Congress celebrates Bengaluru as GCC capital of the world as governments achievement!
x
ಸಿಲಿಕಾನ್‌ ಸಿಟಿ ಬೆಂಗಳೂರು

ವಿಶ್ವದ ಜಿಸಿಸಿ ರಾಜಧಾನಿ' ಬೆಂಗಳೂರು: ಸರ್ಕಾರದ ಸಾಧನೆ ಎಂದು ಕಾಂಗ್ರೆಸ್ ಸಂಭ್ರಮ!

ಈ ಸಾಧನೆಯ ಬಗ್ಗೆ ಸರ್ಕಾರ ಸಂಭ್ರಮಿಸುತ್ತಿದ್ದರೆ, ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಷ್ಟೊಂದು ಕಂಪನಿಗಳು ಬಂದರೂ, ಸ್ಥಳೀಯರಿಗೆ ಸಿಗುತ್ತಿರುವ ಉದ್ಯೋಗದ ಪಾಲು ಕೇವಲ ಶೇ. 20ರಷ್ಟು ಮಾತ್ರ ಎಂಬ ಕಳವಳ ವ್ಯಕ್ತವಾಗಿದೆ.


Click the Play button to hear this message in audio format

ಜಾಗತಿಕ ಸಾಮರ್ಥ್ಯ ಕೇಂದ್ರಗಳ ನೆಚ್ಚಿನ ತಾಣವಾಗಿ ಬೆಂಗಳೂರು ಹೊರಹೊಮ್ಮಿದ್ದು, ವಿಶ್ವದ 'ಜಿಸಿಸಿ ರಾಜಧಾನಿ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಲ್ಲಿ 875ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಸ್ಥಾಪಿಸಿರುವುದು ತಮ್ಮ ಸರ್ಕಾರದ ಆಡಳಿತದ ಪ್ರಮುಖ ಸಾಧನೆ ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷ ಸಂಭ್ರಮ ವ್ಯಕ್ತಪಡಿಸಿದೆ.

ಸರ್ಕಾರದ ಹೇಳಿಕೆ ಏನು?

2023ರಿಂದ ಈಚೆಗೆ ರಾಜ್ಯದಲ್ಲಿ ತಂತ್ರಜ್ಞಾನ ಮತ್ತು ಕೈಗಾರಿಕಾ ವಲಯಕ್ಕೆ ನೀಡುತ್ತಿರುವ ಉತ್ತೇಜನದ ಪರಿಣಾಮವಾಗಿ, ಜೆಪಿ ಮೋರ್ಗನ್, ಏರ್‌ಬಸ್‌ನಂತಹ ಜಾಗತಿಕ ದಿಗ್ಗಜ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಕಚೇರಿಗಳನ್ನು ತೆರೆದಿವೆ. ಸುಮಾರು 875ಕ್ಕೂ ಹೆಚ್ಚು ಜಿಸಿಸಿಗಳು ಬೆಂಗಳೂರಿನಲ್ಲಿವೆ ಎಂದು ತೋರಿಸುವ ಇನ್ಫೋಗ್ರಾಫಿಕ್ ಅನ್ನು ಪಕ್ಷದ ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದು ರಾಜ್ಯದ ಬಲಿಷ್ಠ ಆರ್ಥಿಕ ಮತ್ತು ತಾಂತ್ರಿಕ ಬೆಳವಣಿಗೆಯ ಸಂಕೇತ ಎಂದು ಸರ್ಕಾರ ಬಿಂಬಿಸಿದೆ.

ಅಂಕಿಅಂಶಗಳ ಗೊಂದಲ

2026ರ ಇತ್ತೀಚಿನ ವರದಿಗಳ ಪ್ರಕಾರ, ಬೆಂಗಳೂರು ಸುಮಾರು 870 ರಿಂದ 875 ಜಿಸಿಸಿಗಳಿಗೆ ನೆಲೆಯಾಗಿದೆ ಎಂಬುದು ನಿಜ. ಇದು ಭಾರತದಲ್ಲಿರುವ ಒಟ್ಟು ಸುಮಾರು 1,800 ಜಿಸಿಸಿಗಳಲ್ಲಿ ಶೇ. 35 ರಿಂದ 50ರಷ್ಟು ಪಾಲನ್ನು ಹೊಂದಿದೆ. ಆದರೆ, ಕಾಂಗ್ರೆಸ್ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ 19 ಲಕ್ಷ ಉದ್ಯೋಗಿಗಳು ಮತ್ತು 64 ಶತಕೋಟಿ ಡಾಲರ್​ ಆದಾಯದ ಅಂಕಿಅಂಶಗಳು ಇಡೀ ದೇಶದ ಜಿಸಿಸಿ ಪರಿಸರ ವ್ಯವಸ್ಥೆಗೆ ಸಂಬಂಧಿಸಿವೆ ಹೊರತು, ಕೇವಲ ಕರ್ನಾಟಕಕ್ಕೆ ಸೀಮಿತವಾದುದಲ್ಲ ಎಂಬ ಚರ್ಚೆಯೂ ನಡೆದಿದೆ.

ಜನರ ಪ್ರಶ್ನೆ: ಅಭಿವೃದ್ಧಿ ಯಾರಿಗೆ?

ಈ ಸಾಧನೆಯ ಬಗ್ಗೆ ಸರ್ಕಾರ ಸಂಭ್ರಮಿಸುತ್ತಿದ್ದರೆ, ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಷ್ಟೊಂದು ಕಂಪನಿಗಳು ಬಂದರೂ, ಕರ್ನಾಟಕದ ಸ್ಥಳೀಯರಿಗೆ (ಕನ್ನಡಿಗರಿಗೆ) ಸಿಗುತ್ತಿರುವ ಉದ್ಯೋಗದ ಪಾಲು ಕೇವಲ ಶೇ. 20ರಷ್ಟು ಮಾತ್ರ ಎಂಬ ಕಳವಳ ವ್ಯಕ್ತವಾಗಿದೆ. ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಬೇಕೆಂಬ ಕೂಗು ಬಲವಾಗಿದೆ.

ನಗರದ ತ್ವರಿತ ಬೆಳವಣಿಗೆಯಿಂದಾಗಿ ಟ್ರಾಫಿಕ್ ಸಮಸ್ಯೆ, ಮೆಟ್ರೋ ದರ ಏರಿಕೆ ಮತ್ತು ಮೂಲಸೌಕರ್ಯದ ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ಅಭಿವೃದ್ಧಿಯ ಲಾಭ ಸಾಮಾನ್ಯ ಜನರಿಗೆ ಸಿಗುತ್ತಿದೆಯೇ ಅಥವಾ ಕೇವಲ ಐಟಿ ವಲಯಕ್ಕೆ ಸೀಮಿತವಾಗಿದೆಯೇ ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಎತ್ತಿದ್ದಾರೆ.

Read More
Next Story