ಕವಿತಾ ನ್ಯಾಯಾಂಗ ಬಂಧನ ವಿಸ್ತರಣೆ

Update: 2024-04-15 11:20 GMT

ಏಪ್ರಿಲ್ 15- ದೆಹಲಿ ನ್ಯಾಯಾಲಯವು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ. ಕವಿತಾ ಅವರನ್ನು ಏಪ್ರಿಲ್ 23 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. 

ಕೇಂದ್ರೀಯ ತನಿಖಾ ದಳ(ಸಿಬಿಐ)ದ ಮೂರು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದಿದೆ. ಅವರು ನ್ಯಾಯಾಲಯದಿಂದ ಹೊ ರಬರುವಾಗ, ʻಇದು ಸಿಬಿಐ ಕಸ್ಟಡಿಯಲ್ಲ. ಬಿಜೆಪಿಯ ಕಸ್ಟಡಿʼ ಎಂದು ಟೀಕಿಸಿದರು. 

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ)ದಿಂದ ಬಂಧಿಸಲ್ಪಟ್ಟಿದ್ದ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿಯನ್ನು ಸಿಬಿಐ ತಿಹಾರ್ ಜೈಲಿನಿಂದ ಕಸ್ಟಡಿಗೆ ತೆಗೆದುಕೊಂಡಿತ್ತು. ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ ನ್ಯಾಯಾಧೀಶರ ಮುಂದೆ ಅವರು ಹಾಜರಾದರು.

ಆದರೆ, ಎಎಪಿ ನಾಯಕ ಮತ್ತು ರಾಜ್ಯಸಭೆ ಮಾಜಿ ಸದಸ್ಯನಿಗೆ ಸುಪ್ರೀಂ ಕೋರ್ಟ್ ಏಪ್ರಿಲ್ 2 ರಂದು ಜಾಮೀನು ನೀಡಿತು. ಇಡಿ ಅವರ ಜಾಮೀನನ್ನು ವಿರೋಧಿಸದಿರಲು ನಿರ್ಧರಿಸಿದ್ದು ಜಾಮೀನು ಮಾನ್ಯವಾಗಲು ಕಾರಣ. ನ್ಯಾಯಾಲಯದ ಪ್ರತಿಕೂಲ ಆದೇಶವು ಕೆಳ ನ್ಯಾಯಾಲಯದಲ್ಲಿ ವಿಚಾರಣೆ ಮೇಲೆ ಪರಿಣಾಮ ಬೀರಬಹುದು ಎಂದು ಇಡಿ ಜಾಮೀನು ಅರ್ಜಿಯನ್ನು ಪ್ರಶ್ನಿಸಲಿಲ್ಲ.

ಕೇಜ್ರಿವಾಲ್‌ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಕವಿತಾ, ಕೇಜ್ರಿವಾಲ್ ಮತ್ತು ಅವರ ಸಹ ಪಕ್ಷದ ನಾಯಕ ಮತ್ತು ಸಚಿವ ಸಿಸೋಡಿಯಾ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ.

Tags:    

Similar News