ಕಮಲ್ ಹಾಸನ್ ವಿವಾದ: ಚರ್ಚೆಗೆ ಬಂದರೆ ನೋಡೋಣ; ಆದರೆ ಕ್ಷಮೆ ಯಾಚಿಸಲೇಬೇಕು ಎಂದ ಚಲನಚಿತ್ರ ಮಂಡಳಿ
ಥಗ್ಲೈಫ್ ಸಿನಿಮಾವನ್ನು ನಿಷೇಧ ಮಾಡುವ ಅಧಿಕಾರ ನಮಗಿಲ್ಲ. ಆದರೆ, ಕಮಲಹಾಸನ್ ಕ್ಷಮೆ ಕೇಳಲೇಬೇಕು ಎಂಬುದು ನಮ್ಮ ಎಲ್ಲರ ನಿಲುವು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಹೇಳಿದ್ದಾರೆ.;
ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್ ಅವರ ಥಗ್ಲೈಫ್ ಸಿನಿಮಾವನ್ನು ನಿಷೇಧ ಮಾಡುವ ಅಧಿಕಾರ ನಮಗಿಲ್ಲ. ಆದರೆ, ಕಮಲಹಾಸನ್ ಕ್ಷಮೆ ಕೇಳಲೇಬೇಕು ಎಂಬುದು ನಮ್ಮ ಎಲ್ಲರ ನಿಲುವು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಹೇಳಿದ್ದಾರೆ.
ಮಂಗಳವಾರ ಹೈಕೋರ್ಟಿನಲ್ಲಿ ಕಮಲಹಾಸನ್ ಸಿನಿಮಾ ಸಂಬಂಧಿಸಿದಂತೆ ನಡೆದ ವಿಚಾರಣೆ ಬಳಿಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಿ ಪ್ರತಿಕ್ರಿಯೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಕಮಲಹಾಸನ್ ವಿವಾದದ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜತೆ ಮಾತನಾಡುವುದಾಗಿ ಕಮಲಹಾಸನ್ ಪರ ವಕೀಲರು ಹೇಳಿದ್ದಾರೆ. ಅವರು ನಮ್ಮ ಬಳಿ ಚರ್ಚೆಗೆ ಬರುವುದಾದರೆ ಸ್ವಾಗತವಿದೆ ಎಂದು ಅವರು ಹೇಳಿದ್ದಾರೆ. " ಚರ್ಚೆಮಾಡಲಿ ಏನು ಹೇಳುತ್ತಾರೆ ನೊಡೋಣ," ಎಂದೂ ಅವರು ತಿಳಿಸಿದ್ದಾರೆ.
"ಕನ್ನಡ ವಿರೋಧಿ ಹೇಳಿಕೆ ನೀಡಿದ ಅವರೇ (ಕಮಲ್ ಹಾಸನ್) ನ್ಯಾಯಾಲಯಕ್ಕೆ ಹೋಗಿದ್ದಾರೆ. ಅವರು ಚರ್ಚೆಗೆ ಬರುವುದಾದರೆ ಬರಲಿ, ಅದರೆ ನಾವು ನಾವು ಕನ್ನಡಪರ ಸಂಘಟನೆಗಳ ಪರವಾಗಿ ಇರುವುದು ಎಂದು ನರಸಿಂಹಲು ಸ್ಪಷ್ಟಪಡಿಸಿದ್ದಾರೆ.
"ಸಂಧಾನಕ್ಕೆ ಬರಲಿ, ಬಳಿಕ ನಮ್ಮ ತಿರ್ಮಾನ ಏನು ಅಂತಾ ಆಗ ಹೇಳುತ್ತೇವೆ," ಎಂದು ಅದೇ ಸಂದರ್ಭದಲ್ಲಿ ತಿಳಿಸಿದ ಅವರು, ಎಲ್ಲಾ ಕಲಾವಿದರು ನಮ್ಮ ಜೊತೆಗೆ ಇದ್ದಾರೆ, ಕನ್ನಡದ ಭಾಷೆ ,ಜಲ, ನೆಲ ವಿಚಾರ ಬಂದಾಗ ವಾಣಿಜ್ಯ ಮಂಡಳಿ ಮುಂದೆ ಇರುತ್ತದೆ ಎಂದು ಹೇಳಿದರು.
"ಕಮಲ್ ಹಾಸನ್ ಕರ್ನಾಟಕದ ಜನತೆಯ ಕ್ಷಮೆ ಕೇಳದೆ ರಾಜ್ಯದಲ್ಲಿ ʼಥಗ್ ಲೈಪ್ʼ ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ಒಪ್ಪುತ್ತಿಲ್ಲ ," ಎಂದು ಅವರು ಹೇಳಿದರು.
ಥಗ್ಲೈಫ್ ನಿಷೇಧ?
ಥಗ್ಲೈಫ್ ಚಿತ್ರವನ್ನು ನಿಷೇಧ ( ಬ್ಯಾನ್) ಮಾಡುತ್ತೇವೆ ಎನ್ನುವ ಅಧಿಕಾರ ಕನ್ನಡ ಚಲನಚಿತ್ರ ವಾಣಿಜ್ಯಮಂಡಳಿಗೆ ಇಲ್ಲ ಇದಕ್ಕೆ ಒಂದಷ್ಟು ನಿಯಮಗಳಿವೆ ಎಂದು ಅವರು ಸ್ಪಷ್ಟಪಡಿಸಿದರು. ಜತೆಗೆ, ನ್ಯಾಯಾಲಯದಲ್ಲಿ ಅದ ವಿಚಾರಣೆ ಹಾಗೂ ಕೋರ್ಟ್ ಅಭಿಪ್ರಾಯದ ಬಗ್ಗೆ ಮಾತನಾಡಲು ನಿರಾಕರಿಸಿದರು.
ಕಮಲ್ ಹಾಸನ್ ನಿರ್ಮಾಪಕರಾಗಿರುವ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಪೊಲೀಸ್ ರಕ್ಷಣೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜೂನ್ 10ಕ್ಕೆ ಮುಂದೂಡಿದೆ. ಈ ವೇಳೆ ಕಮಲ್ ಕ್ಷಮೆ ಕೋರಲು ನಿರಾಕರಿಸುತ್ತಿರುವ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ವಿಚಾರಣೆ ವೇಳೆ ಕಮಲ್ ಪರ ವಕೀಲರು, ಪೊಲೀಸ್ ಭದ್ರತೆ ಕುರಿತ ವಿಷಯವನ್ನು ಹಿಂಪಡೆದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೋರಿದ್ದ ಕ್ಷಮಾಪಣೆ ಕುರಿತು ಸಮಾಲೋಚನೆ ನಡೆಸುವುದಾಗಿ ಹೇಳಿದ ಕಾರಣ ಅಂದು ಆ ವಿಷಯ ಮಾತ್ರ ವಿಚಾರಣೆಗೆ ಬರಲಿದೆ.
ಕಮಲ್ ಹಾಸನ್ ನಿರ್ಮಾಪಕರಾಗಿರುವ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಪೊಲೀಸ್ ರಕ್ಷಣೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜೂನ್ 10ಕ್ಕೆ ಮುಂದೂಡಿದೆ. ಈ ವೇಳೆ ಕಮಲ್ ಕ್ಷಮೆ ಕೋರಲು ನಿರಾಕರಿಸುತ್ತಿರುವ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ಮಂಗಳವಾರ (ಜೂನ್3)ರಂದು ನಡೆದ ವಿಚಾರಣೆ ವೇಳೆ ಕಮಲ್ ಪರ ವಕೀಲರು, ಪೊಲೀಸ್ ಭದ್ರತೆ ಕುರಿತ ವಿಷಯವನ್ನು ಹಿಂಪಡೆದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೋರಿದ್ದ ಕ್ಷಮಾಪಣೆ ಕುರಿತು ಸಮಾಲೋಚನೆ ನಡೆಸುವುದಾಗಿ ಹೇಳಿದ ಕಾರಣ ಅಂದು ಆ ವಿಷಯ ಮಾತ್ರ ವಿಚಾರಣೆಗೆ ಬರಲಿದೆ.
ಕನ್ನಡ ಭಾಷೆಯ ಬಗ್ಗೆ ನಟ ಕಮಲ್ ಹಾಸನ್ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (ಕೆಎಫ್ಸಿಸಿ) ಕ್ಷಮೆ ಕೋರುವಂತೆ ಕೇಳಿತ್ತು. ವಿಚಾರಣೆ ನಡುವೆ ಅವರು ಕಮಲ್ ಸ್ಪಷ್ಟನೆಯ ಪತ್ರವೊಂದನ್ನು ವಾಣಿಜ್ಯ ಮಂಡಳಿಗೆ ರವಾನಿಸಿದೆ. ಅದನ್ನು ನ್ಯಾ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ಕಮಲ್ ಪರ ವಕೀಲ ಧ್ಯಾನ್ ಚಿನ್ನಪ್ಪ ಅವರು ಓದಿದರು. ಆ ಪತ್ರದಲ್ಲಿ 'ಕ್ಷಮೆ' ಎಂಬ ಪದ ಇರಲಿಲ್ಲ. ಅದಕ್ಕೆ ಪೀಠ ಬೇಸರ ವ್ಯಕ್ತಪಡಿಸಿದ್ದನ್ನು ಗಮನಿಸಬೇಕಾಗಿದೆ.