ಆತನಿಗೆ ಸಿಕ್ಕಿರುವ ಜನಪ್ರಿಯತೆ ನೆತ್ತಿಗೇರಿದೆ: ದರ್ಶನ್‌ ವಿರುದ್ಧ ನಟಿ ರಮ್ಯಾ ಕಿಡಿ

ದರ್ಶನ್‌ಗೆ ದೊಡ್ಡ ಅಭಿಮಾನಿಗಳ ಬಳಗವಿದೆ ಎಂಬಂತೆ ಬಿಂಬಿಸಲಾಗಿದೆ ವಿನಃ ಅದು ನಿಜವಲ್ಲ ಎಂದು ರಮ್ಯಾ ಹೇಳಿದ್ದಾರೆ.

Update: 2024-06-15 08:05 GMT
ನಟಿ ರಮ್ಯಾ ಮತ್ತೆ ದರ್ಶನ್‌ ವಿರುದ್ಧ ಕಿಡಿಕಾರಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ(Renukaswamy Murder Case) ಸಂಬಂಧಿಸಿದಂತೆ ನಟ ದರ್ಶನ್(Actor Darshan) ವಿರುದ್ದ ನಟಿ ರಮ್ಯಾ ಮತ್ತೆ ಕಿಡಿಕಾರಿದ್ದಾರೆ.

ದರ್ಶನ್‌ಗೆ ದೊಡ್ಡ ಅಭಿಮಾನಿ ಬಳಗವಿದೆ ಎಂಬಂತೆ ಬಿಂಬಿಸಲಾಗಿದೆ ವಿನಃ ಅದು ನಿಜವಲ್ಲ ಎಂದು ರಮ್ಯಾ ಹೇಳಿದ್ದಾರೆ.

ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ರಮ್ಯಾ(Ramya Divya Spandana), 'ಆತನಿಗೆ ಸಿಕ್ಕಿರುವ ಜನಪ್ರಿಯತೆ ನೆತ್ತಿಗೇರಿದೆ. ಪದೇ ಪದೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ' ಎಂದಿದ್ದಾರೆ.

'ಹಿಂದೆಯೂ ಅವರು ತಪ್ಪು ಮಾಡಿದ್ದರು. ಆದರೆ, ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ' ಎಂದರು.

ಇನ್ನು ದರ್ಶನ್ ಅಭಿಮಾನಿ ಬಳಗದ ಬಗ್ಗೆ ಮಾತನಾಡಿದ ರಮ್ಯಾ, 'ಕಳೆದ ಚುನಾವಣೆಯಲ್ಲಿ ಒಂದೆರಡು ಅಭ್ಯರ್ಥಿಗಳ ಪರ ದರ್ಶನ್ ಪ್ರಚಾರ ಮಾಡಿದ್ದರು, ಅವರೆಲ್ಲರೂ ಚುನಾವಣೆಯಲ್ಲಿ ಸೋತಿದ್ದರು. ದರ್ಶನ್ ಅಭಿಮಾನಿಗಳ ಬಳಗದ ಕುರಿತಂತೆ ಹೈಪ್ ಮಾಡಲಾಗುತ್ತಿದೆ. ಪೊಲೀಸ್ ಠಾಣೆಯ ಮುಂದೆ ಜನ ನಿಂತಿದ್ದಾರೆ ಎಂದ ಮಾತ್ರಕ್ಕೆ ಆತ ಅಷ್ಟು ಪ್ರಭಾವ ಹೊಂದಿದ್ದಾನೆ ಎಂದು ಹೇಳಲು ಆಗುವುದಿಲ್ಲ' ಎಂದು ಹೇಳಿದರು.

'ದರ್ಶನ್ ಸುತ್ತಮುತ್ತ ಇರುವವರಲ್ಲಿ ಹೆಚ್ಚಿನವರು ನಟೋರಿಯಸ್ ರೌಡಿಗಳ ಗುಣಗಳನ್ನು ಹೊಂದಿದ್ದು, ಅದರಿಂದಲೇ ದರ್ಶನ್ ಗಮನ ಸೆಳೆಯುತ್ತಿದ್ದಾರೆ' ಎಂದು ಹೇಳಿದ್ದಾರೆ.

Tags:    

Similar News