ಆದೇಶವೇ ಬಂದಿಲ್ಲ, ಅದಕ್ಕಿಂತ ಮೊದಲೇ ಟೋಯಿಂಗ್ ಶುರು!
ಬುಧವಾರ ಸಭೆಯಲ್ಲಿ ವಿಚಾರ ಪ್ರಸ್ತಾಪವಾಗಿದ್ದರೆ 'ಟೋಯಿಂಗ್' ಕಾರ್ಯಾಚರಣೆ ಗುರುವಾರದಿಂದಲೇ ಅನಿರೀಕ್ಷಿತವಾಗಿ ಆರಂಭವಾಗಿದೆ. ಅಧಿಕೃತ ಆದೇಶ ಹೊರಬೀಳುವ ಮುನ್ನವೇ ಕಾರ್ಯಾಚರಣೆ ಶುರುವಾಗಿರುವುದು ವಾಹನ ಸವಾರರಲ್ಲಿ ಮತ್ತು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.;
ಸಂಗ್ರಹ ಚಿತ್ರ.
ನಗರದಲ್ಲಿ ನೋ ಪಾರ್ಕಿಂಗ್ ಏರಿಯಾಗಳಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಕೊಂಡೊಯ್ಯುವ ಮತ್ತು ದಂಡ ಹಾಕುವ ಪ್ರಕ್ರಿಯೆಯ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಹೇಳಲಾಗಿತ್ತು. ಅದಕ್ಕೊಂದು ನಿಯಮವನ್ನು ರೂಪಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ನಿಯಮ ಮಾಡುವ ಮೊದಲೇ ನಗರದಲ್ಲಿ ಟೋಯಿಂಗ್ ಶುರುವಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಬುಧವಾರ ಸಭೆಯಲ್ಲಿ ವಿಚಾರ ಪ್ರಸ್ತಾಪವಾಗಿದ್ದರೆ 'ಟೋಯಿಂಗ್' ಕಾರ್ಯಾಚರಣೆ ಗುರುವಾರದಿಂದಲೇ ಅನಿರೀಕ್ಷಿತವಾಗಿ ಆರಂಭವಾಗಿದೆ. ಅಧಿಕೃತ ಆದೇಶ ಹೊರಬೀಳುವ ಮುನ್ನವೇ ಕಾರ್ಯಾಚರಣೆ ಶುರುವಾಗಿರುವುದು ವಾಹನ ಸವಾರರಲ್ಲಿ ಮತ್ತು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದು ವಾಹನ ಸವಾರರು ಅಭಿಪ್ರಾಯಪಟ್ಟಿದ್ದಾರೆ.
ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳನ್ನು ಟೋಯಿಂಗ್ ಮಾಡುವ ಸಂಬಂಧ ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ, ಹಾಗೂ ಟೋಯಿಂಗ್ಗೆ ಇಲಾಖೆಯ ವಾಹನಗಳನ್ನೇ ಬಳಸಬೇಕಾ ಅಥವಾ ಗುತ್ತಿಗೆದಾರರನ್ನು ನೇಮಿಸಬೇಕೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ ಎಂದು ಬುಧವಾರ ಹೇಳಿಕೆ ನೀಡಿದ್ದರು. ಅಲ್ಲದೆ, ಟೋಯಿಂಗ್ ಜಾರಿ ದಿನಾಂಕ ಇನ್ನೂ ನಿಗದಿ ಆಗಿಲ್ಲ ಎಂದೂ ಸ್ಪಷ್ಟಪಡಿಸಿದ್ದರು.
ಆದರೆ, ಕಮಿಷನರ್ ಅವರ ಈ ಹೇಳಿಕೆ ನೀಡಿ ಕೇವಲ 24 ಗಂಟೆಗಳು ಕಳೆಯುವಷ್ಟರಲ್ಲಿ, ಆಡುಗೋಡಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಟೋಯಿಂಗ್ ಕಾರ್ಯಾಚರಣೆ ನಡೆದಿದೆ. ಮೊದಲ ದಿನವೇ 30ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಅಧಿಕೃತ ಪ್ರಕಟಣೆ ಮತ್ತು ಸ್ಪಷ್ಟ ನಿಯಮಾವಳಿಗಳಿಲ್ಲದೆ ಟೋಯಿಂಗ್ ಶುರುವಾಗಿರುವುದು ವಾಹನ ಸವಾರರಲ್ಲಿ ಆಶ್ಚರ್ಯ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ನಿಯಮಾವಳಿಗಳು ಅಂತಿಮಗೊಳ್ಳುವ ಮುನ್ನವೇ ಕಾರ್ಯಾಚರಣೆಗೆ ಇಳಿದಿರುವುದು ಪೊಲೀಸ್ ಇಲಾಖೆಯ ನಿರ್ಧಾರದ ಬಗ್ಗೆ ಪ್ರಶ್ನೆಗಳನ್ನು