ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವಕ್ಕೆ ಮಳೆ ಅಡ್ಡಿ

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವ ಆಚರಿಸಲು ಸಕಲ ಸಿದ್ದತೆ ನಡೆಸಿ ಅಭಿಮಾನಿಗಳಿಗೆ ಉಚಿತ ಪ್ರವೇಶ ನೀಡಿತ್ತು. ಆದರೆ ಕಾರ್ಯಕ್ರಮ ಆರಂಭಿಸುವ ಮೊದಲೇ ಮಳೆ ಸರಿಯಲು ಆರಂಭಿಸಿದ್ದು ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಆದುಷ್ಟು ಬೇಗ ಮಳೆ ನಿಂತು ಕಾರ್ಯಕ್ರಮ ಆರಂಭಿಸಬಹುದು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ವಿಧಾನಸೌಧದ ಬಳಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿಯೂ ಸಹ ಮಳೆ ಸುರಿದು ಕಾರ್ಯಕ್ರಮ ನಿಗದಿತ ಅವಧಿಗೂ ಮೊದಲೇ ಮುಕ್ತಾಯಗೊಂಡಿತ್ತು.


  

Update: 2025-06-04 13:19 GMT

Linked news