ಸಿಎಂ ಪರಿಹಾರ ನಿಧಿಗೆ ದೇಣಿಗೆ ಕೇಳಿದ ಪಿಣರಾಯಿ... ... Wayanad Landslide LIVE | ಇದು ರಾಷ್ಟ್ರೀಯ ವಿಪತ್ತು, ಸರ್ಕಾರ ಏನು ಮಾಡುತ್ತದೆ ನೋಡೋಣ: ರಾಹುಲ್

ಸಿಎಂ ಪರಿಹಾರ ನಿಧಿಗೆ ದೇಣಿಗೆ ಕೇಳಿದ ಪಿಣರಾಯಿ ವಿಜಯನ್

ಭೂಕುಸಿತದಿಂದ ಸಂತ್ರಸ್ತರ ನೆರವಿಗೆ ಎಲ್ಲರೂ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ (ಸಿಎಂಡಿಆರ್‌ಎಫ್) ದೇಣಿಗೆ ನೀಡುವಂತೆ ಸಿಎಂ ಪಿಣರಾಯಿ ವಿಜಯನ್ ಕರೆ ನೀಡಿದ್ದಾರೆ.

ಲುಲು ಗ್ರೂಪ್ ಅಧ್ಯಕ್ಷ ಎಂಎ ಯೂಸುಫ್ ಅಲಿ, ಪ್ರಮುಖ ಕೈಗಾರಿಕೋದ್ಯಮಿ ರವಿ ಪಿಳ್ಳೆ, ಕಲ್ಯಾಣ್ ಜುವೆಲ್ಲರ್ಸ್ ಮಾಲೀಕ ಕಲ್ಯಾಣ ರಾಮನ್, ಕೆಎಸ್ಎಫ್‌ಇ ಮತ್ತು ಅದಾನಿ ಗ್ರೂಪ್ ತಲಾ 5 ಕೋಟಿ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿವೆ ಎಂದು ಅವರು ಹೇಳಿದರು.

ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಬುಧವಾರ ಘೋಷಿಸಿದ್ದ 5 ಕೋಟಿ ರೂ.ಗಳ ನೆರವನ್ನು ಇಂದು ನಮಗೆ ಹಸ್ತಾಂತರಿಸಲಾಗಿದೆ ಎಂದು ಸಿಎಂ ಹೇಳಿದರು.

Update: 2024-08-01 05:41 GMT

Linked news