ಸಚಿವ ಜಮೀರ್‌ ಅವರನ್ನು ಮೆಕ್ಕಾದಲ್ಲಿರುವ ದೇವರೇ ನೋಡಿಕೊಳ್ಳಲಿ: ಎಚ್‌ಡಿಕೆ

Update: 2024-08-05 12:38 GMT

ನನ್ನ ಪ್ಯಾಟ್ ಒಳಗೆ ಖಾಕಿ ಚಡ್ಡಿ ಇದೆ ಎಂದು ಹೇಳಿರುವ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರ ಬಗ್ಗೆ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ", ನನ್ನ ಜತೆ ಇದ್ದಾಗ ಅವರ ತಾಯಿ ಹೆಸರಿನಲ್ಲಿ ಯಾವ ರೀತಿ ಪ್ರಮಾಣ ಮಾಡಿದ್ದಾರೆ ಎಂಬುದು ಗೊತ್ತಿದೆ. ಮಕ್ಕಾದಲ್ಲಿರುವ ದೇವರೇ ಅವರನ್ನು ನೋಡಿಕೊಳ್ಳಲಿ," ಎಂದು ಹೇಳಿದ್ದಾರೆ.

 ಮೈಸೂರು ಚಲೋ ಪಾದಯಾತ್ರೆಯ ಮೂರನೇ ದಿನ ಚನ್ನಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, "ಇವರು ನನ್ನ ಆಸ್ತಿ ಬಗ್ಗೆ ಮಾತನಾಡುತ್ತಾರೆ. ಆದರೆ ಇವರ ಆಸ್ತಿ ಎಷ್ಟು ಎನ್ನುವುದು ಗೊತ್ತಾ? ಎಂದು ಕೇಳಿದ ಅವರು, ಈ ವ್ಯಕ್ತಿಯ ಆಸ್ತಿ ಎರಡು ಸಾವಿರ ಪಟ್ಟು ಹೆಚ್ಚಾಗಿದೆ. ಕೇಂದ್ರ ತನಿಖಾ ಸಂಸ್ಥೆ ಅದಕ್ಕೆ ನೋಟಿಸ್ ಕೊಟ್ಟಿದೆ. ಅವರಿಗೆ ಕೊಟ್ಟಂತೆಯೇ ನನಗೆ ಯಾರೂ ನೋಟಿಸ್ ಕೊಟ್ಟಿಲ್ಲ ಎಂದು ಟಾಂಗ್ ಕೊಟ್ಟರು.

 ಮಜ್ಜಿಗೆ ಕಳ್ಳ

"ಒಬ್ಬರು ನಮ್ಮ ಪಕ್ಷದಲ್ಲಿಯೇ ಇದ್ದರು. ನಮ್ಮಿಂದಲೇ ಬೆಳೆದು ದೊಡ್ಡವರಾದರು. ಈಗ ನಮ್ಮ ಬಗ್ಗೆಯೇ ಲಘುವಾಗಿ ಮಾತನಾಡುತ್ತಾರೆ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರನ್ನು ಕುಮಾರಸ್ವಾಮಿ ಟೀಕಿಸಿದರು.  "

ಒಂದ್ ಕಾಲದಲ್ಲಿ ಏನು ಗತಿ ಇಲ್ಲದವನು, ನಮ್ಮ ಪಕ್ಷದಲ್ಲಿಯೇ ಇದ್ದು ಬಲಿತ ಮಜ್ಜಿಗೆ ಕಳ್ಳ ಚನ್ನಪಟ್ಟಣಕ್ಕೆ ಬಂದು ಭಾಷಣ ಬೇರೆ ಮಾಡುತ್ತಾರೆ," ಎಂದು ಎಂದು ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದರು. 

Tags:    

Similar News