
ವಿಜಯದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ವಿವಾಹ: ಅತಿಥಿಗಳಿಗೆ ನೋ- ಫೋನ್ ರೂಲ್ಸ್
ಮದುವೆಯ ಯಾವುದೇ ಫೋಟೋ ಅಥವಾ ವಿಡಿಯೋ ಲೀಕ್ ಆಗಬಾರದು ಎಂಬ ಉದ್ದೇಶದಿಂದ ಸಮಾರಂಭದಲ್ಲಿ 'ನೋ-ಫೋನ್ ಪಾಲಿಸಿ' ಜಾರಿಗೊಳಿಸಲಾಗಿದೆ.
ಭಾರತೀಯ ಚಿತ್ರರಂಗದ ಮೋಸ್ಟ್ ಲವ್ಲಿ ಕಪಲ್ ಎಂದೇ ಖ್ಯಾತರಾಗಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕೊನೆಗೂ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ, ಈ ಜೋಡಿ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಸಾಂಪ್ರದಾಯಿಕವಾಗಿ ಸಪ್ತಪದಿ ತುಳಿಯಲಿದ್ದಾರೆ. ಆದರೆ, ಈ ವಿವಾಹವು ಬಾಲಿವುಡ್ನ ಅದ್ಧೂರಿ ಸಮಾರಂಭಗಳಿಗಿಂತ ಭಿನ್ನವಾಗಿ, ಅತ್ಯಂತ ಖಾಸಗಿ ಹಾಗೂ ಸರಳವಾಗಿ ನಡೆಯಲಿದೆ ಎಂಬುದು ವಿಶೇಷ.
ಮೊಬೈಲ್ ಫೋನ್ ಮತ್ತು ಸೆಲೆಬ್ರಿಟಿಗಳಿಗೆ ಪ್ರವೇಶವಿಲ್ಲ
ಮದುವೆಯ ಗೌಪ್ಯತೆಯನ್ನು ಕಾಪಾಡಲು ವಿಜಯ್ ಮತ್ತು ರಶ್ಮಿಕಾ ದಂಪತಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಮದುವೆಯ ಯಾವುದೇ ಫೋಟೋ ಅಥವಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗದಂತೆ ತಡೆಯಲು ಸಮಾರಂಭದಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೆ, ಮದುವೆಯ ಚಿತ್ರೀಕರಣ ಮಾಡುವ ತಂಡದವರ ಜೊತೆಗೂ ಕೂಡ ಗೌಪ್ಯತಾ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ.
ಈ ಖಾಸಗಿ ಸಮಾರಂಭಕ್ಕೆ ಯಾವುದೇ ಚಿತ್ರರಂಗದ ಸಹೋದ್ಯೋಗಿಗಳನ್ನು ಅಥವಾ ಸೆಲೆಬ್ರಿಟಿಗಳನ್ನು ಆಹ್ವಾನಿಸಿಲ್ಲ. ಕೇವಲ ಕುಟುಂಬದವರು ಮತ್ತು ಅತ್ಯಂತ ಆಪ್ತ ಸ್ನೇಹಿತರಿಗೆ ಮಾತ್ರ ಈ ಸಂಭ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಂಪ್ರದಾಯಕ್ಕೆ ಆದ್ಯತೆ
ಮದುವೆಗೆ ಮುಂಚಿತವಾಗಿ ನಡೆಯುವ ಸಂಪ್ರದಾಯಗಳನ್ನು ಈಗಾಗಲೇ ಎರಡು ಕುಟುಂಬಗಳು ಪೂರೈಸಿವೆ. ರಶ್ಮಿಕಾ ಅವರ ಪೋಷಕರು ತಮ್ಮ ನಿವಾಸದಲ್ಲಿ ಒಂದು ಕಾರ್ಯಕ್ರಮ ಆಯೋಜಿಸಿದ್ದರೆ, ವಿಜಯ್ ಕುಟುಂಬದವರು ತಮ್ಮ ಸಂಪ್ರದಾಯದಂತೆ ಮತ್ತೊಂದು ವಿಧಿವಿಧಾನವನ್ನು ನೆರವೇರಿಸಿದ್ದಾರೆ. ಈ ಜೋಡಿಯ ಸರಳತೆಗೆ ಮತ್ತೊಂದು ಸಾಕ್ಷಿಯೆಂದರೆ, ತಮ್ಮ ಸ್ನೇಹಿತರಿಗೆ ಅವರು ಬರೆದಿರುವ ಹಸ್ತಪ್ರತಿ ಪತ್ರಗಳು. ಈ ಪತ್ರಗಳಲ್ಲಿ ಅವರು ಯಾವುದೇ ಉಡುಗೊರೆಗಳನ್ನು ಬಯಸದೆ, ಕೇವಲ ಹಾರೈಕೆ ಮತ್ತು ಆಶೀರ್ವಾದವನ್ನು ಮಾತ್ರ ಕೇಳಿಕೊಂಡಿದ್ದಾರೆ.
ಹೈದರಾಬಾದ್ನಲ್ಲಿ ರಿಸೆಪ್ಷನ್
ವೃತ್ತಿಜೀವನದಲ್ಲಿ ಅತ್ಯಂತ ಬ್ಯುಸಿಯಾಗಿರುವ ಈ ಇಬ್ಬರೂ ತಾರೆಗಳು ಮದುವೆಯ ನಂತರ ತಮ್ಮ ವೈಯಕ್ತಿಕ ಜೀವನಕ್ಕಾಗಿ ಒಂದು ತಿಂಗಳ ಕಾಲ ರಜೆಯನ್ನು ಘೋಷಿಸಿದ್ದಾರೆ. ಉದಯಪುರದಲ್ಲಿ ಖಾಸಗಿಯಾಗಿ ಮದುವೆ ನಡೆದರೂ ಸಹ, ಚಿತ್ರರಂಗದ ಗಣ್ಯರಿಗಾಗಿ ಮಾರ್ಚ್ 4 ರಂದು ಹೈದರಾಬಾದ್ನ ತಾಜ್ ಕೃಷ್ಣಾ ಹೋಟೆಲ್ನಲ್ಲಿ ಅದ್ಧೂರಿ ಔತಣಕೂಟ ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಚಿತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದ ಈ ಜೋಡಿ, ಈಗ ನಿಜ ಜೀವನದ ಪಯಣ ಆರಂಭಿಸುತ್ತಿರುವುದು ಮುಂದಾಗಿದ್ದಾರೆ ಎನ್ನಲಾಗಿದೆ.

