I came to Delhi to do politics: Why did DKshi say this after meeting Rahul?
x

ಡಿಸಿಎಂ ಡಿ.ಕೆ. ಶಿವಕುಮಾರ್‌

"ದೆಹಲಿಗೆ ಬಂದಿರೋದು ರಾಜಕಾರಣ ಮಾಡಲಿಕ್ಕೆ": ಡಿಕೆಶಿ ಹೀಗಂದಿದ್ದೇಕೆ?

ಹೈಕಮಾಂಡ್ ಭೇಟಿ ಕುರಿತು ಮಾತನಾಡಿದ ಡಿಕೆಶಿ, "ನಾನು ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದೇನೆ. ಆದರೆ ಒಳಗೆ ಏನು ಚರ್ಚೆಯಾಗಿದೆ ಎಂಬುದನ್ನು ಬಹಿರಂಗವಾಗಿ ಹೇಳುವುದಿಲ್ಲ" ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.


Click the Play button to hear this message in audio format

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿರುವ ನಿರ್ಣಾಯಕ ಹಂತದಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ನೀಡಿರುವ ಹೇಳಿಕೆ ತೀವ್ರ ಕುತೂಹಲ ಕೆರಳಿಸಿದೆ. ರಾಹುಲ್ ಗಾಂಧಿ ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, "ನಾನು ದೆಹಲಿಗೆ ಬಂದಿರೋದು ರಾಜಕಾರಣ ಮಾಡಲಿಕ್ಕೆ, ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ," ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ದೆಹಲಿಯ ಜನಪಥ್ ರಸ್ತೆಯಲ್ಲಿರುವ ನಿವಾಸದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ ಬಳಿಕ ಹೊರಬಂದ ಡಿ.ಕೆ. ಶಿವಕುಮಾರ್, ಮಾಧ್ಯಮಗಳ ಪ್ರಶ್ನೆಗೆ ನೇರ ಉತ್ತರ ನೀಡಲು ನಿರಾಕರಿಸಿದರು. ಆದರೆ, ಅವರ ಒಂದೊಂದು ಮಾತುಗಳು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಕನ್ನಡಿ ಹಿಡಿದಂತಿದ್ದವು.

"ಚರ್ಚೆಯ ವಿವರ ಹೇಳಲ್ಲ"

ಹೈಕಮಾಂಡ್ ಭೇಟಿ ಕುರಿತು ಮಾತನಾಡಿದ ಡಿಕೆಶಿ, "ನಾನು ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದೇನೆ. ಆದರೆ ಒಳಗೆ ಏನು ಚರ್ಚೆಯಾಗಿದೆ ಎಂಬುದನ್ನು ಬಹಿರಂಗವಾಗಿ ಹೇಳುವುದಿಲ್ಲ. ಅದನ್ನು ಹೇಳುವ ಅವಶ್ಯಕತೆಯೂ ಇಲ್ಲ," ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು. ಈ ಮೂಲಕ ನಾಯಕತ್ವದ ವಿಚಾರದಲ್ಲಿ ನಡೆದ ಮಾತುಕತೆಯನ್ನು ಗೌಪ್ಯವಾಗಿಡುವ ತಂತ್ರಕ್ಕೆ ಅವರು ಮೊರೆಹೋದಂತಿದೆ.

ರಾಜಕೀಯ ಮಾಡಲು ಬಂದಿದ್ದೇನೆ

ದೆಹಲಿ ಭೇಟಿಯ ಉದ್ದೇಶದ ಬಗ್ಗೆ ಪತ್ರಕರ್ತರು ಕೇಳಿದಾಗ, "ನಾನ್ಯಾಕೆ ದೆಹಲಿಗೆ ಬರಬಾರದು? ನಾನು ದೆಹಲಿಗೆ ಬಂದಿರುವುದೇ ರಾಜಕಾರಣ ಮಾಡಲಿಕ್ಕೆ. ರಾಜಕಾರಣ ಮಾಡಿಯೇ ಮಾಡುತ್ತೇನೆ," ಎಂದು ವಿಶ್ವಾಸದಿಂದ ಹೇಳಿದರು. ಅಲ್ಲದೆ, ಸದ್ಯದ ಗೊಂದಲಗಳಿಗೆ ಮತ್ತು ನಾಯಕತ್ವದ ಪ್ರಶ್ನೆಗೆ "ಕಾಲವೇ ಉತ್ತರ ನೀಡಲಿದೆ" ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಮಹತ್ವದ ಬದಲಾವಣೆ ಆಗುವ ಸೂಚನೆ ನೀಡಿದರು.

Read More
Next Story