ಉತ್ತರಾಖಂಡ: ಗುರುದ್ವಾರದ ಕರಸೇವಾ ಮುಖ್ಯಸ್ಥನ ಹತ್ಯೆ

Update: 2024-03-28 06:43 GMT

ಮಾ.28- ಉತ್ತರಾಖಂಡದ ನಾನಕಮಟ್ಟ ಗುರುದ್ವಾರದ ಕರಸೇವಾ ಮುಖ್ಯಸ್ಥ ಬಾಬಾ ತಾರ್ಸೆಮ್ ಸಿಂಗ್ ಅವರನ್ನು ಗುರುವಾರ (ಮಾರ್ಚ್ 28) ಬೆಳಗ್ಗೆ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. 

ಪೊಲೀಸರ ಪ್ರಕಾರ, ಘಟನೆ 'ಡೇರಾ' ಒಳಗೆ ಬೆಳಗ್ಗೆ 6.30 ರ ಸುಮಾರಿಗೆ ಸಂಭವಿಸಿದೆ. ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಗುರುದ್ವಾರ ಕ್ಕೆ ನುಗ್ಗಿ ತಾರ್ಸೆಮ್ ಸಿಂಗ್‌ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಅವರನ್ನು ಖತಿಮಾದ ಆಸ್ಪತ್ರೆಗೆ ಕರೆದೊಯ್ದರೂ, ಯಾವುದೇ ಪ್ಆರಯೋಜನ ಆಗಲಿಲ್ಲ ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ʻಬಹಳ ಗಂಭೀರ ವಿಷಯʼ ಎಂದಿರುವ ಅವರು, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಟಿ.ಸಿ. ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಕುಮಾವ್‌ ನ ಡಿಐಜಿ ಕೂಡ ಆಗಮಿಸಲಿದ್ದಾರೆ, ʼ ಎಂದು ಹೇಳಿದರು. ʻತನಿಖೆಗೆ ಎಸ್‌ಟಿಎಫ್ ಮತ್ತು ಸ್ಥಳೀಯ ಪೊಲೀಸರನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಪ್ರಕರಣವನ್ನು ಆದ್ಯತೆಯಾಗಿ ಇರಿಸಿಕೊಳ್ಳಲು ಮತ್ತು ಎಲ್ಲಾ ಕೋನಗಳಿಂದ ತನಿಖೆ ಮಾಡಲು ಎಸ್‌ಟಿಎಫ್‌ಗೆ ತಿಳಿಸಲಾಗಿದೆ. ಹತ್ಯೆ ಮಾಡಿದವರನ್ನು ಗುರುತಿಸುವ ಜೊತೆಗೆ, ಕೊಲೆಯ ಹಿಂದೆ ಪಿತೂರಿ ಏನಾದರೂ ಇದೆಯೇ ಎಂದು ಗುರುತಿಸಬೇಕಿದೆ. ಕೇಂದ್ರ ಏಜೆನ್ಸಿಗಳನ್ನು ಸಹ ಸಂಪರ್ಕಿಸಿದ್ದೇವೆ,ʼ ಎಂದರು.

Tags:    

Similar News