ಮೃತರ ಕುಟುಂಬಕ್ಕೆ ಬಿಸಿಸಿಐ ತಲಾ 1 ಕೋಟಿ ರೂ. ನೀಡಲಿ: ಬಿ.ಕೆ. ಹರಿಪ್ರಸಾದ್
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ(ಜೂ.4) ದಂದು ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಕುಟುಂಬದವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಲಾ 1 ಕೋಟಿ ರೂ. ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 35 ಸಾವಿರ ಜನರು ಕೂರುವಷ್ಟು ಸಾಮರ್ಥ್ಯವಿದೆ. ಆದರೆ ಕ್ರೀಡಾಂಗಣದ ಬಳಿ ಎರಡು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಸೇರಿದ್ದರು. ದುರಂತಕ್ಕೆ ಯಾರು ಕಾರಣವೆಂದು ಸರ್ಕಾರ ತಿಳಿಸಬೇಕು ಎಂದರು.
Update: 2025-06-05 11:43 GMT