
Noida |ಕಾರ್ಖಾನೆಯ ಗೇಟ್ ಜಖಂ… ಪೊಲೀಸರ ಮೇಲೆ ಕಲ್ಲು ತೂರಾಟ; ನೋಯ್ಡಾ ಹಿಂಸಾಚಾರದ ಭೀಕರ ದೃಶ್ಯ ವೈರಲ್
ವೇತನ ಹೆಚ್ಚಳಕ್ಕೆ ಆಗ್ರಹಿಸಿ ನೋಯ್ಡಾದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದೆ. ಪ್ರತಿಭಟನಾಕಾರರು ಫ್ಯಾಕ್ಟರಿ ಗೇಟ್ ಮುರಿದು ಒಳನುಗ್ಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ಕೈಗಾರಿಕಾ ಹಬ್ ಆಗಿರುವ ನೋಯ್ಡಾದಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಕಾರ್ಮಿಕರನ್ನು ಶಾಂತಗೊಳಿಸಲು ಯೋಗಿ ಆದಿತ್ಯನಾಥ್ ಸರ್ಕಾರವು ಕನಿಷ್ಠ ವೇತನದಲ್ಲಿ ಶೇ. 21 ರಷ್ಟು ಮಧ್ಯಂತರ ಹೆಚ್ಚಳ ಘೋಷಿಸಿದೆ. ಇದಾದ ನಂತರವೂ ಹಿಂಸಾಚಾರ ಮುಂದುವರಿದಿದ್ದು, ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಹೊರಬಂತು ಭೀಕರ ಹಿಂಸಾಚಾರದ ಸಿಸಿಟಿವಿ ದೃಶ್ಯ
ಸೋಮವಾರ ನಡೆದ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಫ್ಯಾಕ್ಟರಿಗಳಿಗೆ ನುಗ್ಗುತ್ತಿರುವ ಹೊಸ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಸೆಕ್ಟರ್ 63ರ ಸಮೀಪವಿರುವ ಕಾರ್ಖಾನೆಯೊಂದರ ಗೇಟ್ ಮುರಿದು ನೂರಾರು ಜನರು ಒಳನುಗ್ಗಿ ದಾಂಧಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಫ್ಯಾಕ್ಟರಿಯೊಳಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಧ್ವಂಸಗೊಳಿಸಿದ್ದಾರೆ.
300ಕ್ಕೂ ಹೆಚ್ಚು ಮಂದಿ ಬಂಧನ
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 300ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಗೌತಮ್ ಬುದ್ಧ ನಗರ ಪೊಲೀಸ್ ಕಮಿಷನರ್ ಲಕ್ಷ್ಮಿ ಸಿಂಗ್ ಮಾತನಾಡಿ, "ಕಾರ್ಮಿಕರು ಶಾಂತಿಯುತವಾಗಿ ಚದುರಿದ ನಂತರ, ನೆರೆಯ ಜಿಲ್ಲೆಗಳಿಂದ ಬಂದ ಹೊರಗಿನ ಗುಂಪೊಂದು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದೆ. ಕಿಡಿಗೇಡಿಗಳನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದಾರೆ.
ವಾಟ್ಸಾಪ್ ಮೂಲಕ ಸಂಚು?
ಪೊಲೀಸ್ ತನಿಖೆಯ ಪ್ರಕಾರ, ಈ ಪ್ರತಿಭಟನೆಯನ್ನು ವಾಟ್ಸಾಪ್ ಗ್ರೂಪ್ಗಳ ಮೂಲಕ ಯೋಜಿಸಲಾಗಿತ್ತು. 'ವರ್ಕರ್ಸ್ ಮೂವ್ಮೆಂಟ್' ಎಂಬ ಹೆಸರಿನ ಗ್ರೂಪ್ಗಳಿಗೆ ಕ್ಯೂಆರ್ ಕೋಡ್ (QR Code) ಮೂಲಕ ಕಾರ್ಮಿಕರನ್ನು ಸೇರಿಸಲಾಗಿತ್ತು. ಭಾನುವಾರ ರಾತ್ರಿ ಈ ಗ್ರೂಪ್ಗಳಲ್ಲಿ ಪ್ರಚೋದನಾಕಾರಿ ಸಂದೇಶಗಳನ್ನು ರವಾನಿಸುವ ಮೂಲಕ ಹಿಂಸಾಚಾರಕ್ಕೆ ಸಂಚು ರೂಪಿಸಲಾಗಿತ್ತು ಎಂಬುದು ತಿಳಿದುಬಂದಿದೆ.
नोएडा में मजदूरों का गुस्सा—कम वेतन पर उग्र प्रदर्शन, कंपनी में तोड़फोड़....
— PRIYA RANA (@priyarana3101) April 13, 2026
Noida में मजदूरों ने वेतन बढ़ाने की मांग को लेकर प्रदर्शन तेज कर दिया। आरोप है कि 12 घंटे काम के बदले सिर्फ 12–15 हजार वेतन मिल रहा है। मजदूरों ने प्राइवेट कंपनियों की मनमानी पर रोक की मांग की है।#Noida… pic.twitter.com/CJiqo9LT1w
ಪಾಕಿಸ್ತಾನದ ನಂಟಿನ ಬಗ್ಗೆ ತನಿಖೆ
ರಾಜ್ಯ ಕಾರ್ಮಿಕ ಸಚಿವ ಅನಿಲ್ ರಾಜ್ಭರ್ ಅವರು ಈ ಹಿಂಸಾಚಾರದ ಹಿಂದೆ ಅಂತರಾಷ್ಟ್ರೀಯ ಪಿತೂರಿ ಇರುವ ಶಂಕೆ ವ್ಯಕ್ತಪಡಿಸಿದ್ದಾರೆ. "ಇತ್ತೀಚೆಗಷ್ಟೇ ಮೀರತ್ ಮತ್ತು ನೋಯ್ಡಾದಲ್ಲಿ ಪಾಕಿಸ್ತಾನದ ಹ್ಯಾಂಡ್ಲರ್ಗಳೊಂದಿಗೆ ಸಂಪರ್ಕ ಹೊಂದಿದ್ದ ನಾಲ್ವರು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಹೀಗಾಗಿ ರಾಜ್ಯದ ಶಾಂತಿ ಕದಡಲು ನಡೆದ ಈ ಕೃತ್ಯದಲ್ಲಿ ಪಾಕಿಸ್ತಾನದ ನಂಟು ಇರುವ ಸಾಧ್ಯತೆಯನ್ನು ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಶೀಲಿಸುತ್ತಿವೆ," ಎಂದು ಅವರು ಹೇಳಿದ್ದಾರೆ.
ವೇತನ ಹೆಚ್ಚಳದ ವಿವರಗಳು
ಹರಿಯಾಣ ಸರ್ಕಾರವು ಕನಿಷ್ಠ ವೇತನವನ್ನು ಶೇ. 35 ರಷ್ಟು ಹೆಚ್ಚಿಸಿದ ಬೆನ್ನಲ್ಲೇ ನೋಯ್ಡಾದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಉತ್ತರ ಪ್ರದೇಶ ಸರ್ಕಾರವು ಕಾರ್ಮಿಕರ ವೇತನದಲ್ಲಿ ಮಹತ್ವದ ಏರಿಕೆ ಘೋಷಿಸಿದೆ. ಈ ಹೊಸ ಆದೇಶದನ್ವಯ, ನೋಯ್ಡಾ ಮತ್ತು ಘಾಜಿಯಾಬಾದ್ನ ಅಕುಶಲ ಕಾರ್ಮಿಕರ ವೇತನ 11,313 ರೂ.ಗಳಿಂದ 13,690 ರೂ.ಗಳಿಗೆ (ಶೇ. 21 ರಷ್ಟು ಹೆಚ್ಚಳ) ಏರಿಕೆಯಾಗಿದ್ದರೆ, ಅರೆ ಕುಶಲ ಕಾರ್ಮಿಕರ ವೇತನ 12,445 ರೂ. ರಿಂದ 15,059 ರೂ.ಗಳಿಗೆ ಹಾಗೂ ಕುಶಲ ಕಾರ್ಮಿಕರ ವೇತನ 13,940 ರೂ.ರಿಂದ 16,668 ರೂ.ಗಳಿಗೆ ಏರಿಕೆ ಕಂಡಿದೆ. ಮುನ್ಸಿಪಾಲಿಟಿ ವ್ಯಾಪ್ತಿಯ ಇತರ ನಗರಗಳಲ್ಲಿ ಶೇ. 15 ರಷ್ಟು ಹಾಗೂ ಉಳಿದ ಭಾಗಗಳಲ್ಲಿ ಶೇ. 9 ರಷ್ಟು ವೇತನ ಹೆಚ್ಚಳವನ್ನು ಜಾರಿಗೆ ತರಲಾಗಿದ್ದು, ಈ ಮೂಲಕ ಪ್ರತಿಭಟನಾ ನಿರತ ಕಾರ್ಮಿಕರನ್ನು ಸಮಾಧಾನಪಡಿಸಲು ಸರ್ಕಾರ ಮುಂದಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿರುವ ಇತರ ನಗರಗಳ ಕಾರ್ಮಿಕರಿಗೆ ಶೇ. 15 ರಷ್ಟು ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಶೇ. 9 ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಈ ಹೆಚ್ಚಳವು ಏಪ್ರಿಲ್ 1 ರಿಂದಲೇ ಅನ್ವಯವಾಗಲಿದೆ. ಆದರೆ, ಕನಿಷ್ಠ ವೇತನ 20,000 ರೂ.ಗಳಿಗೆ ಏರಿಕೆಯಾಗಿದೆ ಎಂಬ ವದಂತಿಗಳನ್ನು ಸರ್ಕಾರ ತಳ್ಳಿಹಾಕಿದೆ.
Protests demanding wage hikes and fixed work hours turned violent in India's industrial hub of Noida after factory workers torched vehicles and pelted stones, leading to a showdown with police. Read more: https://t.co/1TKaGWzYNO pic.twitter.com/EsrtEaUAAc
— Reuters (@Reuters) April 13, 2026
ಸರ್ಕಾರದ ಮನವಿ
ಯಾವುದೇ ದಾರಿತಪ್ಪಿಸುವ ಮಾಹಿತಿ ಅಥವಾ ಪ್ರಚೋದನೆಗೆ ಬಲಿಯಾಗಬೇಡಿ ಎಂದು ಸಚಿವರು ಕಾರ್ಮಿಕರಲ್ಲಿ ಮನವಿ ಮಾಡಿದ್ದಾರೆ. ಅರಾಜಕತೆ ಸೃಷ್ಟಿಸುವುದು ಯಾವುದಕ್ಕೂ ಪರಿಹಾರವಲ್ಲ, ಸರ್ಕಾರವು ಕಾರ್ಮಿಕರ ಎಲ್ಲಾ ಸಮಸ್ಯೆಗಳನ್ನು ಆಲಿಸಲು ಸಿದ್ಧವಿದೆ ಎಂದು ಅವರು ಭರವಸೆ ನೀಡಿದ್ದಾರೆ.

