Bangalore Stampede | ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ; ವಿಚಾರಣೆಗೆ ಹಾಜರಾದ ಮಾಜಿ ಪೊಲೀಸ್ ಆಯುಕ್ತ ಬಿ.ದಯಾನಂದ್
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದಾದ ಬಳಿಕ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.;
ಬಿ ದಯಾನಂದ್
ಆರ್ಸಿಬಿ ತಂಡದ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ್ ಅವರು ಗುರುವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದ ಮ್ಯಾಜಿಸ್ಟ್ರೇಟ್ ತನಿಖಾ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾದರು.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ವೈಫಲ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಜಿ.ಜಗದೀಶ್ ಸಾಲು ಸಾಲು ಪ್ರಶ್ನೆ
ವಿಜಯೋತ್ಸವದ ವೇಳೆ ಸೂಕ್ತ ಬಂದೋಬಸ್ತ್ ಕಲ್ಪಿಸಲು ವಿಫಲವಾಗಿದ್ದ ಕುರಿತು ದಯಾನಂದ್ ಅವರನ್ನು ಜಿಲ್ಲಾಧಿಕಾರಿ ಜಗದೀಶ್ ಅವರು ಸ್ಪಷ್ಟನೆ ಕೇಳಿದ್ದಾರೆ.
* ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ನಿಮಗೆ ಮುಂಚಿತವಾಗಿ ಮಾಹಿತಿ ನೀಡಿದ್ದರಾ?
* ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆ ಇತ್ತೇ?
* ಒಂದು ವೇಳೆ ನಿರೀಕ್ಷೆ ಇದ್ದರೆ ಯಾಕೆ ನೀವು ಸರಿಯಾದ ರೀತಿ ಬಂದೋಬಸ್ ಮಾಡಲಿಲ್ಲ?
* ಆರ್ಸಿಬಿ ಅಥವಾ ಡಿಎನ್ಎ ತಂಡಗಳಿಗೆ ನೀವು ಸೂಚನೆ ಅಥವಾ ನೋಟಿಸ್ ನೀಡಿದ್ದೀರಾ?
* ಕಾಲ್ತುಳಿತದಲ್ಲಿ ಸಾವು ಸಂಭವಿಸಿದ್ದು ಯಾವಾಗ ತಿಳಿಯಿತು?
* ಮಧ್ಯಾಹ್ನ 3 ಕ್ಕೆ ಸಂಭ್ರಮಾಚರಣೆ ಇರುವುದು ಗೊತ್ತಿದ್ದರೂ ಯಾಕೆ ಬಂದೋಬಸ್ತ್ ತಡವಾಯಿತು?
* ವಿಧಾನಸೌಧ ಡಿಸಿಪಿ ಕರಿ ಬಸವನಗೌಡ ಪತ್ರದ ಬಗ್ಗೆಯೂ ಮಾಹಿತಿ ಇತ್ತೇ?
* ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಡಿಎನ್ಎ ಅಧಿಕಾರಿಗಳಿಗೆ ನೀವೇನಾದರೂ ಇವೆಂಟ್ ಮಾಡಲು ತಿಳಿಸಿದ್ದಿರಾ?
ಮಾಧ್ಯಮಕ್ಕೆ ಪ್ರತಿಕ್ರಿಯಿಸದೇ ತೆರಳಿದ ದಯಾನಂದ
ಕಾಲ್ತುಳಿತ ಪ್ರಕರಣದ ತನಿಖಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಉತ್ತರ ನೀಡಿದ ಬಿ. ದಯಾನಂದ್ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ವಾಪಸ್ ತೆರಳಿದರು.