ಟ್ರಂಪ್ ಅಪ್ಪುಗೆ ಮೋದಿಗೆ ಖುಷಿ ಕೊಟ್ಟಿರಬಹುದು, ಒಪ್ಪಂದಗಳಿಗಾಗಿ ಸ್ವಲ್ಪ ಎಚ್ಚರ ವಹಿಸಬೇಕು
ಹೊಸ ದ್ವಿಪಕ್ಷೀಯ ವ್ಯಾಪಾರ ಆಡಳಿತವು ರೂಪುಗೊಳ್ಳುವುದರಿಂದ ಮುಂಬರುವ ದಿನಗಳಲ್ಲಿ ಎರಡೂ ದೇಶಗಳು ಅದಕ್ಕಾಗಿ ಕೆಲಸ ಮಾಡಬೇಕು. ಭಾರತವು ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕದಿಂದ ತೈಲ ಮತ್ತು ರಕ್ಷಣಾ ಉತ್ಪನ್ನಗಳನ್ನು ಖರೀದಿಸಬೇಕು.;
ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 13ರಂದು ಅಧಿಕೃತ ಅಮೆರಿಕ ಪ್ರವಾಸ ಮುಗಿಸಿ ಬರುವಾಗ ಅತ್ಯಂತ ಖುಷಿಯಿಂದ ಬಂದಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿ ಅವರತ್ತ ಅಷ್ಟೊಂದು ಸ್ನೇಹಭಾವ ತೋರಿದ್ದರು. ಇದು ಭಾರತೀಯ ನಾಯಕನಿಗೆ ಸಂತೋಷ ತಂದಿರುವುದರಲ್ಲಿ ವಿಶೇಷ ಏನಿಲ್ಲ. ಆದರೂ ಇಲ್ಲೊಂದು ಸಂಗತಿ ಗಮನಿಸಬೇಕಾಗಿದೆ. ಭಾರತ ಹಾಗೂ ಅಮೆರಿಕವನ್ನು ಏಕಕಾಲಕ್ಕೆ ಮಹಾನ್ ರಾಷ್ಟ್ರವನ್ನಾಗಿ ಮಾಡೋಣ ಎಂಬ (MAGA (Make America Great Again) - MIGA (Make India Great Again)) ಮೋದಿಯ ಹೇಳಿಕೆಗೆ ಟ್ರಂಪ್ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.
ಭಾರತ-ಅಮೆರಿಕದ ದ್ವಿಪಕ್ಷೀಯ ಸಂಬಂಧಗಳ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿರುವೆ ಎಂಬುದನ್ನು ಟ್ರಂಪ್ ಒತ್ತಿಹೇಳಿದ ಕಾರಣ ಮೋದಿ ವಿಶೇಷವಾಗಿ ಸಂತೋಷಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ, ಭಾರತ-ಅಮೇರಿಕಾ ಜಂಟಿ ಪ್ರಕಟಣೆಯಲ್ಲಿ ಘೋಷಿಸಲಾದ ಹೊಸ ಪ್ರಸ್ತಾಪ - ಭಾರತ- ಅಮೇರಿಕಾ ಸಹಭಾಗಿತ್ವ (ಸೈನಿಕ ಸಹಯೋಗ, ವಾಣಿಜ್ಯ ಮತ್ತು ತಂತ್ರಜ್ಞಾನ ವೇಗವರ್ಧಿತ ಅಭಿವೃದ್ಧಿಗೆ) ಮಹತ್ವ ಪಡೆದಿದೆ.
ಜಾಗತಿಕ ಶಕ್ತಿ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಉಭಯ ದೇಶಗಳ ನಡುವೆ ದೊಡ್ಡ ಅಂತರವಿದ್ದರೂ, ಜಾಗತಿಕ ವಿಷಯಗಳಲ್ಲಿ ವಿಭಿನ್ನ ಅಭಿಪ್ರಾಯಗಳಿದ್ದರೂ, ಭಾರತ ಮತ್ತು ಅಮೇರಿಕಾ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಂಬಂಧವನ್ನು ಬಲಪಡಿಸಲು ಮುಂದಾಗಿರುವುದು ಈ ಭೇಟಿಯಲ್ಲಿ ಖಚಿತವಾಗಿದೆ.
ಮೋದಿ ಮತ್ತು ಭಾರತೀಯ ವಿದೇಶಾಂಗ ಮತ್ತು ಭದ್ರತಾ ಸಂಸ್ಥೆಗಳು ಸಂತೋಷಗೊಳ್ಳುವುದಕ್ಕೆ ಇನ್ನೊಂದು ಅಂಶವಿದೆ. ಖಲಿಸ್ತಾನಿ ನಾಯಕ ಗುರ್ಪತ್ವಂತ್ ಸಿಂಗ್ ಅವರ ರಕ್ಷಣೆ ಬಗ್ಗೆ ಟ್ರಂಪ್ ಆಡಳಿತದ ಹೆಚ್ಚಿನ ಆಸಕ್ತಿ ಹೊಂದಿಲ್ಲ ಎಂಬುದು ಖಾತರಿಯಾಗಿದೆ. ಹೀಗಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮೋದಿ ಅವರ ಅಮೆರಿಕ ಭೇಟಿಯಲ್ಲಿ ಜತೆಯಾಗಲು ಸಾಧ್ಯವಾಯಿತು. ಕಳೆದ ಸೆಪ್ಟೆಂಬರ್ನಲ್ಲಿ ಜೋ ಬೈಡನ್ ನೇತೃತ್ವದಲ್ಲಿ ನಡೆದ ನಾಲ್ಕು ರಾಷ್ಟ್ರಗಳ ಶೃಂಗಸಭೆ ವೇಳೆ ದೋವಲ್ಗೆ ಮೋದಿ ಜತೆ ಹೋಗಲು ಸಾಧ್ಯವಾಗಿರಲಿಲ್ಲ.
ಮುಂಬಯಿ ಭಯೋತ್ಪಾದಕ ದಾಳಿಯ (26/11) ಮಾಸ್ಟರ್ ಮೈಂಡ್ ತಹಾವುರ್ ರಾಣಾನನ್ನು ಭಾರತಕ್ಕೆ ನೀಡಲು ಟ್ರಂಪ್ ಒಪ್ಪಿರುವುದು ಇನ್ನೊಂದು ಯಶಸ್ಸು ಎನ್ನಬಹುದು. ಪಾಕಿಸ್ತಾನ ಮೂಲದ ಕೆನಡಾ ನಾಗರಿಕ ಅಮೆರಿಕದಲ್ಲಿದ್ದು ಅಲ್ಲಿನ ಕಾನೂನು ಕುಣಿಕೆಗೆ ಸಿಕ್ಕಿ ಹಾಕಿಕೊಂಡಿದ್ದ 2008ರ ಉಗ್ರ ದಾಳಿಯಲ್ಲಿ ಭಾಗಿಯಾದ ಆರೋಪ ಇರುವ ಆತನನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಕೋರಲಾಗಿತ್ತು. ಅದಕ್ಕೆ ಸಮ್ಮತಿ ದೊರಕಿದೆ. ರಾಣಾ ಅಮೆರಿಕ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೇಲ್ಮನವಿಗಳನ್ನು ಸಲ್ಲಿಸಿ ಸೋತಿರುವುದು ಕೂಡ ಟ್ರಂಪ್ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿತ್ತು.
ಮೋದಿ ಭೇಟಿ ವೇಳೆ ಟ್ರಂಪ್ ಈ ವಿಷಯವನ್ನು ಬಹಿರಂಗವಾಗಿ ಘೋಷಿಸಿದ್ದನ್ನು ಗಮನಿಸಬೇಕು. ರಾಣಾ ಭಾರತದ ಸುಪರ್ದಿಗೆ ಸಿಕ್ಕ ತಕ್ಷಣವೇ ಭಾರತ ಸರ್ಕಾರ, ಭಯೋತ್ಪಾದನೆ ವಿರುದ್ಧದ ತನ್ನ ಹೋರಾಟ ತೀವ್ರಗತಿಯಲ್ಲಿದೆ ಎಂದು ಹೇಳಲಿದೆ.
ನಿಶ್ಚಿತವಾಗಿ ಈ ನಿರ್ಧಾರದಿಂದ ಪಾಕಿಸ್ತಾನ ನಿರಾಸೆಗೊಂಡಿರಬಹುದು. ಆದರೆ, ಟ್ರಂಪ್ ಅವರ ಗಮನ ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದ ಕಡೆಗೆ ಇಲ್ಲ, ಬದಲಾಗಿ ಇರಾನ್ ಮೇಲೆ ಅವರ ಆರ್ಥಿಕ ನಿರ್ಬಂಧಗಳನ್ನು ಇನ್ನಷ್ಟು ಗಟ್ಟಿ ಮಾಡುವ ಉದ್ದಶ ಹೊಂದಿದೆ.
ಟ್ರಂಪ್ ವ್ಯವಹಾರಿಕ ದೃಷ್ಟಿಯಿಂದ ಈ ಭೇಟಿಯನ್ನು ಪರಿಗಣಿಸಿದ್ದರು. ಅಮೆರಿಕಾದ ಉತ್ಪನ್ನಗಳ ಮೇಲೆ ಭಾರತ ಹಾಕುತ್ತಿರುವ ಆಮದು ತೆರಿಗೆಗಳಿಗೆ ಪ್ರತಿಯಾಗಿ ತಾವೂ ಅಷ್ಟೇ ತೆರಿಗೆ ಹಾಕುವುದಾಗಿ ಸ್ಪಷ್ಟಪಡಿಸಿದ್ದಾರೆ. ಮೋದಿ ಸರ್ಕಾರ, ಈಗಾಗಲೇ ಕೆಲವು ಉತ್ಪನ್ನಗಳ ಮೇಲಿನ ತೆರಿಗೆ ಕಡಿಮೆಗೊಳಿಸಿದ್ದರೂ, ಟ್ರಂಪ್ ಇನ್ನಷ್ಟು ರಿಯಾಯಿತಿ ಬೇಕು ಎಂದು ಕೇಳುತ್ತಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಈ ಹೊಸ ಯೋಜನೆಯು, ವ್ಯಾಪಾರದ ಜೊತೆಗೆ ತಂತ್ರಜ್ಞಾನದ ಸಹಯೋಗ ಬಲಪಡಿಸುವ ಉದ್ದೇಶ ಹೊಂದಿದೆ. ಆದಾಗ್ಯೂ ಭಾರತ ತನ್ನ ಸ್ವಂತ ತಂತ್ರಜ್ಞಾನ ಬಲವನ್ನು ಬೆಳೆಸಬೇಕಾದ ಅಗತ್ಯವನ್ನು ಮನಗಾಣಬೇಕಾಗಿದೆ.
ಇದೇ ವೇಳೆ, ಹೆಚ್ಚಿನ ಪ್ರಮಾಣದಲ್ಲಿ ತಮ್ಮಿಂದ ತೈಲ ಮತ್ತು ಅನಿಲ ಖರೀದಿಸಲು ಭಾರತಕ್ಕೆ ಒತ್ತಾಯಿಸಿದೆ. ಭಾರತವು ಉನ್ನತ ತಂತ್ರಜ್ಞಾನ ರಕ್ಷಣಾ ಸಾಧನಗಳ ಖರೀದಿಯಲ್ಲಿ ಅಮೆರಿಕಗೆ ಹೆಚ್ಚು ಅವಲಂಬಿತವಾಗುವಂತೆ ಮಾಡಿದೆ. ಹೆಚ್ಚು ಹೆಚ್ಚು ತನ್ನ ಸೇನಾ ಸಾಮಗ್ರಿಗಳ ಖರೀದಿಗೆ ಭಾರತಕ್ಕೆ ಒತ್ತಾಯಿಸಿದೆ.
ಈಶಾನ್ಯ ಸಮುದ್ರ ಪ್ರದೇಶ ಸಂಪೂರ್ಣವಾಗಿ ಚೀನಾದ ಪ್ರಭಾವಕ್ಕೆ ಒಳಗಾಗದಂತೆ ತಡೆಯಲು ಭಾರತ ಮತ್ತು ಅಮೇರಿಕಾ ಜಂಟಿಯಾಗಿ ಕೆಲಸ ಮಾಡಲಿವೆ. ಇದು ಎರಡು ರಾಷ್ಟ್ರಗಳ ನಡುವೆ ಹೆಚ್ಚಿನ ಸೇನಾ ಸಹಕಾರ ಮತ್ತು ತಂತ್ರಜ್ಞಾನ ನೆರವಿಗೆ ಕಾರಣವಾಗಲಿದೆ.
ಜಾಗತಿಕ ಯುದ್ಧಗಳನ್ನು ಅಂತ್ಯಗೊಳಿಸುವ ಟ್ರಂಪ್ ಪ್ರಯತ್ನಗಳನ್ನು ಮೋದಿ ಈ ಭೇಟಿಯ ನಡುವೆ ಹೊಗಳಿದ್ದಾರೆ. ಅಂದ ಹಾಗೆ ಟ್ರಂಪ್ "ಯುದ್ಧಭೂಮಿಯಲ್ಲಿ ಯಾವುದೇ ಪರಿಹಾರವಿಲ್ಲ, ಮಾತುಕತೆಯಲ್ಲಿದೆ" ಎಂದು ಹೇಳುತ್ತಾ ಬಂದಿದ್ದರು.
ಮೋದಿ, ಮಾನವ ಕಳ್ಳಸಾಗಣೆಯ ತಡೆಗಟ್ಟುವಿಕೆ ಕುರಿತಂತೆ ಮಾತನಾಡಿದ್ದಾರೆ. ಆದರೆ, ಅಕ್ರಮ ವಲಸಿಗರನ್ನು ಭಾರತಕ್ಕೆ ಕಳುಹಿಸುವ ಅವರ ವೈಯಕ್ತಿಕ ಗೌರವ ಕಾಪಾಡಬೇಕು ಎಂಬ ವಿಚಾರದ ಕುರಿತು ಮೌನ ವಹಿಸಿದ್ದರು.
ಭಾರತ ಸರ್ಕಾರ ಮತ್ತು ಆಡಳಿತ ಪಕ್ಷ. ಮೋದಿ ಅವರ ಈ ಭೇಟಿಯನ್ನು ಭಾರೀ ಯಶಸ್ಸು ಎಂದು ಹೇಳಲಿದೆ. ಆದರೆ, ಭಾರತವು ಅಮೇರಿಕಾದೊಂದಿಗೆ ವ್ಯವಹಾರ, ರಕ್ಷಣಾ ಒಪ್ಪಂದಗಳು ಮತ್ತು ಅಣು ನೀತಿಗಳಲ್ಲಿ ಹೇಗೆ ಮುಂದುವರಿಸುತ್ತದೆ ಎಂಬುದನ್ನು ಗಮನಿಸಬೇಕಾಗಿದೆ.