ಶಿಕ್ಷಕರ ನೇಮಕ ಹಗರಣ: ಕೋಲ್ಕತ್ತಾದ ಅನೇಕ ಕಡೆ ಇಡಿ ದಾಳಿ

Update: 2024-03-08 06:54 GMT

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕ ಹಗರಣದ ತನಿಖೆಗೆ ಸಂಬಂಧಿಸಿದಂತೆ ಕೋಲ್ಕತ್ತಾ ಸೇರಿದಂತೆ ಅನೇಕ ಸ್ಥಳಗಳಲ್ಲಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶುಕ್ರವಾರ ಬೆಳಗ್ಗೆ (ಮಾರ್ಚ್ 8) ತಿಳಿಸಿದ್ದಾರೆ.

ಕೋಲ್ಕತ್ತಾಗೆ ಹೊಂದಿಕೊಂಡಿರುವ ನವ ನಗರದಲ್ಲಿರುವ ಪಥರ್‌ಘಾಟಾ ಮಜರ್ ಷರೀಫ್ ಪ್ರದೇಶದಲ್ಲಿ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರ ಸಹಚರ ಎನ್ನಲಾದ ಮಾಜಿ ಶಿಕ್ಷಕನ ನಿವಾಸ, ನಗರದ ಉತ್ತರ ಭಾಗದಲ್ಲಿರುವ ನಾಗರ್‌ಬಜಾರ್ ಪ್ರದೇಶದಲ್ಲಿನ ಲೆಕ್ಕಪರಿಶೋಧಕರೊಬ್ಬರ ಮನೆ ಹಾಗೂ ರಾಜರಹತ್ ಪ್ರದೇಶದಲ್ಲಿರುವ ಕೆಲವು ಉದ್ಯಮಿಗಳು, ಶಿಕ್ಷಕರು ಮತ್ತು ಮಧ್ಯವರ್ತಿಗಳ ನಿವಾಸಗಳಲ್ಲಿ ಐದು ಸದಸ್ಯರ ಇಡಿ ತಂಡ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೊಂದು ಬಹುಕೋಟಿ ಹಗರಣವಾಗಿದ್ದು, ಹಣದ ಹರಿವನ್ನು ಪತ್ತೆಹಚ್ಚಲು ಇಡಿ ಪ್ರಯ ತ್ನಿಸುತ್ತಿದೆ.

Tags:    

Similar News