ನಿಮಗೆ ಅವಮಾನವಾಗುತ್ತಿದ್ದರೆ ನಮ್ಮೊಂದಿಗೆ ಸೇರಿ: ಗಡ್ಕರಿಗೆ ಉದ್ಭವ್‌ ಠಾಕ್ರೆ ಕರೆ

ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ನಡುವಿನ ಸೀಟು ಹಂಚಿಕೆ ಚರ್ಚೆ ಪೂರ್ಣಗೊಳ್ಳದ ಕಾರಣ ಲೋಕಸಭೆ ಚುನಾವಣೆಗೆ ಬಿಜೆಪಿಯ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹಾರಾಷ್ಟ್ರದ ಹೆಸರುಗಳಿಲ್ಲ ಎಂದು ಉಪ ಮುಖ್ಯಮಂತ್ರಿ ಫಡ್ನವೀಸ್ ಹೇಳಿದ್ದಾರೆ.

Update: 2024-03-14 08:03 GMT
ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಗಡ್ಕರಿ ಅವರ ಹೆಸರು ಕಾಣೆಯಾಗಿದೆ ಎಂದು ಠಾಕ್ರೆ ಹೇಳಿದರು.
Click the Play button to listen to article

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಬಿಜೆಪಿ 'ಅವಮಾನಿಸುತ್ತಿದ್ದರೆ' ಬಿಜೆಪಿ ತೊರೆಯುವಂತೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮತ್ತೊಮ್ಮೆ ಕೇಳಿಕೊಂಡಿದ್ದಾರೆ.

ಮಂಗಳವಾರ (ಮಾರ್ಚ್ 12) ಪೂರ್ವ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಪುಸಾದ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಠಾಕ್ರೆ, ಬಿಜೆಪಿ ಒಂದು ಕಾಲದಲ್ಲಿ (ಭ್ರಷ್ಟಾಚಾರದ ಆರೋಪದ ಮೇಲೆ) ಗುರಿಯಾಗಿದ್ದ (ಮಾಜಿ ಕಾಂಗ್ರೆಸ್ ನಾಯಕ) ಕೃಪಾ ಶಂಕರ್ ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೇಸರಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಗಡ್ಕರಿ ಅವರ ಹೆಸರು ಕಾಣೆಯಾಗಿತ್ತು.

ಎರಡು ದಿನಗಳ ಹಿಂದೆಯೇ ನಾನು ಗಡ್ಕರಿ ಅವರಿಗೆ ಇದನ್ನು ಹೇಳಿದ್ದೆ. ನಾನು ಅದನ್ನು ಮತ್ತೆ ಪುನರಾವರ್ತಿಸುತ್ತಿದ್ದೇನೆ. ಬಿಜೆಪಿಯಿಂದ ನಿಮಗೆ ಅವಮಾನವಾಗುತ್ತಿದ್ದರೆ ಬಿಜೆಪಿ ತೊರೆದು ಮಹಾ ವಿಕಾಸ್ ಅಘಾಡಿ (ಎಂವಿಎ) ಗೆ ಸೇರಿಕೊಳ್ಳಿ. ನಿಮ್ಮ ಗೆಲುವನ್ನು ನಾವು ಖಚಿತಪಡಿಸುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಿಮ್ಮನ್ನು ಸಚಿವರನ್ನಾಗಿ ಮಾಡುತ್ತೇವೆ, ಅಧಿಕಾರವಿರುವ ಹುದ್ದೆಯಾಗಲಿದೆ ಎಂದರು.

ಕಳೆದ ವಾರ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಗಡ್ಕರಿ ಅವರಿಗೆ ಠಾಕ್ರೆ ನೀಡಿದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶಿವಸೇನೆ (ಯುಬಿಟಿ) ಮುಖ್ಯಸ್ಥರನ್ನು ಲೇವಡಿ ಮಾಡಿದ್ದಾರೆ.

ಗಡ್ಕರಿ ಅವರು ಬಿಜೆಪಿಯ ಪ್ರಮುಖ ನಾಯಕರಾಗಿದ್ದಾರೆ, ಆದರೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ನಡುವಿನ ಸೀಟು ಹಂಚಿಕೆ ಚರ್ಚೆಗಳು ಪೂರ್ಣವಾಗಿಲ್ಲದ ಕಾರಣ ಮೊದಲ ಪಟ್ಟಿಯಲ್ಲಿ ಮಹಾರಾಷ್ಟ್ರದ ಹೆಸರುಗಳಿಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ.

ಪೌರತ್ವ ಕಾಯಿದೆಯನ್ನು ʼಚುನಾವಣಾ ಜುಮ್ಲಾʼ ಎಂದ ಠಾಕ್ರೆ

ಈ ಮಧ್ಯೆ ಠಾಕ್ರೆ, ಪೌರತ್ವ (ತಿದ್ದುಪಡಿ) ಕಾಯ್ದೆಯ ಅಡಿಯಲ್ಲಿ ನಿಯಮಗಳ ಅಧಿಸೂಚನೆಯನ್ನು "ಚುನಾವಣಾ ಜುಮ್ಲಾ" (ಘೋಷವಾಕ್ಯ) ಎಂದು ಕರೆದಿದ್ದಾರೆ. ಹಿಂದೂಗಳು, ಸಿಖ್ಖರು, ಪಾರ್ಸಿಗಳು ಮತ್ತು ಇತರರು (ನೆರೆಹೊರೆಯ ದೇಶಗಳಿಂದ) ಭಾರತಕ್ಕೆ ಬರುತ್ತಿರುವುದು ಸ್ವಾಗತಾರ್ಹ ಆದರೆ ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗುವುದರಿಂದ ಅಧಿಸೂಚನೆಯ ಸಮಯವು ಅನುಮಾನಾಸ್ಪದವಾಗಿದೆ ಎಂದರು.

370 ನೇ ವಿಧಿಯನ್ನು ರದ್ದುಪಡಿಸಿ ನಾಲ್ಕು ವರ್ಷಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಚುನಾವಣೆಗಳು ನಡೆದಿಲ್ಲ ಮತ್ತು ಕಾಶ್ಮೀರಿ ಪಂಡಿತರು ಇನ್ನೂ ಕಾಶ್ಮೀರದಲ್ಲಿ ತಮ್ಮ ಮನೆಗಳಿಗೆ ಹಿಂತಿರುಗಿಲ್ಲ. ಬಿಜೆಪಿ ಮೊದಲು ಕಾಶ್ಮೀರಿ ಪಂಡಿತರನ್ನು ಮರಳಿ ಕರೆತರಬೇಕು. ನಂತರ ಸಿಎಎ ಜಾರಿಗೊಳಿಸಬೇಕು ಎಂದು ಠಾಕ್ರೆ ಹೇಳಿದರು.

'ದೇಶ-ಭಕ್ತ' ವಿರುದ್ಧ 'ದ್ವೇಶ ಭಕ್ತ'

ಮುಂಬರುವ ಚುನಾವಣೆಯಲ್ಲಿ ಧರ್ಮ-ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕಿ ಸಂವಿಧಾನ ಬದಲಿಸಲು ಹೊರಟಿರುವ ಬಿಜೆಪಿ, ಮತ್ತೊಂದೆಡೆ ದೇಶಪ್ರೇಮಿಗಳ ಮೈತ್ರಿಕೂಟವಾಗಿರುವ ಭಾರತ ಬಣವಿದೆ ಎಂದರು. ಈ ಚುನಾವಣೆಯು `ದೇಶ-ಭಕ್ತ' (ತಮ್ಮ ದೇಶವನ್ನು ಪ್ರೀತಿಸುವವರು) ಮತ್ತು 'ದ್ವೇಶ ಭಕ್ತ' (ದ್ವೇಷವನ್ನು ಬೋಧಿಸುವವರು) ನಡುವೆ ನಡೆಯಲಿದೆ ಎಂದು ಠಾಕ್ರೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಣಿಪುರ ಹಿಂಸಾರದ ಬಗ್ಗೆ ಮಾತನಾಡಿದ ಠಾಕ್ರೆ ಪ್ರಧಾನಿ ಮೋದಿಯವರಿಗೆ ಪ್ರಕ್ಷುಬ್ಧ ಮಣಿಪುರಕ್ಕೆ ಭೇಟಿ ನೀಡಲು ಇನ್ನೂ ಸಮಯ ಕೂಡಿ ಬರಲಿಲ್ಲ ಎಂದರು. 

Tags:    

Similar News