವನ್ನು ಕಲಿಸುವ ಅಥವಾ ಹಂಚಿಕೊಳ್ಳುವ ತಪ್ಪು ಮಾಡಿದ್ದೇನೆ ಎಂಬ ತ್ಯಾಗರಾಜರ ಹೇಳಿಕೆ. 

ಆದರೆ, ಇದನ್ನು ಸಂಗೀತದ ಒಂದು ತುಣುಕು ಎಂದು ಹಾಡಬಹುದಿತ್ತಲ್ಲವೇ? ಹೌದು, ಸಾಧ್ಯವಿದೆ. ಆದರೆ, ಆ ಸಾಲುಗಳನ್ನು ಅರ್ಥ ಮಾಡಿಕೊಳ್ಳಬಲ್ಲ ಮಹಿಳೆಯೊಬ್ಬಳು ಹಾಡುಗಾರಿಕೆಯನ್ನು ಕೇಳಿಸಿಕೊಂಡರೆ? ಅರ್ಥ ಮಾಡಿಕೊಳ್ಳಬಲ್ಲ ಬೇರೆ ಜಾತಿಯ ವ್ಯಕ್ತಿ ಅದನ್ನು ಕೇಳಿಸಿಕೊಂಡರೆ? ಅದು ಅವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಅವರ ಭಾವನೆಗಳಿಗೆ ಸಂವೇದನಾಶೀಲ ಆಗಿರಬೇಕಲ್ಲವೇ? 

 ಕೃಷ್ಣ ʻದ ಸದರ್ನ್‌ ಮ್ಯೂಸಿಕ್‌ʼನಲ್ಲಿ ಬರೆದದ್ದನ್ನು ಆನಂತರ ಒಪ್ಪಲಿಲ್ಲ. 'ಕಲಾಸಂಗೀತ' ಪರಿಕಲ್ಪನೆಯು ಇತ್ತೀಚಿನ ವರ್ಷಗಳಲ್ಲಿ ಪ್ರತಿಬಿಂಬಿಸಿದೆ ಮತ್ತು ವಿಸ್ತರಿಸಿದೆ. 

ಮೃದಂಗ ತಯಾರಕರು: ಕೃಷ್ಣ ಅವರ ಮತ್ತೊಂದು ಪ್ರಮುಖ ಕೊಡುಗೆ ಎಂದರೆ ಸಂಗೀತಗಾರರು ಮತ್ತು ಸಂಗೀತ ವಾದ್ಯಗಳ ತಯಾರಿಕೆಯಲ್ಲಿ ತೊಡಗಿರುವವರ ನಡುವಿನ ಕಂದರವನ್ನು ಕಡಿಮೆ ಮಾಡಿದ್ದು. ಮೃದಂಗ ತಯಾರಕರ ಪ್ರಪಂಚವನ್ನು ಹೊರಗಿನ ಪ್ರಪಂಚದ ಗಮನಕ್ಕೆ ತರಲು ಅವರು ʻಸೆಬಾಸ್ಟಿಯನ್ ಮತ್ತು ಸನ್ಸ್ - ಎ ಬ್ರೀಫ್ ಹಿಸ್ಟರಿ ಆಫ್ ಮೃದಂಗಂ ಮೇಕರ್ಸ್ (2020)ʼ ಕೃತಿ ರಚಿಸಿದರು.

ಪುಸ್ತಕವು ಮೃದಂಗ ತಯಾರಕ ಸಮುದಾಯದ ಧ್ವನಿ ಮುಕ್ತವಾಗಿ ಹೊರಬರಲು ಅನುವು ಮಾಡಿಕೊಡುತ್ತದೆ. ತಯಾರಕರು ಮತ್ತು ಸಂಗೀತಗಾರರ ನಡುವೆ ಸಂವಾದ ಸೃಷ್ಟಿಸುತ್ತದೆ ಎಂದು ಕೃಷ್ಣ ಆಶಿಸಿದರು. ಪುಸ್ತಕವನ್ನು ಓದಿದ ಮೃದಂಗ ವಾದಕರು, ವಾದ್ಯವನ್ನುನೋಡುವ ರೀತಿ ಬದಲಾಗಿದೆ ಎಂದು ಹೇಳಿದರು.

ಕಾವ್ಯಾತ್ಮಕ ಪ್ರತಿಬಿಂಬ:  ಸಂಗೀತ ಮತ್ತು ಸಂಗೀತೇತರ ಭಾಗವಹಿಸುವಿಕೆಯಲ್ಲಿ ಸಂಗೀತದ ಸಾಹಿತ್ಯಕ ನೆಲೆಯನ್ನು ವಿಸ್ತರಿಸಲು ಪ್ರಕೃತಿ, ಬ್ರಾಹ್ಮಣವಲ್ಲದ ದೇವತೆಗಳು, ಮುಖ್ಯವಾಹಿನಿಯ ಹೊರತಾಗಿ ಇತರ ಜೀವನದ ಕಾವ್ಯಾತ್ಮಕ ಪ್ರತಿಬಿಂಬಗಳನ್ನು ಸೇರಿಸಲು ಪ್ರಯತ್ನಿಸಿದ್ದಾರೆ. ಈ ಭಾಗವಹಿಸುವಿಕೆಯು ಪಠ್ಯದ ವಿಷಯ ಸಂಗೀತದ ಸ್ವರೂಪವನ್ನು ನಿರ್ಧರಿಸುವುದಿಲ್ಲ ಎಂಬ ಅರಿವಿನೊಂದಿಗೆ ಬಂದಿತು. ಇದು ಪದದ ಅರ್ಥವಲ್ಲ; ಶಬ್ದದ ಅರ್ಥ. ಇದು 'ರಾಮ' ಬಗ್ಗೆ ಅಲ್ಲ; ಆದರೆ, ರಾ ಮತ್ತು ಮ ಶಬ್ದಗಳ ಬಗ್ಗೆ. ಇದು ಸ್ವರ ಮತ್ತು ವ್ಯಂಜನದ ಅರ್ಥ. ಮತ್ತು, ಅರ್ಥವಾಗದ ಭಾಷೆಯ ಶಬ್ದಾರ್ಥದ ಅರ್ಥಗಳಿಗೆ ಇದನ್ನು ಸಂಬಂಧಿ ಸಲು ಸಾಧ್ಯವಿದೆ.

ಪೊರೊಂಬೋಕೆ ('ಸಾರ್ವಜನಿಕ ಜಾಗಗಳು') ಅಥವಾ ಪೆರುಮಾಳ್ ಮುರುಗನ್ ಅವರ ಕವಿತೆಯಂಥ ಹಾಡುಗಳ ವಿಷಯದಲ್ಲಿ ಇದು ನಿಜ. ಆದರೆ, ಅರ್ಥಕ್ಕೆ ಜಾಗವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಮಾನವರು ಅರ್ಥ, ಉಲ್ಲೇಖ, ಅರ್ಥಭರಿತ, ಭಾವನಾತ್ಮಕ, ಸಾಂಸ್ಕೃತಿಕ, ತಾಂತ್ರಿಕ ಮತ್ತು ಮುಂತಾದವುಗಳ ಮೂಲಕ ಜಗತ್ತಿಗೆ ಸಂಬಂಧಿಸುತ್ತಾರೆ. ಶಬ್ದಾರ್ಥವಿದೆ.

ಸಾಹಿತ್ಯ-ಸಂಗೀತ ವಾಕ್ಚಾತುರ್ಯ:  ಲಾಕ್ಷಣಿಕ ಅರ್ಥವಿರುತ್ತದೆ. ಧ್ವನಿಯಲ್ಲಿ ಅಮೂರ್ತತೆ ಇದೆ ಎಂಬುದು ನಿಜವಾದರೂ, ಭೌತಿಕತೆ, ಧ್ವನಿಪೂರ್ಣತೆ ಇರುತ್ತದೆ. ಆದರೆ, ಯಾರನ್ನಾದರೂ ನಿರ್ದಿಷ್ಟ ರೀತಿಯಲ್ಲಿ ಯೋಚಿಸಲು ಮನವೊಲಿಸಲು ಅಥವಾ ಹಳೆಯ ವಿಷಯಗಳನ್ನು ವಿಭಿನ್ನವಾಗಿ ನೋಡುವಂತೆ ಮಾಡಬೇಕಾಗುತ್ತದೆ. 

ಇಂಥ ಸಂವಾದವು ಅರ್ಥಗಳ ಬಹುತ್ವದ ಬಗ್ಗೆ ಇರುತ್ತದೆ. ಸಾಮಾನ್ಯವಾಗಿ, ಅರ್ಥಗಳು ಕೇವಲ ಧ್ವನಿಯಿಂದ ಹುಟ್ಟುವುದಿಲ್ಲ. ಆದರೆ, ಇತರರಿಗೆ ಸಂಬಂಧಿಸಿದಂತೆ ಒಂದು ಧ್ವನಿಯಿಂದ ಉತ್ಪತ್ತಿಯಾಗುತ್ತವೆ; ಧ್ವನಿ ಆದರ್ಶಗಳು ಮತ್ತು ಧ್ವನಿ ಪ್ರಪಂಚ ಮತ್ತು ಅದರ ನಿರ್ದಿಷ್ಟ ಧ್ವನಿಯನ್ನು ಒಟ್ಟಾಗಿ ರೂಪಿಸುತ್ತವೆ.

ಆದ್ದರಿಂದ ಕೃಷ್ಣ ಅವರು ಕರ್ನಾಟಕ ಸಂಗೀತದಲ್ಲಿ ವಿವಿಧ ವಿಷಯಗಳ ಕುರಿತ ಸಂಯೋಜನೆಗಳನ್ನು ರಚಿಸಲಾರಂಭಿಸಿದರು; ಇದು ಔಪಚಾರಿಕ ತಮಿಳಿನ ಬದಲಿಗೆ ತಮಿಳಿನ ಉಪಭಾಷೆಯಿಂದ ಬಂದಿದೆ: ತಮಿಳು, ಆದರೆ ತಮಿಳು ಅಲ್ಲ; ಇತರ ತಮಿಳುಗಳು.

ಒಂದು 'ವಿಭಿನ್ನ' ತಮಿಳು: ಅವರು ನಾಮಕ್ಕಲ್‌ನಲ್ಲಿ ಪೆರುಮಾಳ್ ಮುರುಗನ್ ಅವರೊಂದಿಗೆ ಕವಿ ಬರೆಯಲು ಬಯಸಿದ ವಿಷಯಗಳ ಬಗ್ಗೆ ಮತ್ತು ಉಪ ಭಾಷೆಯಲ್ಲಿ ಸಂಯೋಜನೆಗಳ ರಚನೆ ಮತ್ತು ಸ್ವರೂಪ ಕುರಿತು ಚರ್ಚಿಸಿದರು.

ಕರ್ನಾಟಕ ಸಂಗೀತದ ಶಬ್ದಕೋಶ ಕಿರಿದಾಗಿರುವುದರಿಂದ, ಹೊಸ ಪದಗಳನ್ನು ಉಚ್ಚರಿಸುವುದು ಕಷ್ಟವಾಯಿತು. ಕರ್ನಾಟಕ ಸಂಗೀತದಲ್ಲಿ ಇರುವುದು ಸುಮಾರು 200 ಪದಗಳು. ಗಾಯಕ ಈ ಶಬ್ದಗಳನ್ನು ಉಚ್ಚರಿಸಬಲ್ಲ. ಆದರೆ, ಕರ್ನಾಟಕ ಸಂಗೀತದಲ್ಲಿ ಬಳಸುವ ಸಂಸ್ಕೃತ, ತೆಲುಗು, ಕನ್ನಡ ಮತ್ತು ತಮಿಳು ಪದಗಳು ʻಅನ್ಯʼ ಆಗುತ್ತವೆ. ಮುರುಗನ್ ಅವರ ಸಂಯೋಜನೆಗಳನ್ನು ಹಾಡುವಾಗ ಕೃಷ್ಣ ಈ ʻಅನ್ಯʼ ಪದಗಳನ್ನು ಉಚ್ಚರಿಸಲು ಮಾರ್ಗವೊಂದನ್ನು ರೂಪಿಸಬೇಕಿತ್ತು.

ಅವು ಕರ್ನಾಟಕ ಸಂಗೀತದ ಪದಕೋಶದ ಹೊರಗಿನ ಶಬ್ದಗಳಾಗಿದ್ದವು. ಮುರುಗನ್ ಜೊತೆಗೆ ಸಂವಾದಕ್ಕೆ ಮೊದಲು ಬಂದ ಮೊದಲ ಸವಾಲು - ಪೊರೊಂಬೋಕೆ ಪದವನ್ನು ಸಂಗೀತವಾಗಿ ಉಚ್ಚರಿಸುವುದು. ಈ ಶಬ್ದಗಳನ್ನು ಕರ್ನಾಟಕ ಸಂಗೀತ ಪರಿಸರದಲ್ಲಿ ಹಿಂದೆಂದೂ ಹಾಡಿರಲಿಲ್ಲ. ಮತ್ತು, ʻಅನ್ಯʼ ಪದಗಳನ್ನು ಉಚ್ಚರಿಸುವ ಮೂಲಕ ಹೊಸ ರಸಾನುಭವ ಮತ್ತು ಹೊಸ ರಾಜಕೀಯವನ್ನು ಸೃಷ್ಟಿಸಬೇಕಿತ್ತು.

ಪ್ರಾಮುಖ್ಯತೆಯ ವಯಸ್ಸು:  ಸಂಗೀತ ಮತ್ತು ಶಬ್ದಗಳು ಯುಗವನ್ನು ಪ್ರತಿಬಿಂಬಿಸುತ್ತವೆ. ಕರ್ನಾಟಕ ಸಂಗೀತವು ಹಿಂದೆ ಉಳಿದಿದೆ ಮತ್ತು ಸಮಕಾಲೀನ ಪ್ರಪಂಚದ ಕಲ್ಪನೆಗಳಿಂದ ಅದನ್ನು ತುಂಬಿಸಬೇಕಿದೆ. ಆಧುನಿಕ ಕಾಲಕ್ಕೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಪ್ರೇರಿತ ವಿಚಾರಗಳು ಸೇರ್ಪಡೆ ಆಗಬೇಕಿದೆ.

ಸುವರ್ಣ ಯುಗದ ವ್ಯಾಮೋಹವನ್ನು ಹೋಗಲಾಡಿಸುವುದು ಮತ್ತು ನಾವು ಇದನ್ನು ಮಾಡಿದರೆ ತ್ಯಾಗರಾಜರು ಏನು ಹೇಳುತ್ತಾರೆ ಮತ್ತು ಶೆಮ್ಮಂಗುಡಿಯವರು ಏನು ಯೋಚಿಸಬಹುದು ಎಂದು ಚಿಂತಿಸುವುದನ್ನು ನಿಲ್ಲಿಸುವುದು ಮುಖ್ಯ ಎಂದು ಕೃಷ್ಣ ಭಾವಿಸುತ್ತಾರೆ.

ಇಂದಿನೊಂದಿಗೆ ತೊಡಗಿಸಿಕೊಳ್ಳುವ ಅವಶ್ಯಕತೆಯಿದೆ; ಹೊಸ ಧ್ವನಿಯ ಪ್ರಪಂಚದೊಂದಿಗೆ, ಹೊಸ ಧ್ವನಿಯ ಆದರ್ಶಗಳ ಜಗತ್ತನ್ನು ಒಳಗೊಳ್ಳಬೇಕಿದೆ. ಇದು ಹೊಸ ಮತ್ತು ದೀರ್ಘ ಪ್ರಯಾಣದ ಆರಂಭ. ಹೊಸ ಕೃತಿಗಳನ್ನು ರಚಿಸುವ ನಿಪುಣ ಲೇಖಕರ ಅಗತ್ಯವಿದೆ. ಪೆರುಮಾಳ್ ಮುರುಗನ್ ಅವರೊಂದಿಗಿನ ಸಂವಹನವು ಬರಹಗಾರ ಮತ್ತು ಸಂಗೀತಗಾರರ ನಡುವಿನ ಪಾಲುದಾರಿಕೆಯ ಪ್ರಾರಂಭವಾಗಿ ಬಹಳ ಮುಖ್ಯವಾಗಿತ್ತು.

ಮುರುಗನ್‌ ಕರ್ನಾಟಕ ಸಂಗೀತದ ಕಿರಿದಾದ ಪ್ರಪಂಚಕ್ಕೆ ಸೇರಿದವನಲ್ಲದ ಕಾರಣ, ಇದು ಹೆಚ್ಚು ಮುಖ್ಯವಾಗಿತ್ತು. ಇತರ ಸಂಗೀತಗಾರರು ಅಂತಹ ಪಾಲುದಾರಿಕೆಗೆ ತೆರೆದುಕೊಳ್ಳಬೇಕು ಮತ್ತು ಅದರ ಸಾಧ್ಯತೆಗಳು ಅಪಾರವಾಗಿರುತ್ತವೆ ಎಂದು ಕೃಷ್ಣ ಭಾವಿಸುತ್ತಾರೆ.

ಶಾಸ್ತ್ರೀಯದ ಪುನರ್ವಿಮರ್ಶೆ:  ಕೃಷ್ಣ ಅವರು ರಾಗದ ಕಲ್ಪನೆ ಬಗ್ಗೆ ಯೋಚಿಸಿದ್ದಾರೆ ಮತ್ತು ಶಾಸ್ತ್ರೀಯ ಕಲ್ಪನೆಯ ಮರುಚಿಂತನೆಯೊಂದಿಗೆ ಹೊರಹೊಮ್ಮಿದ್ದಾರೆ. ಅವರು ಕರ್ನಾಟಕ ಸಂಗೀತದಲ್ಲಿ ಮೂರು ಅಂಶಗಳನ್ನು ಗುರುತಿಸುತ್ತಾರೆ - ರಾಗ, ತಾಳ/ಲಯ, ಮತ್ತು ಪಠ್ಯ; ಇದು ಸಂಯೋಜನೆ ಮತ್ತು ಅದರೊಳಗಿನ ಸುಧಾರಣೆಗಳಿಗೆ ಸಂಬಂಧಿಸಿದೆ. 

ಈ ಮೂರು ಅಂಶಗಳು ಪರಸ್ಪರ ಕ್ರಿಯೆಯಲ್ಲಿ ಕರ್ನಾಟಕ ಸಂಗೀತದ ಸ್ವರೂಪಕ್ಕೆ ಪ್ರಾಮಾಣಿಕವಾಗಿದ್ದರೆ, ಅದು ಕರ್ನಾಟಕ ಸಂಗೀತ ಆಗಿರಲಿದೆ. ಸಂಗೀತದ ಇತರ ಪ್ರಕಾರಗಳಲ್ಲೂ ಇದು ನಿಜ. ಒಂದು ತುಣುಕನ್ನು ಅದರ ಉದ್ದೇಶಿತ ಸಂದರ್ಭದಿಂದ ಹೊರತೆಗೆದರೆ ಮತ್ತು ಅದು ರಾಗ, ತಾಳ, ಪಠ್ಯ ಎಂಬ ಮೂರು ಅಂಶಗಳ ಚೌಕಟ್ಟಿನೊಳಗೆ ಉಸಿರಾಡಿದರೆ, ಅದು ಕರ್ನಾಟಕ ಸಂಗೀತವಾಗಿರುತ್ತದೆ. ಎಲ್ಲಿಯವರೆಗೆ ರಾಗವು ಸುಮಧುರ ಸಾಧ್ಯತೆಯಾಗಿರುತ್ತದೋ ಅಲ್ಲಿಯವರೆಗೆ ಅದು ಕರ್ನಾಟಕ ಸಂಗೀತವಾಗಿರಲಿದೆ.

ನಾದದ ದೇಹವಾಗಿ ರಾಗ: ಕೃಷ್ಣ ಈ ದೀರ್ಘಾವಧಿಯ ಪಾಲ್ಗೊಳ್ಳುವಿಕೆ ಮತ್ತು ಸಂವಾದ ಪ್ರಕ್ರಿಯೆಯಲ್ಲಿ ತಮ್ಮ ಸೌಂದರ್ಯಪ್ರಜ್ಞೆಯ ವರ್ಣಪಟಲವನ್ನು ಬದಲಿಸಿಕೊಂಡಿದ್ದಾರೆ: ಅದು ವಿಸ್ತರಿಸಿದೆ ಮತ್ತು ಪರಿವರ್ತನೆಯಾಗಿದೆ. ಶಬ್ದಗಳ ಸ್ವರೂಪ, ಅವುಗಳ ಬಹುತ್ವ, ಅವುಗಳ ಸಾಧ್ಯತೆಗಳ ಅನುಭವ  ಕುರಿತ ತಮ್ಮ ನಿಲುವು ಸಂಪೂರ್ಣವಲ್ಲ ಎಂಬ ಅರಿವು ಬಂದಿದೆ.

ಅವರು ಈಗ ರಾಗವನ್ನು ಧ್ವನಿಪೂರ್ಣವಾಗಿ ಅರಿತುಕೊಳ್ಳಲು ಅಥವಾ ನಿರ್ದಿಷ್ಟ ನಿಯಮಗಳಿಂದ ಸೀಮಿತವಾದ ಧ್ವನಿರೂಪದ ದೇಹವಾಗಿ ನೋಡುತ್ತಾರೆ.

ರಾಗವು ಯಾವಾಗಲೂ ಚಲಿಸುತ್ತದೆ ಮತ್ತು ನಿಯಮಗಳೂ ಚಲಿಸುತ್ತವೆ ಎಂದು ಅವರು ನಂಬುತ್ತಾರೆ. ರಾಗ ಉಸಿರಾಡುತ್ತದೆ ಮತ್ತು ಗಾಯಕ ಅದರ ಚಲನೆಯಲ್ಲಿ ಭಾಗವಹಿಸುತ್ತಾನೆ. ರಾಗವನ್ನು ಈ ರೀತಿ ಯೋಚಿಸುವುದು ಅದರ ವ್ಯಾಪ್ತಿಯನ್ನು ಅಗಾಧವಾಗಿ ವಿಸ್ತರಿಸುತ್ತದೆ. ಅವರು ಈಗ ಹಾಡಿದಾಗ, ರಾಗದ ಅಂತರದೊಳಗಿನ ಸ್ವರಗಳ ಡೈನಮಿಕ್ಸ್‌ ನಿಂದ ನಿರ್ಬಂಧಿಸಲ್ಪಡುವುದಿಲ್ಲ. ರಾಗದ ಚಲನೆಯನ್ನು ಸಾಕಾರಗೊಳಿಸುತ್ತಾರೆ ಮತ್ತು ಅವರನ್ನು ಎಲ್ಲಿ ಕರೆದೊಯ್ಯುತ್ತದೆಯೋ ಅಲ್ಲಿಗೆ ಹೋಗುತ್ತಾರೆ. ಈಗ ಹಿಂದಿನ ಸಂಯೋಜನೆಗಳನ್ನು ಹಾಡಿದಾಗಲೂ, ವಿಭಿನ್ನವಾಗಿ ಹಾಡುತ್ತಾರೆ.

ಸ್ವಾತಂತ್ರ್ಯದ ಅನುಭವಿಸುವಿಕೆ:  ಅವರು ಕಚೇರಿಯಲ್ಲಿ ಹೆಚ್ಚು ಸ್ವಾತಂತ್ರ್ಯ ತೆಗೆದುಕೊಳ್ಳುತ್ತಾರೆ ಎಂಬ ಆರೋಪವಿದೆ. ಆದರೆ, ಇಂಥ ಸ್ವಾತಂತ್ರ್ಯ ತೆಗೆದುಕೊಂಡಾಗ ಹೆಚ್ಚಿನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಾರೆ. ಸಂಗೀತದ ಇತರ ಪ್ರಕಾರಗಳು ಮತ್ತು ಇತರ ಸಂಗೀತ ಸಂಸ್ಕೃತಿಗಳಿಗೆ ತೆರೆದುಕೊಂಡಿರುವುದರಿಂದ, ಅವರು ಸಮೃದ್ಧರಾಗಿದ್ದಾರೆ. ಇವು ಹಿಂದಿರುಗಿ ನೋಡುವ ಅವಕಾಶವನ್ನು ನೀಡುತ್ತವೆ; ಅವರ ಕಲೆಯನ್ನು ದೂರದಿಂದ ನೋಡುವ ಅವಕಾಶ ಒದಗಿಸುತ್ತವೆ. ಹಿಂದೆ ಇಲ್ಲದ ಸ್ವಾತಂತ್ರ್ಯವನ್ನು ಕಂಡುಕೊಂಡಿದ್ದಾರೆ.

ಅವರು ಹೇಳುವ ಸ್ವಾತಂತ್ರ್ಯ ಕೇವಲ ವ್ಯಾಖ್ಯಾನದ ಸ್ವಾತಂತ್ರ್ಯವಲ್ಲ; ಕೇವಲ ರಚನಾತ್ಮಕ ಚಲನೆಯಲ್ಲ. ರಾಗದ ಪರ್ಯಾಯ ಅನುಭವಗಳನ್ನು ನಾವು ಸೃಷ್ಟಿಸಬಹುದೇ ಎಂಬುದೇ ಸ್ವಾತಂತ್ರ್ಯ. ಹಳೆಯ ಧ್ವನಿಯ ದೇಹದಲ್ಲಿ ಹೊಸ ಧ್ವನಿಯನ್ನು ಕಂಡುಹಿಡಿಯುವುದು ಮತ್ತು ಅದರ ಧ್ವನಿಯನ್ನು ಕೇಳುವ ರೀತಿಯಲ್ಲಿ ಮರುವ್ಯಾಖ್ಯಾನ ಮಾಡುವ ಸ್ವಾತಂತ್ರ್ಯ.

ಇದಕ್ಕೆ ಧ್ವನಿ ಬದಲಾವಣೆಯ ಅಗತ್ಯವಿದೆ. ನಾವು ಇಂದು ಕರ್ನಾಟಕ ಎಂದು ಕೇಳುವ ಧ್ವನಿ ದೇಹವು 100 ವರ್ಷಗಳ ಹಿಂದೆ ಕೇಳಿದ ಕರ್ನಾಟಕ ಸಂಗೀತದ ಧ್ವನಿ ದೇಹವಲ್ಲ ಎಂದು ಅರಿತುಕೊಳ್ಳುವುದು ಸಹ ಅಗತ್ಯ ಎಂದು ಅವರು ಭಾವಿಸುತ್ತಾರೆ.

ಒಂದು ನಿರ್ದಿಷ್ಟ ಅವಧಿಯಲ್ಲಿ ರಾಗ ಹೇಗೆ ಧ್ವನಿಸುತ್ತದೆ ಎಂಬುದರ ವಿವರಣೆಯನ್ನು ಹಸ್ತಪ್ರತಿಗಳಿಂದ ಸಂಗ್ರಹಿಸಬಹುದು. ಪಠ್ಯವು ಧ್ವನಿಯಂತೆ ಇರದ ಕಾರಣ ಇದು ಊಹೆಯಾಗಿದೆ. ಆದರೆ, ಒಂದು ಕಾಲಮಾನದಲ್ಲಿ ಉತ್ಪತ್ತಿಯಾಗುವ ಶಬ್ದಗಳನ್ನು ಧ್ವನಿ ಏರಿಳಿತ, ಉಚ್ಚಾರಣೆಗಳು, ಪಕ್ಕವಾದ್ಯಗಳು, ಶ್ರುತಿ, ಮನೋಧರ್ಮ, ಗತಿ ಮತ್ತಿತರ ವಿದ್ಯಮಾನಗಳೊಂದಿಗೆ ಸಂಬಂಧಿಸಲು ಸಾಧ್ಯವಿದೆ.

ತಂತ್ರಜ್ಞಾನ ಮತ್ತು ಆಧುನಿಕ ಜೀವನದ ಒತ್ತಡದಿಂದ ಇವೆಲ್ಲವೂ ಬದಲಾದವು: ಆದ್ದರಿಂದ ಒಂದೇ ಸಂಯೋಜನೆಯ ಸಂಗೀತವು ಇಂದಿನಿಂದ ವಿಭಿನ್ನವಾಗಿದೆ ಎಂಬ ತೀರ್ಮಾನಕ್ಕೆ ಬರಲಾಯಿತು.

ಧ್ವನಿರೂಪವಾಗಿ ರಾಗ: ಆದ್ದರಿಂದ ರಾಗ ಕೇವಲ ಹೆಸರು ಮತ್ತು ಧ್ವನಿಯ ದೇಹವಲ್ಲ. ಅದು ಏನು ಎಂದು ತಿಳಿದಿಲ್ಲದವರಿಗೂ ಗೊತ್ತಾಗಬಹುದು. ಆದರೆ, ಅವರಿಗೆ ಇದು ಧ್ವನಿಯ ಸ್ವರೂಪ ಮತ್ತು ಅವರ ಸಂಸ್ಕೃತಿ ವಿಭಿನ್ನವಾಗಿದ್ದರೂ, ಅವರು ತಮ್ಮ ಸ್ವಂತ ಸಂಸ್ಕೃತಿಯಿಂದ ಬರುವ ಅನುಭವದ ಮೂಲಕ ಆ ಧ್ವನಿಯ ಸ್ವರೂಪವನ್ನು ಅರ್ಥೈಸುತ್ತಾರೆ. ಆದರೆ, ಮೂಲತಃ ರಾಗವೊಂದು ಸಾಮೂಹಿಕ ಜ್ಞಾನದ ಒಂದು ಭಾಗವಾಗಿರುತ್ತದೆ.

ಒಬ್ಬರು ಅದನ್ನು ಕಲಿಯಬೇಕಿಲ್ಲ; ಆದರೆ, ಅದನ್ನು ಹೆಸರಿನೊಂದಿಗೆ ಧ್ವನಿಯ ಮಾದರಿಯಾಗಿ ಮಾತ್ರ ಕೇಳಬೇಕು. ಈ ಜ್ಞಾನವು  ಆಚರಣೆಗಳು ಮತ್ತು ಸಾಮೂಹಿಕ ನೆನಪಿನ ಮೂಲಕ ಪೀಳಿಗೆಯಿಂದ ಪೀಳಿಗೆಗೆ ರವಾನೆಯಾಗುತ್ತದೆ. ಆಚರಣೆ, ಕಲಿಸುವಿಕೆ ಮತ್ತು ಹಾಡಿನ ಸಂಗ್ರಹದ ಮೂಲಕ ಸಂವಹನಗೊಳ್ಳುತ್ತವೆ.

ಭಾವನಾತ್ಮಕ ಬಂಧ: ರಾಗವೊಂದರಲ್ಲಿ ಶಬ್ದಗಳ ಉಪಸ್ಥಿತಿಯು ಸಾಮೂಹಿಕ ಭಾವನಾತ್ಮಕ ಬಂಧದ ಭಾಗವಾಗಿದೆ; ಅದು ಕೇವಲ ಮಾನಸಿಕ ಧ್ವನಿಯಾಗಿಲ್ಲ. ಸಾಮೂಹಿಕ ಅನುಭವದ ಭಾಗವಾಗಿ ರಾಗವೊಂದರ ಕಲ್ಪನೆಯ ಸಹಭಾಗಿತ್ವವಿಲ್ಲದೆಯೂ ನೀವು ಉತ್ತಮ ಅನುಭವವನ್ನು ಹೊಂದಲು ಸಾಧ್ಯವಾಗುತ್ತದೆ. ಆದರೆ, ನೀವು ಅದನ್ನು ಒಂದು ರೂಪವಾಗಿ ಅನುಭವಿಸುವುದಿಲ್ಲ.

ಆದರೆ, ಅಂತಹ ಅನುಭವಕ್ಕಾಗಿ ಬೇರೆಡೆ ಅನುಭವಿಸಿದ ಅನುಭವಗಳನ್ನು, ಇತರ ಅಭ್ಯಾಸ ಪ್ರಕ್ರಿಯೆಗಳನ್ನು ತರಬೇಕು. ಅವು ಕೂಡ ಸಾಮೂಹಿಕವಾಗಿವೆ. ರಾಗವೊಂದನ್ನು ಅದರ ಮೂಲದ ಸಂಸ್ಕೃತಿಯ ಜಾಗದಿಂದ ಅನುಭವಿಸಿದಾಗ, ಅದು  ನಿಜವಾದ ಆನಂದದಾಯಕ ಸಂಗೀತ ಕಲಾ ಪ್ರಕಾರವಾಗುತ್ತದೆ. ಆದರೆ, ಅನುಭವವನ್ನು ಒಳ-ಹೊರಗಿನ ಹಲವು ಮಾನಕಗಳ ಮೂಲಕ ಅಳೆಯಲಾಗುತ್ತದೆ. ಲೇಬಲಿಂಗ್ ಎನ್ನುವುದು ಕಲಾ ಪ್ರಕಾರವೊಂದನ್ನು ಕೇವಲ ಆನಂದದಾಯಕ ಧ್ವನಿ ದೇಹವಾಗಿಯಲ್ಲದೆ, ಕಲಾ ಪ್ರಕಾರವಾಗಿ ಸ್ವಾಧೀನಪಡಿಸಿಕೊಳ್ಳುವ ಮೊದಲ ಮಾರ್ಗವಾಗಿದೆ.

-ಎಂ.ಕೆ.ಶಂಕರ್‌

Tags:    

Similar News