Mock Drill : 54 ವರ್ಷ ಬಳಿಕ ಯಾಕೆ ಮಾಕ್ ಡ್ರಿಲ್ ನಡೆಸಲಾಗುತ್ತದೆ? ಮಾಜಿ ಸೇನಾಧಿಕಾರಿ ವಿವರಣೆ ಹೀಗಿದೆ...
ಕೇಂದ್ರ ಗೃಹ ಸಚಿವಾಲಯ ಆದೇಶದ ಪ್ರಕಾರ, ಬೆಂಗಳೂರು ನಗರ, ರಾಯಚೂರು ಮತ್ತು ಕಾರವಾರ ಸೇರಿದಂತೆ ದೇಶಾದ್ಯಂತ 244 ಸ್ಥಳಗಳಲ್ಲಿ ಬುಧವಾರ ( ಮೇ 7) ಅಣಕು ಕವಾಯತುಗಳನ್ನು ನಡೆಯಲಿದೆ.;
ಪಾಕಿಸ್ತಾನ ಗಡಿ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಅಡಗುತಾಣಗಳಿಗೆ ಬುಧವಾರ ಬೆಳಗಿನ ಜಾವ ಭಾರತ ಸೇನೆ ದಾಳಿ ಮಾಡಿದೆ. ಅದಕ್ಕೆ ಮುನ್ನಾ ದಿನವೇ ರಾಷ್ಟ್ರಾದ್ಯಂತ ಭಾರತ ಸರ್ಕಾರ ಸೇನೆ ಮತ್ತು ಇತರ ರಕ್ಷಣಾ ತಂಡಗಳು ಮಾಕ್ ಡ್ರಿಲ್ ಅಥವಾ ಅಣಕು ಕವಾಯತುಗಳನ್ನು ನಡೆಸಲು ಸೂಚಿಸಿದೆ.
ಕೇಂದ್ರ ಗೃಹ ಸಚಿವಾಲಯ ಆದೇಶದ ಪ್ರಕಾರ, ಬೆಂಗಳೂರು ನಗರ, ರಾಯಚೂರು ಮತ್ತು ಕಾರವಾರ ಸೇರಿದಂತೆ ದೇಶಾದ್ಯಂತ 244 ಸ್ಥಳಗಳಲ್ಲಿ ಬುಧವಾರ ( ಮೇ 7) ಅಣಕು ಕವಾಯತುಗಳನ್ನು ನಡೆಯಲಿದೆ.
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿ ಬಳಿಕ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನದ ವಿರುದ್ಧ ಭಾರತ ಯಾವ ಕ್ಷಣದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಹೀಗಾಗಿ ದೇಶದ ಎಲ್ಲಾ ರಾಜ್ಯಗಳಿಗೆ ಬುಧವಾರ (ಮೇ 07) ಮಾಕ್ ಡ್ರಿಲ್ ಮಾಡುವಂತೆ ಕೇಂದ್ರ ಸಂದೇಶ ರವಾನಿಸಿದೆ. ಹೀಗಾಗಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಅಣಕು ಕವಾಯತು ನಡೆಸಲಾಗುತ್ತಿದೆ.
ಈ ಬಗ್ಗೆ ದ ಫೆಡರಲ್ ಕರ್ನಾಟಕ ನಿವೃತ್ತ ಸೇನಾಧಿಕಾರಿ ಮೋಹನಚಿತ್ತಲೆ ಅವರ ಜತೆ ವಿಶೇಷ ಸಂದರ್ಶನ ನಡೆಸಿದೆ.
ಮಾಕ್ ಡ್ರಿಲ್ ಯುದ್ದದ ಪೂರಕವಾಗಿ ಮಾಡುವುದು ಹಾಗೂ ಮುಂಜಾಗ್ರತಾ ಕ್ರಮವಾಗಿ ಮಾಕ್ ಡ್ರಿಲ್ ಮಾಡಲಾಗುತ್ತದೆ. ಅದು ಒಂದು ದಿನಕ್ಕೆ ಸೀಮಿತವಾಗಿರುವುದಿಲ್ಲ ಹಾಗೂ ಒಂದು ವಾರ ನಡೆಯುತ್ತದೆ ಎಂದು ಅವರು ವಿವರಿಸಿದ್ದಾರೆ.
ಏರ್ ಸ್ಟ್ರೈಕ್ ನಿಂದ ಅನಾಹುತ ಆದರೆ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಮಾಕ್ ಡ್ರಿಲ್ ಮಾಡಲಾಗುತ್ತದೆ ಹಾಗೂ
ಜನರಿಗೆ ಅರಿವು ಮೂಡಿಸುವುದು ಇದರ ಉದ್ದೇಶ. ಏರ್ ಸ್ಟ್ರಕ್ ವೇಳೆ ಯಾವ ರೀತಿ ಜನರನ್ನು ರಕ್ಷಿಸಬೇಕು ಎಂದು ತಾಲೀಮು ನಡೆಸಲಾಗುತ್ತದೆ ಹಾಗೂ ಮಾಕ್ ಡ್ರಿಲ್ ವೇಳೆ ಲೋಪಗಳಾದರೆ ಅದನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗಳ್ಳಲಾಗುತ್ತದೆ ಎಂದವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಾಯುಸೇನಾ ಬೇಸ್ (ಏರ್ಬೇಸ್) ಇರುವ ಕಾರಣ ಈ ಭಾಗದಲ್ಲಿ ಮಾಕ್ ಡ್ರಿಲ್ ಮಾಡಲಾಗುತ್ತದೆ . 6 ಹಂತದ ಅಧಿಕಾರಿಗಳು ಸಿಬ್ಬಂದಿ ಈ ಮಾಕ್ ಡ್ರಿಲ್ ನಲ್ಲಿ ಭಾಗಿಯಾಗುತ್ತಾರೆ ಎಂದವರು ವಿಶ್ಲೇಷಿಸಿದ್ದಾರೆ.
ಸಂಪೂರ್ಣ ವಿವರಕ್ಕಾಗಿ ಈ ವಿಡಿಯೋ ಕ್ಲಿಕ್ ಮಾಡಿ.