ಆಪರೇಷನ್ ಸಿಂಧೂ : ಯುದ್ಧಪೀಡಿತ ಪ್ರದೇಶದಿಂದ 282 ಭಾರತೀಯರ ಭಾರತಕ್ಕೆ ವಾಪಸ್​; ಒಟ್ಟು 2,858 ಮಂದಿಗೆ ಸ್ವದೇಶಕ್ಕೆ

ಈ ವಾಪಸಾತಿಯೊಂದಿಗೆ, ಆಪರೇಷನ್ ಸಿಂಧೂ ಮೂಲಕ ಈವರೆಗೆ ಒಟ್ಟು 2,858 ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಕರೆತರಲಾಗಿದೆ ಎಂದು ಅವರು ತಿಳಿಸಿದ್ದಾರೆ.;

Update: 2025-06-25 04:22 GMT

ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತವು ತನ್ನ ನಾಗರಿಕರನ್ನು ಸುರಕ್ಷಿತವಾಗಿ ಕರೆತರಲು "ಆಪರೇಷನ್ ಸಿಂಧೂ" ಕಾರ್ಯಾಚರಣೆಯನ್ನು ಮುಂದುವರಿಸಿದೆ. ಈ ಕಾರ್ಯಾಚರಣೆಯ ಭಾಗವಾಗಿ ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ ವಿಶೇಷ ವಿಮಾನವೊಂದು ಮಶ್‌ಹದ್‌ನಿಂದ ನವದೆಹಲಿಗೆ ಬಂದಿಳಿದಿದ್ದು, 282 ಭಾರತೀಯ ಪ್ರಜೆಗಳು ಇರಾನ್‌ನಿಂದ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ.

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಮಾಹಿತಿ ನೀಡಿದ್ದಾರೆ. ಈ ವಾಪಸಾತಿಯೊಂದಿಗೆ, ಆಪರೇಷನ್ ಸಿಂಧೂ ಮೂಲಕ ಈವರೆಗೆ ಒಟ್ಟು 2,858 ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಕರೆತರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಏತನ್ಮಧ್ಯೆ, ಇಸ್ರೇಲ್ ಮತ್ತು ಇರಾನ್ ನಡುವೆ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಮೂಲಗಳು ತಿಳಿಸಿವೆ. ಇದು ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಭಾರತವು ತನ್ನ ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಿದ್ದು, ಆಪರೇಷನ್ ಸಿಂಧೂ ಮೂಲಕ ಕಷ್ಟದ ಸಂದರ್ಭಗಳಲ್ಲಿ ವಿದೇಶದಲ್ಲಿರುವ ಭಾರತೀಯರಿಗೆ ನೆರವು ನೀಡುತ್ತಿದೆ. 

Tags:    

Similar News