ಹೆಣ್ಣು ಮಕ್ಕಳಿಗೆ ತ್ರಿಶೂಲ ಕೊಟ್ಟು, ಯಾಕೆಂದು ಕೇಳಿದವರಿಗೇ ಚುಚ್ಚಿ ಎಂದ ಪ್ರಮೋದ್ ಮುತಾಲಿಕ್ !
ದುರ್ಗಾಮಾತೆಯ ಕೈಯಲ್ಲಿ ಹತ್ತು ಶಸ್ತ್ರಗಳಿವೆ. ಈಶ್ವರನ ಕೈಯಲ್ಲಿ ತ್ರಿಶೂಲವಿದೆ. ಅದನ್ನೇ ಮಹಿಳೆಯರ ಕೈಗೆ ಕೊಡುತ್ತಿದ್ದೇವೆ. ಮುಂದಿನ ಆಯುಧ ಪೂಜೆಯ ಹೊತ್ತಿಗೆ ಹರಿತವಾದ ತಲವಾರ್ ಇಟ್ಟು ಪೂಜೆ ಮಾಡಿ ಎಂದು ಪ್ರಮೋದ್ ಮುತಾಲಿಕ್ ಸಲಹೆ ನೀಡಿದ್ದಾರೆ.;
ಮಹಿಳೆಯರು ಸದಾ ವ್ಯಾನಿಟಿ ಬ್ಯಾಗ್ನಲ್ಲಿ ತ್ರಿಶೂಲ ಇಟ್ಟುಕೊಳ್ಳಿ. ಯಾರಾದರೂ ಚುಡಾಯಿಸಿದರೆ ಅಥವಾ ಅತ್ಯಾಚಾರಕ್ಕೆ ಯತ್ನಿಸುವವರು ಅಥವಾ ಪ್ರಶ್ನಿಸುವವರಿಗೆ ಚುಚ್ಚಿಬಿಡಿ ಎಂದು ಪ್ರಮೋದ್ ಮುತಾಲಿಕ್ ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಅದೇ ರೀತಿ ತ್ರಿಶೂಲ ''ಯಾಕೆಂದು'' ಪ್ರಶ್ನಿಸಿದವರನ್ನೂ ಬಿಡದೇ ಚುಚ್ಚಿ ಎಂದು ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ವತಿಯಿಂದ ಹಿಂದೂ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯುಧ ಪೂಜೆಯ ದಿನ ಮನೆಯಲ್ಲಿ ತಲವಾರ್ ಪೂಜೆ ಮಾಡಬೇಕು. ಆದರೆ, ಇಂದು ಪುಸ್ತಕ ಪೆನ್ನು ಇಟ್ಟು ಪೂಜೆ ಮಾಡುತ್ತಿದ್ದೇವೆ. ದುರ್ಗಾಮಾತೆಯ ಕೈಯಲ್ಲಿ ಹತ್ತು ಶಸ್ತ್ರಗಳಿವೆ. ಈಶ್ವರನ ಕೈಯಲ್ಲಿ ತ್ರಿಶೂಲವಿದೆ. ಅದನ್ನೇ ಮಹಿಳೆಯರ ಕೈಗೆ ಕೊಡುತ್ತಿದ್ದೇವೆ. ಮುಂದಿನ ಆಯುಧ ಪೂಜೆಯ ಹೊತ್ತಿಗೆ ಹರಿತವಾದ ತಲವಾರ್ ಇಟ್ಟು ಪೂಜೆ ಮಾಡಿ ಎಂದು ಸಲಹೆ ನೀಡಿದ್ದಾರೆ.
ಶ್ರೀರಾಮಸೇನೆ ವತಿಯಿಂದ ನೀಡುತ್ತಿರುವ ತ್ರಿಶೂಲದ ಬಗ್ಗೆ ಯಾರು ಭಯಪಡಬೇಡಿ. ಹಿಡಿಕೆ ಬಿಟ್ಟು ಆರು ಇಂಚು ಉದ್ದ ಇದ್ದರೆ ಮಾತ್ರ ಅದು ಆಯುಧ ಎನಿಸುತ್ತದೆ. ಆದರೆ, ನಾವು ನೀಡುತ್ತಿರುವುದು ಮೂರು ಇಂಚಿನ ತ್ರಿಶೂಲ. ಯಾರಾದರೂ ಕೇಳಿದರೆ ಮೊದಲು ಅವರಿಗೇ ಚುಚ್ಚಿಬಿಡಿ. ಪೊಲೀಸರು ಬಂದೂಕಿಗೆ ಪೂಜೆ ಮಾಡುತ್ತಾರೆ. ನಾವ್ಯಾಕೆ ತ್ರಿಶೂಲಕ್ಕೆ ಪೂಜೆ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.
ನೇಹಾ ಹಂತಕನಿಗೆ ಗಲ್ಲು ಶಿಕ್ಷೆಯಾಗಲಿ
ವರ್ಷದ ಹಿಂದೆ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯಾಯಿತು. ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ಆಗ ಮಾತ್ರ ನೇಹಾ ಹಿರೇಮಠ ಸಾವಿಗೆ ನ್ಯಾಯ ಸಿಕ್ಕಂತಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರೇ ತಿಂಗಳಿನಲ್ಲಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅವರು ಈಗ ನಿದ್ರಾಮಯ್ಯ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೇಹ ಹಂತಕನಿಗೆ ನ್ಯಾಯಾಲಯ ಜಾಮೀನು ನೀಡಿದರೆ ನಾವೇ ಅವನನ್ನು ಕಲ್ಲಿನಿಂದ ಹೊಡೆದು ಕೊಂದು ಹಾಕುತ್ತೇವೆ. ನೇಹಾ ಹಿರೇಮಠ ಪ್ರೀತಿ ಮಾಡಿರಬಹುದು. ಆದರೆ, ಮದುವೆ ಆಗಲ್ಲ ಅಂತ ಹೇಳಿದ್ದಕ್ಕೆ ಕೊಂದು ಬಿಡುವುದಾ?, ಮೋಸ ಮಾಡಿ ಹಿಂದೂ ಯುವತಿಯರನ್ನು ಲವ್ ಜಿಹಾದ್ ಮಾಡುತ್ತಿದ್ದಾರೆ. ಅಬ್ದುಲ್ಲಾ, ಅಶೋಕ ಅಂತ ಹೇಳಿ ಪ್ರೀತಿ ಮಾಡುತ್ತಾರೆ. ಪ್ರೀತಿ ಮಾಡಿ ಬುರ್ಕಾ ಹಾಕಿಸಿ, ನಮಾಜ್ ಮಾಡಿಸಿ ಗೋಮಾಂಸ ತಿನ್ನಿಸುತ್ತಾರೆ. ಈ ದೇಶವನ್ನು ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್ಚು ಮಕ್ಕಳನ್ನು ಹೆರಿ
ದೇಶ ಉಳಿಯಬೇಕಾದರೆ ಹಿಂದೂ ಹೆಣ್ಣು ಮಕ್ಕಳು ಮೂರು, ನಾಲ್ಕು, ಡಜನ್ಗಟ್ಟಲೇ ಮಕ್ಕಳನ್ನು ಹೆರಬೇಕು. ಹಿಂದೂ ದಂಪತಿಯ ಮೂರನೇ ಮಗುವಿಗೆ ಅಗತ್ಯವಾದ ಶಿಕ್ಷಣ, ಆರೋಗ್ಯ ಜವಾಬ್ದಾರಿಯನ್ನು ಶ್ರಿರಾಮಸೇನೆ ವಹಿಸಿಕೊಳ್ಳಲಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ರಾಜ್ಯದಲ್ಲಿ 9 ಲಕ್ಷ ಎಕರೆ ಭೂಮಿ ವಕ್ಪ್ ಬೋರ್ಡ್ ಅಧೀನದಲ್ಲಿದೆ. ಇದು ಐದು ಪಾಕಿಸ್ತಾನ, ಹತ್ತು ಬಾಂಗ್ಲಾದೇಶಕ್ಕೆ ಸಮಾನವಾಗಿದೆ. ಜನಸಂಖ್ಯೆ ಹೆಚ್ಚಿಸಲು ಮುಸ್ಲಿಮರು ನಾಲ್ಕೈದು ಮದುವೆ ಮಾಡಿಕೊಳ್ಳುತ್ತಿದ್ದು, ಹಮ್ ಪಾಂಚ್, ಹಮಾರ ಪಚ್ಚಿಸ್ ಎನ್ನುತ್ತಿದ್ದಾರೆ. ಆದರೆ, ಹಿಂದೂ ದಂಪತಿಗಳು ಒಬ್ಬರು, ಇಬ್ಬರು ಸಾಕೆನ್ನುತ್ತಿದ್ದಾರೆ. ಇದರಿಂದ ಅವರ ಜನಸಂಖ್ಯೆ ಹೆಚ್ಚುತ್ತಿದೆ. ದೇಶ ಉಳಿಯಬೇಕಾದರೆ ಹಿಂದೂಗಳು ಡಜನ್ಗಟ್ಟಲೇ ಮಕ್ಕಳನ್ನು ಹೆರಬೇಕು. ಮೂರನೇ ಮಗುವಿನ ಶಿಕ್ಷಣ, ಆರೋಗ್ಯ ಜವಾಬ್ದಾರಿಯನ್ನು ನಮ್ಮ ಸಂಘಟನೆ ವಹಿಸಿಕೊಳ್ಳಲಿದೆ. ಮಕ್ಕಳನ್ನು ಸಾಕಲು ಸಾಧ್ಯವಾಗದಿದ್ದರೆ ನಾವು ಸಾಕುತ್ತೇವೆ ಎಂದು ಹೇಳಿದ್ದಾರೆ.