ಕಾಲ್ತುಳಿತ ದುರಂತ: ಸಚಿವ ಸಂಪುಟ ಸಭೆಯಲ್ಲಿ ಚರ್ಚೆ

 

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಕಾಲ್ತುಳಿತ ಪ್ರಕರಣದ ಬಗ್ಗೆ ಚರ್ಚೆಯಾಗಿದೆ. ಬುಧವಾರ ನಡೆದ ಘಟನೆಗೆ ಹೊಣೆ ಯಾರು, ಯಾಕಾಗಿ ಈ ದುರ್ಘಟನೆ ನಡೆದಿದೆ ಎಂದು ಚರ್ಚೆ ನಡೆದಿದೆ. ಕ್ರೀಡಾಂಗಣದ ಬಳಿ ನಡೆದ ದುರ್ಘಟನೆ ರಾಜ್ಯ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಷಯ ಹಬ್ಬಿದೆ. ಸಂಭ್ರಮ ಬೇಡ ಎಂದು ಸಲಹೆ ಇದ್ದರು ತರಾತುರಿಯಲ್ಲಿ ಯಾಕೆ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ ಮಾಡಲು ಯಾರಾದರೂ ಒತ್ತಡ ಹಾಕಿದರೆ? ಕರ್ನಾಟಕ ಕ್ರಿಕೆಟ್‌ ಮಂಡಳಿ ಇದಕ್ಕೆ ಹೊಣೆಯೇ ಅಥವಾ ಭದ್ರತಾ ವೈಫಲ್ಯವೇ ಎಂದು ಹಲವು ಸಚಿವರು ಪ್ರಶ್ನಿಸಿದ್ದಾರೆ.

Update: 2025-06-05 10:14 GMT

Linked news