Assembly Session | ಕಾಲ್ತುಳಿತ ಪ್ರಕರಣ: ಸದನ ಸಮಿತಿ ರಚನೆಗೆ ಪ್ರತಿಪಕ್ಷ ಆಗ್ರಹ

Update: 2025-08-12 03:40 GMT
Live Updates - Page 2
2025-08-12 04:18 GMT

ರಾಜಣ್ಣ ವಜಾ: ಸಿಎಂ, ಡಿಸಿಎಂಗೆ ಗೊತ್ತಿರಬಹುದು- ಪರಮೇಶ್ವರ್

ರಾಜಣ್ಣ ಅವರನ್ನು ಸಂಪುಟದಿಂದ ಯಾಕೆ ವಜಾ‌ ಮಾಡಲಾಗಿದೆ ಎಂಬುದು ತಿಳಿದಿಲ್ಲ. ಸಿಎಂ ಹಾಗೂ ಡಿಸಿಎಂ ಅವರಿಗೆ ಗೊತ್ತಿರಬಹುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ರಾಜಣ್ಣ ಅವರು ನನ್ನನ್ನು ಭೇಟಿ ಮಾಡಿ, ನಿಮಗೆ ಹೈಕಮಾಂಡ್ ಪರಿಚಯವಿದೆ, ಸಂಪುಟದಿಂದ ತೆಗೆದಿದ್ದು ಯಾಕೆ ಎಂದು ಕೇಳಿ ಎಂದರು. ಕೇಳುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಹೇಳಿದೆ. ಇದಕ್ಕೆ ಸಿಎಂ ಹಾಗೂ ಡಿಸಿಎಂ ಉತ್ತರಿಸಬೇಕು ಎಂದರು.

2025-08-12 03:53 GMT

ಕಾಂಗ್ರೆಸ್ ನಲ್ಲಿ ದಲಿತರಿಗೆ ಎಲ್ಲಿದೆ ನ್ಯಾಯ?

ಸತ್ಯ ಹೇಳಿದ್ದಕ್ಕೆ  ಕಾಂಗ್ರೆಸ್ ಹಿರಿಯ ನಾಯಕನನ್ನು ಸಂಪುಟದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಕಿಡಿ ಕಾರಿದೆ.

ದಲಿತ ನಾಯಕರ ಏಳಿಗೆಯನ್ನು ಕಾಂಗ್ರೆಸ್‌ ಎಂದೂ ಸಹಿಸದು.! ದ್ರೋಹ, ವಂಚನೆ, ಅವಮಾನ, ರಾಜೀನಾಮೆಯೊಂದೇ ಶೋಷಿತರಿಗೆ ಕಾಂಗ್ರೆಸ್‌ ಕೊಟ್ಟಿರುವ ಬಹುಮಾನ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅರೋಪಿಸಿದೆ. ಅಲ್ಲದೇ ಕಾಂಗ್ರೆಸ್‌ನಲ್ಲಿ ಎಲ್ಲಿದೆ ನ್ಯಾಯ ಎಂದು ಪ್ರಶ್ನಿಸಿದೆ.

Tags:    

Similar News